ಕರೋನಾ ವೈರಸ್ ಆತಂಕದಲ್ಲೂ ಜಾತ್ರೆ ನಡೆಸಿದ ಚಿಕ್ಕೋಡಿನ ಜನತೆ..
ಚಿಕ್ಕೋಡಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರ ಯಾವುದೇ ಸಭೆ ಸಮಾರಂಭ ಜಾತ್ರೆ ನಡೆಸದಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶದ ನಡುವೆಯೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮ ಲಕ್ಷ್ಮೀ ಜಾತ್ರೆಯನ್ನು ಆಚರಿಸಲಾಗಿದೆ. ಜಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದು, ಮಾಸ್ಕ್ ಕೂಡ ಧರಿಸಿರಲಿಲ್ಲ. ಈ ಬಗ್ಗೆ ತಾಲೂಕು ಆಡಳಿತವಾಗಲಿ ಆರೋಗ್ಯ ಇಲಾಖೆಯಾಗಲಿ ಯಾವುದೇ ಕ್ರಮ ಮಾತ್ರ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಆಯೋಜಕರನ್ನ ಕೇಳಿದ್ರೆ, ಸರ್ಕಾರದ ಆದೇಶ ಗೊತ್ತಿದೆ. ಆದರೆ, ಜಾತ್ರೆಯನ್ನ ನಿಲ್ಲಿಸಲು ಆಗಲ್ಲ, ಬದಲಾಗಿ ಜನ ಕಮ್ಮಿ ಸೇರುವ ಹಾಗೆ ನೋಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.