thumbnail

By

Published : Aug 11, 2021, 12:44 PM IST

ETV Bharat / Videos

ಜೀವ ಭಯದಲ್ಲೇ ಹೆಗಲ ಮೇಲೆ ಶವ ಹೊತ್ತು ನದಿ ದಾಟಿದ ಗ್ರಾಮಸ್ಥರು: ವಿಡಿಯೋ

ಗಯಾ: ಮೃತ ವ್ಯಕ್ತಿಯ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಜೀವಭಯದಲ್ಲೇ ನದಿ ದಾಟಿ ಹೋಗುತ್ತಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಟಿಂಕೋಪಾ ಗ್ರಾಮದಲ್ಲಿ ಕಂಡುಬಂದಿದೆ. ಇತ್ತೀಚೆಗೆ ನಿಧನರಾದ ಮುಷ್ತಾಕ್ ಅಹ್ಮದ್ (50) ಎಂಬುವರ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಗ್ರಾಮಸ್ಥರು ಪರದಾಡಿದ್ದಾರೆ. ಸ್ಮಶಾನ ಭೂಮಿ ತಲುಪಲು ನದಿ ದಾಟಿ ಸಾಗಬೇಕು. ಆದರೆ ಯಾವುದೇ ಸೇತುವೆ ಇಲ್ಲದ ಹಿನ್ನೆಲೆ ನದಿಯಲ್ಲೇ ಗ್ರಾಮಸ್ಥರು ಸರ್ಕಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನದಿಗೆ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.