ಅನಾಥ ಮಹಿಳೆ ಶವದ ಅಂತ್ಯಸಂಸ್ಕಾರ ನಡೆಸಿ, ಮಾನವೀಯತೆ ಮೆರೆದ ಕಾರ್ಯಕರ್ತರು! - ಭಜರಂಗದಳ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17509249-thumbnail-3x2-bk.jpg)
ತುಮಕೂರು: ಅನಾರೋಗ್ಯದಿಂದ ಮೃತಪಟ್ಟಿದ್ದ ಅನಾಥ ಮಹಿಳೆಯ ಶವದ ಅಂತ್ಯಸಂಸ್ಕಾರವನ್ನು ತುಮಕೂರಿನ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ತುಮಕೂರು ತಾಲೂಕಿನ ಹೆಗ್ಗೆರೆ ಗೊಲ್ಲಹಳ್ಳಿ ಜನತಾ ಕಾಲೋನಿಯಲ್ಲಿ ದಲಿತ ಸಮುದಾಯದ ಅನಾಥ ಮಹಿಳೆಯೂ ಬಹಳ ದಿನಗಳಿಂದ ಗುಡಿಸಿಲಿನಲ್ಲಿ ವಾಸವಿದ್ದರು.
ಮೃತ ಈಕೆಗೆ ಯಾರೂ ಸಂಬಂಧಿಕರು ಇರಲಿಲ್ಲ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಬಜರಂಗದಳ ಹಾಗೂ ವಿಎಚ್ಪಿ ಕಾರ್ಯಕರ್ತರು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.
ಇದನ್ನೂಓದಿ:ಬೆಂಗಳೂರು ಅಪಘಾತ ಪ್ರಕರಣ: ’ಭಯದಿಂದ ಹೀಗೆ ಮಾಡಿದ್ದೇ.. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಬಿಡಲಿಲ್ಲ’
Last Updated : Feb 3, 2023, 8:39 PM IST