thumbnail

ಹೆಚ್​ಪಿಸಿಎಲ್ ರಿಫೈನರಿ ಎಸ್​ಹೆಚ್​ಯು ಘಟಕದಲ್ಲಿ ದಟ್ಟ ಹೊಗೆ... ಬೆಚ್ಚಿಬಿದ್ದ ವಿಶಾಖಪಟ್ಟಣ ಜನ

By

Published : May 21, 2020, 5:56 PM IST

ವಿಶಾಖಪಟ್ಟಣ (ಆಂಧ್ರಪ್ರದೇಶ): ಇತ್ತೀಚೆಗಷ್ಟೇ ಎಲ್​ಜಿ ಕಂಪನಿಯಿಂದ ಸೋರಿಕೆಯಾಗಿ ಅನಿಲ ದುರಂತದಿಂದ ಆಘಾತಕ್ಕೊಳಗಾಗಿದ್ದ ವಿಶಾಖಪಟ್ಟಣದಲ್ಲಿ ಇಂದು ಮತ್ತೊಂದು ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ವಿಶಾಖಪಟ್ಟಣದ ಹೆಚ್​ಪಿಸಿಎಲ್ ರಿಫೈನರಿ ಎಸ್​ಹೆಚ್​ಯು ಘಟಕವನ್ನು ಇಂದು ತೆರೆದಾಗ ದಟ್ಟವಾದ ಹೊಗೆ ಕಾಣಿಸಿಕೊಂಡಿತ್ತು. ಲಾಕ್​ಡೌನ್​ ಅವಧಿಯಲ್ಲಿ ಬಂದ್ ಆಗಿದ್ದ ಈ ಘಟಕವನ್ನು ಪುನಃ ತೆರೆದಾಗ ಈ ರೀತಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಕಂಡು ಕಂಗಾಲಾದ ಸ್ಥಳೀಯರು ತಮಗೆ ಮತ್ತೇನೂ ಕಾದಿದೆಯೋ ಎಂದು ಭಯಭೀತರಾಗಿದ್ದರು. ಬಳಿಕ ಹೊಗೆ ಕಡಿಮೆಯಾದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.