ETV Bharat / sports

ಸಿರಾಜ್​, ಬುಮ್ರಾ ಫಿಟ್​ ಆಗಿದ್ದರೂ ಚಾಂಪಿಯನ್ಸ್​ ಟ್ರೋಫಿಯಿಂದ ಕೈಬಿಟ್ಟಿದ್ದೇಕೆ? - MOHAMMED SIRAJ

ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಮೊಹಮ್ಮದ್​ ಸಿರಾಜ್​ ಅವರನ್ನು ಆಯ್ಕೆ ಮಾಡದಿರಲು ಕಾರಣ ಏನು ಎಂದು ಟೀಮ್​ ಇಂಡಿಯಾ ನಾಯಕ ತಿಳಿಸಿದ್ದಾರೆ.

CHAMPIONS TROPHY 2025 SIRAJ  CHAMPIONS TROPHY INDIA SQUAD  ಮೊಹಮ್ಮದ್​ ಸಿರಾಜ್​ JASPRIT BUMRAH
Mohammed Siraj (AP)
author img

By ETV Bharat Sports Team

Published : Feb 15, 2025, 2:17 PM IST

Updated : Feb 15, 2025, 2:35 PM IST

Mohammed Siraj Champions Trophy: ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮುಂದಿನ ವಾರ ಅಂದರೆ ಫೆಬ್ರವರಿ 19 ರಿಂದ 9ನೇ ಆವೃತ್ತಿ ಶುರುವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಸೇರಿ ಒಟ್ಟು 8 ತಂಡಗಳು ಭಾಗಿಯಾಗುತ್ತಿವೆ. ಆದರೆ ಈ ಬಾರಿ ಜಸ್ಪ್ರಿತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್​ ಇಲ್ಲದೆ ಭಾರತ ತಂಡ ಕಣಕ್ಕಿಳಿಯುತ್ತಿದೆ.

ತಂಡದ ಪ್ರಮುಖ ಬೌಲರ್​ ಆಗಿದ್ದ ಬುಮ್ರಾ ಬಾರ್ಡರ್​ ಗವಾಸ್ಕರ್​​ ಟೆಸ್ಟ್​ ಸರಣಿಯಲ್ಲಿ ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ಇಂಗ್ಲೆಂಡ್​ ವಿರುದ್ಧ ನಡೆದ ಏಕದಿನ ಮತ್ತು ಟಿ20 ಸರಣಿಯಿಂದಲೂ ಹೊರಗುಳಿದಿದ್ದರು. ಸದ್ಯ ಗಾಯದಿಂದ ಚೇತರಿಸಿಕೊಂಡು ಫಿಟ್​ ಆಗಿದ್ದರು ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಮತ್ತೊಂದೆಡೆ ಅನುಭವಿ ಆಟಗಾರ ಮೊಹಮ್ಮದ್​ ಸಿರಾಜ್​ ಅವರನ್ನೂ ಆಯ್ಕೆ ಮಾಡದೆ ಇರುವುದು ಅಚ್ಚರಿಗೆ ಕಾರಣವಾಗಿದೆ.

CHAMPIONS TROPHY 2025 SIRAJ  CHAMPIONS TROPHY INDIA SQUAD  ಮೊಹಮ್ಮದ್​ ಸಿರಾಜ್​ JASPRIT BUMRAH
Mohammed Siraj (AP)

ಬುಮ್ರಾ ಆಯ್ಕೆ ಮಾಡದಿರಲು ಕಾರಣ ಏನು ? ಗಾಯಕ್ಕೆ ತುತ್ತಾಗಿ ಚೇತರಿಸಿಕೊಂಡಿದ್ದ ಬುಮ್ರಾ ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೂ ಮುನ್ನ ಚೇತರಿಸಿಕೊಂಡಿದ್ದಾರೆ ಎಂದು ಮೆಡಿಕಲ್​ ರಿಪೋರ್ಟ್​ ಬಂದಿದ್ದರು ಅವರನ್ನು ಕೈಬಿಡಲಾಗಿದೆ. ಕಾರಣ ಬುಮ್ರಾ ಚೇತರಿಸಿಕೊಂಡಿದ್ದರು ಅವರು ಬೌಲಿಂಗ್​ ಮಾಡುವ ಮತ್ತು ಟೂರ್ನಿಯ ಎಲ್ಲಾ ಪಂದ್ಯಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮುಂಬರುವ ಪಂದ್ಯಾವಳಿಗಳನ್ನು ಗಮನದಲ್ಲಿಟ್ಟು ಕನಿಷ್ಠ 5 ವಾರಗಳ ಕಾಲ ಅವರನ್ನು ಕೆಲಸದ ಹೊರೆಯಿಂದ ಹೊರಗಿಡಲು ತೀರ್ಮಾನಿಸಲಾಗಿದೆ. ಇದೇ ಕಾರಣಕ್ಕೆ ಆಯ್ಕೆ ಸಮಿತಿ ಕೂಡ ರಿಸ್ಕ್​ ತೆದುಕೊಳ್ಳಲು ಮುಂದಾಗಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.

CHAMPIONS TROPHY 2025 SIRAJ  CHAMPIONS TROPHY INDIA SQUAD  ಮೊಹಮ್ಮದ್​ ಸಿರಾಜ್​ JASPRIT BUMRAH
Jasprit Bumrah (ANI)

ಸಿರಾಜ್​ ಕೈ ಬಿಡಲು ಕಾರಣ ಏನು ? ಮತ್ತೊಂದೆಡೆ ತಂಡ ಬದಲಾವಣೆಗೆ ಫೆ.12ರ ರವೆಗೆ ಸಮಯವಿತ್ತು. ಈ ವೇಳೆ ಬುಮ್ರಾ ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಸ್ಥಾನಕ್ಕೆ ಅನುಭವೆ ವೇಗಿ ಮೊಹಮ್ಮದ್​ ಸಿರಾಜ್​ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಯುವ ವೇಗಿ ಹರ್ಷಿತ್​ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಸಿರಾಜ್​ ಅವರನ್ನು ಹೊರಗಿಡಲು ಕಾರಣ ಏನು ಎಂದು ಹಲವಾರು ಕ್ರಿಕೆಟಿಗರು ಪ್ರಶ್ನೆ ಎತ್ತಿದ್ದಾರೆ.

ರೋಹಿತ್​ ಸ್ಪಷ್ಟನೆ : ನಾಯಕ ರೋಹಿತ್​ ಶರ್ಮಾ ಇದಕ್ಕೆ ಉತ್ತರ ನೀಡಿದ್ದಾರೆ. ವಾಸ್ತವವಾಗಿ ರಾಣಾಗೆ ಹೋಲಿಕೆ ಮಾಡಿದ್ರೆ ಸಿರಾಜ್​ ಹೆಚ್ಚು ಅನುಭವ ಹೊಂದಿದ್ದಾರೆ. ಆದರೆ ಸಿರಾಜ್​ ಕೇವಲ ಹೊಸ ಬೌಲ್​ನೊಂದಿಗೆ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಾರೆ.

ಬಳಿಕ ಬೌಲ್​ ಶೈನ್​ ಕಳೆದುಕೊಳ್ಳುತ್ತಿದ್ದಂತೆ ದುಬಾರಿ ಬೌಲರ್​ ಆಗಿ ಬಿಡುತ್ತಾರೆ ಎಂದು ಮಾಧ್ಯಮಗೋಷ್ಟಿಯಲ್ಲಿ ಸ್ಪಷನೆ ನೀಡಿದ್ದಾರೆ. ಮತ್ತೊಂದೆಡೆ ಹರ್ಷಿತ್​ ರಾಣಾ ಚೆಂಡು ಹಳೆಯದಾದಂತೆ ಪರಿಣಾಮಕಾರಿಯಾಗಿ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹಲವು ಪಂದ್ಯಗಳಲ್ಲಿ ಇದನ್ನು ಸಾಬೀತು ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ಆಸೀಸ್​ಗೆ ಭಾರೀ ಮುಖಭಂಗ; ದಾಖಲೆ ಬರೆದ ಲಂಕಾ

Mohammed Siraj Champions Trophy: ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮುಂದಿನ ವಾರ ಅಂದರೆ ಫೆಬ್ರವರಿ 19 ರಿಂದ 9ನೇ ಆವೃತ್ತಿ ಶುರುವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಸೇರಿ ಒಟ್ಟು 8 ತಂಡಗಳು ಭಾಗಿಯಾಗುತ್ತಿವೆ. ಆದರೆ ಈ ಬಾರಿ ಜಸ್ಪ್ರಿತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್​ ಇಲ್ಲದೆ ಭಾರತ ತಂಡ ಕಣಕ್ಕಿಳಿಯುತ್ತಿದೆ.

ತಂಡದ ಪ್ರಮುಖ ಬೌಲರ್​ ಆಗಿದ್ದ ಬುಮ್ರಾ ಬಾರ್ಡರ್​ ಗವಾಸ್ಕರ್​​ ಟೆಸ್ಟ್​ ಸರಣಿಯಲ್ಲಿ ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ಇಂಗ್ಲೆಂಡ್​ ವಿರುದ್ಧ ನಡೆದ ಏಕದಿನ ಮತ್ತು ಟಿ20 ಸರಣಿಯಿಂದಲೂ ಹೊರಗುಳಿದಿದ್ದರು. ಸದ್ಯ ಗಾಯದಿಂದ ಚೇತರಿಸಿಕೊಂಡು ಫಿಟ್​ ಆಗಿದ್ದರು ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಮತ್ತೊಂದೆಡೆ ಅನುಭವಿ ಆಟಗಾರ ಮೊಹಮ್ಮದ್​ ಸಿರಾಜ್​ ಅವರನ್ನೂ ಆಯ್ಕೆ ಮಾಡದೆ ಇರುವುದು ಅಚ್ಚರಿಗೆ ಕಾರಣವಾಗಿದೆ.

CHAMPIONS TROPHY 2025 SIRAJ  CHAMPIONS TROPHY INDIA SQUAD  ಮೊಹಮ್ಮದ್​ ಸಿರಾಜ್​ JASPRIT BUMRAH
Mohammed Siraj (AP)

ಬುಮ್ರಾ ಆಯ್ಕೆ ಮಾಡದಿರಲು ಕಾರಣ ಏನು ? ಗಾಯಕ್ಕೆ ತುತ್ತಾಗಿ ಚೇತರಿಸಿಕೊಂಡಿದ್ದ ಬುಮ್ರಾ ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೂ ಮುನ್ನ ಚೇತರಿಸಿಕೊಂಡಿದ್ದಾರೆ ಎಂದು ಮೆಡಿಕಲ್​ ರಿಪೋರ್ಟ್​ ಬಂದಿದ್ದರು ಅವರನ್ನು ಕೈಬಿಡಲಾಗಿದೆ. ಕಾರಣ ಬುಮ್ರಾ ಚೇತರಿಸಿಕೊಂಡಿದ್ದರು ಅವರು ಬೌಲಿಂಗ್​ ಮಾಡುವ ಮತ್ತು ಟೂರ್ನಿಯ ಎಲ್ಲಾ ಪಂದ್ಯಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮುಂಬರುವ ಪಂದ್ಯಾವಳಿಗಳನ್ನು ಗಮನದಲ್ಲಿಟ್ಟು ಕನಿಷ್ಠ 5 ವಾರಗಳ ಕಾಲ ಅವರನ್ನು ಕೆಲಸದ ಹೊರೆಯಿಂದ ಹೊರಗಿಡಲು ತೀರ್ಮಾನಿಸಲಾಗಿದೆ. ಇದೇ ಕಾರಣಕ್ಕೆ ಆಯ್ಕೆ ಸಮಿತಿ ಕೂಡ ರಿಸ್ಕ್​ ತೆದುಕೊಳ್ಳಲು ಮುಂದಾಗಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.

CHAMPIONS TROPHY 2025 SIRAJ  CHAMPIONS TROPHY INDIA SQUAD  ಮೊಹಮ್ಮದ್​ ಸಿರಾಜ್​ JASPRIT BUMRAH
Jasprit Bumrah (ANI)

ಸಿರಾಜ್​ ಕೈ ಬಿಡಲು ಕಾರಣ ಏನು ? ಮತ್ತೊಂದೆಡೆ ತಂಡ ಬದಲಾವಣೆಗೆ ಫೆ.12ರ ರವೆಗೆ ಸಮಯವಿತ್ತು. ಈ ವೇಳೆ ಬುಮ್ರಾ ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಸ್ಥಾನಕ್ಕೆ ಅನುಭವೆ ವೇಗಿ ಮೊಹಮ್ಮದ್​ ಸಿರಾಜ್​ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಯುವ ವೇಗಿ ಹರ್ಷಿತ್​ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಸಿರಾಜ್​ ಅವರನ್ನು ಹೊರಗಿಡಲು ಕಾರಣ ಏನು ಎಂದು ಹಲವಾರು ಕ್ರಿಕೆಟಿಗರು ಪ್ರಶ್ನೆ ಎತ್ತಿದ್ದಾರೆ.

ರೋಹಿತ್​ ಸ್ಪಷ್ಟನೆ : ನಾಯಕ ರೋಹಿತ್​ ಶರ್ಮಾ ಇದಕ್ಕೆ ಉತ್ತರ ನೀಡಿದ್ದಾರೆ. ವಾಸ್ತವವಾಗಿ ರಾಣಾಗೆ ಹೋಲಿಕೆ ಮಾಡಿದ್ರೆ ಸಿರಾಜ್​ ಹೆಚ್ಚು ಅನುಭವ ಹೊಂದಿದ್ದಾರೆ. ಆದರೆ ಸಿರಾಜ್​ ಕೇವಲ ಹೊಸ ಬೌಲ್​ನೊಂದಿಗೆ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಾರೆ.

ಬಳಿಕ ಬೌಲ್​ ಶೈನ್​ ಕಳೆದುಕೊಳ್ಳುತ್ತಿದ್ದಂತೆ ದುಬಾರಿ ಬೌಲರ್​ ಆಗಿ ಬಿಡುತ್ತಾರೆ ಎಂದು ಮಾಧ್ಯಮಗೋಷ್ಟಿಯಲ್ಲಿ ಸ್ಪಷನೆ ನೀಡಿದ್ದಾರೆ. ಮತ್ತೊಂದೆಡೆ ಹರ್ಷಿತ್​ ರಾಣಾ ಚೆಂಡು ಹಳೆಯದಾದಂತೆ ಪರಿಣಾಮಕಾರಿಯಾಗಿ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹಲವು ಪಂದ್ಯಗಳಲ್ಲಿ ಇದನ್ನು ಸಾಬೀತು ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ಆಸೀಸ್​ಗೆ ಭಾರೀ ಮುಖಭಂಗ; ದಾಖಲೆ ಬರೆದ ಲಂಕಾ

Last Updated : Feb 15, 2025, 2:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.