ಕುಡಿದ ಮತ್ತಿನಲ್ಲೇ ಜನರ ಬಳಿ ವಾಗ್ವಾದ... ಮತ ಹಾಕುವಂತೆ ಅಂಗಲಾಚಿದ ಈ ಅಭ್ಯರ್ಥಿ ಪಡಿಪಾಟಲು ನೋಡಿ! - ವೈಎಸ್​ಆರ್​ ಅಭ್ಯರ್ಥಿ

🎬 Watch Now: Feature Video

thumbnail

By

Published : Apr 1, 2019, 2:25 PM IST

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಗೂಡೂರಿನಲ್ಲಿ ವೈಎಸ್​​ಆರ್​ ಕಾಂಗ್ರೆಸ್​ ಅಭ್ಯರ್ಥಿ, ಮಾಜಿ ಎಂಪಿ ವರಪ್ರಸಾದ್​ ಕುಡಿದ ಮತ್ತಿನಲ್ಲಿ ಜನರ ಬಳಿ ವಾಗ್ವಾದಕ್ಕಿಳಿದಿರುವ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಬೆಳ್ಳಂಬೆಳಗ್ಗೆ ಕುಡಿದ ಮತ್ತಿನಲ್ಲೇ ವೋಟ್​ ಕೇಳಲು ಜನರ ಬಳಿ ತೆರಳಿದ್ದರು ಈ ಮಾಜಿ ಎಂಪಿ. ಈ ವೇಳೆ ಜನರು ನಿಮ್ಮಿಂದ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ. ಮತದಾರರು ಹೀಗೆ ಹೇಳುತ್ತಿದ್ದಂತೆ ವೈಎಸ್​ಆರ್​ ಅಭ್ಯರ್ಥಿ ಫುಲ್​ ಗರಂ ಆಗಿ ಜನರ ಮೇಲೆ ರೇಗಿದರು. ಅಭಿವೃದ್ಧಿಗಾಗಿ ನಾನು ಕೋಟಿ-ಕೋಟಿ ಹಣ ಖರ್ಚು ಮಾಡಿದ್ದೇನೆ ಅಂತಾ ಅವಲತ್ತುಕೊಂಡಿದ್ದಾರೆ. ಈ ಬಾರಿಯಾದರೂ ನನಗೆ ವೋಟು ಹಾಕಿ ಎಂದು ಕುಡಿದು ಮತ್ತಿನಲ್ಲೇ ಜನರ ಕೈ ಹಿಡಿದು ಬೇಡಿಕೊಂಡಿದ್ದಾರೆ. ಈ ಎಲ್ಲಾ ರಂಪಾಟ ರಸ್ತೆಯಲ್ಲೇ ನಡೆದಿದ್ದು, ಈ ದೃಶ್ಯಗಳೀಗ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡು ಮಾಡುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.