ಎರಡು ವಾಹನಗಳ ನಡುವೆ ಡಿಕ್ಕಿ... ಡ್ರೈವರ್​-ಕ್ಲೀನರ್​ ಸಜೀವ ದಹನ​​​​!

By

Published : Apr 15, 2021, 3:04 PM IST

thumbnail
ರಂಗಾರೆಡ್ಡಿ(ತೆಲಂಗಾಣ): ಟ್ರಕ್​​ ಹಾಗೂ ಇನ್ನೊಂದು ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ. ತೆಲಂಗಾಣದ ರಂಗಾರೆಡ್ಡಿಯ ಔಟರ್​ ರಿಂಗ್​ ರೋಡ್​​ನಲ್ಲಿ ಈ ಘಟನೆ ನಡೆದಿದ್ದು, ವಾಹನಕ್ಕೆ ಬೆಂಕಿ ಹೊತ್ತಿಕೊಂಡಿರುವ ಕಾರಣ ಇಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನ ಡ್ರೈವರ್​ ಸೂರಜ್​ ಹಾಗೂ ಕ್ಲೀನರ್​​ ಮೃತ್ಯುಂಜಯಲು ಎಂದು ಗುರುತಿಸಲಾಗಿದೆ. ಅಪಘಾತವಾಗುತ್ತಿದ್ದಂತೆ ಅವರು ಟ್ರಕ್​ನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಸಜೀವವಾಗಿ ದಹನವಾಗಿದ್ದಾರೆ. ಟ್ರಕ್​ ಆಂಧ್ರ ಪ್ರದೇಶದಿಂದ ಮುಂಬೈಗೆ ತೆರಳುತ್ತಿತ್ತು ಎನ್ನಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.