ನಾಲ್ಕೂವರೆ ಎಕರೆಯಲ್ಲಿ ಅರಳಿತು ಶರದ್​ ಪವಾರ್​ ಚಿತ್ರ... ರೈತನ ಅಭಿಮಾನಕ್ಕೆ ಮನಸೋತ ಎನ್​ಸಿಪಿ! - Sharad pawar picture created in crop,

🎬 Watch Now: Feature Video

thumbnail

By

Published : Dec 16, 2019, 8:35 PM IST

ಮಹಾರಾಷ್ಟ್ರದ ಎನ್​ಸಿಪಿ ಅಧ್ಯಕ್ಷ ಶರದ್​ಪವಾರ್​ ಮೇಲಿನ ಅಭಿಮಾನವನ್ನು ರೈತನೋರ್ವ ಪವಾರ್​ ಚಿತ್ರವನ್ನು ತನ್ನ ಜಮೀನಿನಲ್ಲಿ ಬಿಡಿಸುವ ಮೂಲಕ ವ್ಯಕ್ತಪಡಿಸಿದ್ದಾನೆ. ಮಹಾರಾಷ್ಟ್ರದ ಉಸ್ಮಾನಾಬಾದ್​ ಜಿಲ್ಲೆಯ ನಿಪಾನಿ ಗ್ರಾಮದ ಮಂಗೇಶ್​ ನಿಪಾನಿಕರ್​ ತನ್ನ ನಾಲ್ಕೂವರೆ ಎಕರೆಯಲ್ಲಿ ಬೆಳೆದ ಬೆಳೆಯಲ್ಲಿ ಶರದ್​ ಪವಾರ್​ ಅವರ ಚಿತ್ರವನ್ನು ಅರಳಿಸಿದ್ದಾನೆ. ಇನ್ನು ಈ ಚಿತ್ರವನ್ನು ರಚಿಸಲು ಕ್ರಮ ಬದ್ಧವಾಗಿ 200 ಕೆಜಿ ಆಲೂಗಡ್ಡೆ, 300 ಕೆಜಿ ಮೆಂತೆ, 40 ಕೆಜಿ ಜೋಳ, 40 ಕೆಜಿ ಗೋಧಿ ಬೀಜಗಳನ್ನು ಬಿತ್ತಿದ್ದರು. ಮೊಳಕೆ ಒಡೆದ ನಂತರ ಶರದ್​ ಪವಾರ್​ ಚಿತ್ರ ಅರಳಿದೆ. ಇದಕ್ಕಾಗಿ 15 ದಿನಗಳ ಕಾಲ ರೈತ ಮಂಗೇಶ್​ ಶ್ರಮಿಸಿದ್ದು, ಅದಕ್ಕೆ ತಕ್ಕಂತೆ ಪ್ರತಿಫಲ ಸಿಕ್ಕಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರೈತನ ಈ ಕಲೆಗೆ ಎನ್​ಸಿಪಿ ನಾಯಕರು ಮನಸೋತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.