ಗಾಳಿ, ಮಳೆಗೆ ತತ್ತರಿಸಿದ ಮಲೆನಾಡು: ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರ ಆಗ್ರಹ - undefined
🎬 Watch Now: Feature Video
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಶಕುನವಳ್ಳಿ, ಶಂಕರಿಕೊಪ್ಪದಲ್ಲಿ ಬಿರುಗಾಳಿ ಸಮೇತ ಮಳೆಯಾಗಿದ್ದು, ಸಾಕಷ್ಟು ಹಾನಿಯಾಗಿದೆ. ನಿನ್ನೆ ಸಂಜೆ ಬಂದ ಗಾಳಿ- ಮಳೆಗೆ ತೆಂಗಿನಮರ, ಮಾವಿನಮರ ಮುರಿದು ಬಿದ್ದಿವೆ. ಜೋರಾದ ಗಾಳಿಗೆ ವಿದ್ಯುತ್ ಕಂಬವೊಂದು ಮನೆಯ ಮೇಲೆ ಬಿದ್ದಿದ್ದು, ಗ್ರಾಮದ ವಿಶ್ವನಾಥ್ ನಾಡಿಗೇರ್ ಎಂಬುವರ ಮನೆಯ ಶೀಟ್ಗಳು ಹಾರಿ ಹೋಗಿವೆ. ಕೆಲವೊಂದು ಶೀಟ್ಗಳು ಕಾರಿನ ಮೇಲೆ ಬಿದ್ದು ಕಾರು ಸಹ ನಜ್ಜುಗುಜ್ಜಾಗಿದೆ. ವಿಪರೀತ ಗಾಳಿ, ಮಳೆಗೆ ಗ್ರಾಮದಲ್ಲಿ ಸಾಕಷ್ಟು ಹಾನಿ ಉಂಟಾಗಿದ್ದು, ಕಂದಾಯ ಇಲಾಖೆ ತಕ್ಷಣ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.