ತಿರುಪತಿಗೆ ಶ್ರೀಲಂಕಾ ಪ್ರಧಾನಿ ಭೇಟಿ... ವೆಂಕಟೇಶ್ವರನ ದರ್ಶನ ಪಡೆಯಲಿರುವ ರಾಜಪಕ್ಸೆ
ತಿರುಮಲ: ಐದು ದಿನಗಳ ಭಾರತ ಭೇಟಿಯಲ್ಲಿರುವ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ, ಸೋಮವಾರ ಆಂಧ್ರ ಪ್ರದೇಶದ ತಿರುಪತಿಗೆ ಆಗಮಿಸಿದ್ದು, ಇವರನ್ನ ಸಾಂಸ್ಕೃತಿಕ ನೃತ್ಯದ ಮೂಲಕ ಸ್ವಾಗತ ಕೋರಲಾಯಿತು. ಮಂಗಳವಾರ ಬೆಳಗ್ಗೆ ತಿರುಪತಿಯ ಬೆಟ್ಟದ ಮೇಲೆ ನೆಲೆಸಿರುವ ವೆಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆಯಲಿದ್ದಾರೆ.