ETV Bharat / bharat

ಅಮೃತ್​ಸರ್​ಗೆ ಬರಲಿದೆ ಅಕ್ರಮ ವಲಸಿಗರ ಹೊತ್ತ ಮತ್ತೊಂದು US ವಿಮಾನ; ಪಂಜಾಬ್​ ಸಿಎಂ ಹೇಳಿಕೆಗೆ ತಿವಾರಿ ಬೆಂಬಲ - INDIANS DEPORTEES TO AMRITSAR

ಅಮೆರಿಕದಿಂದ ಗಡೀಪಾರಾಗಿರುವ ಅಕ್ರಮ ವಲಸಿಗ ಭಾರತೀಯರನ್ನು ಹೊತ್ತ ಎರಡನೇ ವಿಮಾನ ಅಮೃತ್​ಸರ್​ ವಿಮಾನ ನಿಲ್ದಾಣಕ್ಕೆ ಫೆ. 16ರಂದು ಬಂದಿಳಿಯಲಿದೆ

another-round-of-indians-deportees-set-to-arrive-in-amritsar-on-feb-16
ಅಮೃತ್​ಸರ್​ಗೆ ಬರಲಿದೆ ಅಕ್ರಮ ವಲಸಿಗರ ಹೊತ್ತ ಮತ್ತೊಂದು US ವಿಮಾನ; ಪಂಜಾಬ್​ ಸಿಎಂ ಹೇಳಿಕೆಗೆ ತಿವಾರಿ ಬೆಂಬಲ (ಎಎನ್​ಐ - ಸಾಂದರ್ಭಿಕ ಚಿತ್ರ)
author img

By ETV Bharat Karnataka Team

Published : Feb 15, 2025, 1:27 PM IST

ಚಂಡೀಗಢ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಹೊತ್ತ ಯುದ್ದ ವಿಮಾನದ ಎರಡನೇ ತಂಡ ನಾಳೆ ಅಮೃತ್​ಸರ್​​ಗೆ ಬಂದಿಳಿಯಲಿದೆ. 119 ಪ್ರಯಾಣಿಕರಿರುವ ಸಿ-17 ಗ್ಲೋಬ್‌ಮಾಸ್ಟರ್ 3 ಯುದ್ಧ ವಿಮಾನ ಫೆ. 16ರಂದು ಅಮೃತ್​ಸರ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.

ಫೆ. 5ರಂದು ಕೂಡ 104 ಅಕ್ರಮ ವಲಸಿಗರಿದ್ದ ಯುದ್ಧ ವಿಮಾನ ಇದೇ ಅಮೃತ್​ಸರದ ಶ್ರೀ ಗುರು ರಾಮದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಇದೀಗ ಎರಡನೇ ವಿಮಾನ ಕೂಡ ಅಮೃತ್​ಸರ್​​ಗೆ ಬಂದಿಳಿಯುತ್ತಿರುವ ಹಿನ್ನೆಲೆ ಅಮೃತ್​ಸರ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಕೇಂದ್ರಕ್ಕೆ ಪ್ರಶ್ನಿಸಿದ್ದಾರೆ.

ಭಗವಂತ್​ ಮಾನ್​​ ಪ್ರಶ್ನೆ ಏನು?: ಗಡೀಪಾರಾಗಿರುವ ಅಕ್ರಮ ವಲಸಿಗರನ್ನು ಅಮೃತ್​ ಸರದಲ್ಲಿಯೇ ಇಳಿಸುವ ಮೂಲಕ ಪಂಜಾಬ್ ಸರ್ಕಾರಕ್ಕೆ ಮುಜುಗರ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಅಮೆರಿಕದ ಯುದ್ಧ ವಿಮಾನಗಳು ಪಂಜಾಬ್​ನಲ್ಲಿ ಇಳಿಯುತ್ತಿರುವುದೇಕೆ? ಇದರಿಂದ ಯಾವ ಸಂದೇಶವನ್ನು ನೀವು ಕೊಡುತ್ತಿದ್ದೀರಿ. ಪಂಜಾಬ್​ನಿಂದ ಮಾತ್ರವೇ ಅಮೆರಿಕಕ್ಕೆ ವಲಸಿಗರು ಇದ್ದಾರೆ ಎಂಬ ಸಂದೇಶವನ್ನು ನೀವು ನೀಡುತ್ತಿದ್ದೀರಾ? ವಲಸಿಗರಲ್ಲಿ ಗುಜರಾತ್​, ಹರಿಯಾಣದವರು ಇದ್ದಾರೆ. ಈ ವಿಮಾನವನ್ನು ದೆಹಲಿ ಅಥವಾ ಇನ್ನಿತರ ಕಡೆ ಇಳಿಸಬಹುದು. ಅಮೃತ್​ಸರವನ್ನು ಮಾತ್ರ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಕೇಂದ್ರಕ್ಕೆ ಮಾನ್​ ಪ್ರಶ್ನಿಸಿದ್ದಾರೆ.

ಲಘುವಾಗಿ ಪರಿಗಣಿಸಬೇಡಿ, ಬೆಲೆ ತೆರಬೇಕಾದೀತು: ಮಾನ್​ ಅವರ ಈ ವಾದಕ್ಕೆ ಕಾಂಗ್ರೆಸ್​ ಸಂಸದ ಮನೀಶ್​ ತಿವಾರಿ ಕೂಡ ಬೆಂಬಲ ವ್ಯಕ್ತ ಪಡಿದಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಪಂಜಾಬ್​ ಅನ್ನು ಹಗುರವಾಗಿ ತೆಗೆದುಕೊಂಡು ಮುಜುಗರ ಉಂಟುಮಾಡುವ ಕುರಿತು ಲಘುವಾಗಿ ಪರಿಗಣಿಸಬೇಡಿ. ಇದಕ್ಕೆ ಬೆಲೆ ತೆರಬೇಕಾಗುತ್ತದೆ ಇದು ದೆಹಲಿಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಶಿರೋಮಣಿ ಅಕಾಲಿ ದಳ ನಾಯಕ ಹಾಗೂ ಪಂಜಾಬ್​ ಮಾಜಿ ಸಚಿವ ಗುಲ್ಜಾರ್​ ಸಿಂಗ್​ ರಣಿಕೆ ಕೂಡ ಕೇಂದ್ರ ಪಂಜಾಬ್​ ಅನ್ನು ಗುರಿಯಾಗಿಸುತ್ತಿದ್ದು, ಗಡೀಪಾರಾಗಿರುವ ಭಾರತೀಯರನ್ನು ಅಮೃತ್​ಸರ ವಿಮಾನ ನಿಲ್ದಾಣದಲ್ಲಿ ಇಳಿಸುವುದರ ಹಿಂದೆ ಪಿತೂರಿ ಇದೆ ಎಂದಿದ್ದಾರೆ.

ಪಂಜಾಬ್​ ಅನ್ನು ಯಾವಾಗಲೂ ಅವಮಾನ ಮಾಡುತ್ತಿರುವುದು ದುರಾದೃಷ್ಟಕರ. ಪಂಜಾಬ್​ ಗಡಿ ರಾಜ್ಯವಾಗಿದೆ. ವಿಶೇಷವಾಗಿ ಅಮೃತ್​ಸರ ಗಡಿ ಸಮೀಪದಲ್ಲೇ ಇದೆ. ಇಲ್ಲಿ ಅಕ್ರಮ ವಲಸಿಗರಿರುವ ವಿಮಾನವನ್ನು ಇಳಿಸುವ ಮೂಲಕ ಪಂಜಾಬ್​ ಅನ್ನು ಅವಮಾನ ಮಾಡುವ ಮತ್ತು ಪಂಜಾಬಿಗರು ಮಾತ್ರ ಅಕ್ರಮ ವಲಸಿಗರು ಎಂದು ಬಿಂಬಸುವ ಪಿತೂರಿಯಾಗಿದೆ. ಈ ವಿಮಾನಗಳು ಬೇರೆ ಎಲ್ಲಾದರೂ ಇಳಿಯಬಹುದು. ನಾವು ಅಮೃತ್​ಸರದಿಂದ ಅಂತಾರಾಷ್ಟ್ರೀಯ ವಿಮಾನಗಳ ಆರಂಭಕ್ಕೆ ಬೇಡಿಕೆ ಇಟ್ಟಿದ್ದೇವೆ. ಆದರೆ, ಇದಕ್ಕೆ ಕೇಂದ್ರ ಒಪ್ಪಿಗೆ ನೀಡಿಲ್ಲ. ಆದರೆ, ಇದೀಗ ವಿದೇಶಿ ವಿಮಾನಗಳು ಅಮೃತ್​ಸರಕ್ಕೆ ಬಂದಿಳಿಯುತ್ತಿವೆ. ಇದು ನಮ್ಮನ್ನು ಅವಮಾನ ಮಾಡುವ ಉದ್ದೇಶ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತಿಭಟನಾನಿರತ ರೈತರು - ಕೇಂದ್ರದ ನಡುವೆ ಸೌಹಾರ್ದಯುತ ಸಭೆ: ಫೆ.22ಕ್ಕೆ ಮುಂದಿನ ಸುತ್ತಿನ ಮಾತುಕತೆ

ಇದನ್ನೂ ಓದಿ: ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ 2 ದಿನಗಳ ಭಾರತ ಭೇಟಿ: ತಾಜ್​ ಮಹಲ್​ ವೀಕ್ಷಿಸಲಿರುವ ಬ್ರಿಟನ್​ ಜೋಡಿ

ಚಂಡೀಗಢ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಹೊತ್ತ ಯುದ್ದ ವಿಮಾನದ ಎರಡನೇ ತಂಡ ನಾಳೆ ಅಮೃತ್​ಸರ್​​ಗೆ ಬಂದಿಳಿಯಲಿದೆ. 119 ಪ್ರಯಾಣಿಕರಿರುವ ಸಿ-17 ಗ್ಲೋಬ್‌ಮಾಸ್ಟರ್ 3 ಯುದ್ಧ ವಿಮಾನ ಫೆ. 16ರಂದು ಅಮೃತ್​ಸರ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.

ಫೆ. 5ರಂದು ಕೂಡ 104 ಅಕ್ರಮ ವಲಸಿಗರಿದ್ದ ಯುದ್ಧ ವಿಮಾನ ಇದೇ ಅಮೃತ್​ಸರದ ಶ್ರೀ ಗುರು ರಾಮದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಇದೀಗ ಎರಡನೇ ವಿಮಾನ ಕೂಡ ಅಮೃತ್​ಸರ್​​ಗೆ ಬಂದಿಳಿಯುತ್ತಿರುವ ಹಿನ್ನೆಲೆ ಅಮೃತ್​ಸರ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಕೇಂದ್ರಕ್ಕೆ ಪ್ರಶ್ನಿಸಿದ್ದಾರೆ.

ಭಗವಂತ್​ ಮಾನ್​​ ಪ್ರಶ್ನೆ ಏನು?: ಗಡೀಪಾರಾಗಿರುವ ಅಕ್ರಮ ವಲಸಿಗರನ್ನು ಅಮೃತ್​ ಸರದಲ್ಲಿಯೇ ಇಳಿಸುವ ಮೂಲಕ ಪಂಜಾಬ್ ಸರ್ಕಾರಕ್ಕೆ ಮುಜುಗರ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಅಮೆರಿಕದ ಯುದ್ಧ ವಿಮಾನಗಳು ಪಂಜಾಬ್​ನಲ್ಲಿ ಇಳಿಯುತ್ತಿರುವುದೇಕೆ? ಇದರಿಂದ ಯಾವ ಸಂದೇಶವನ್ನು ನೀವು ಕೊಡುತ್ತಿದ್ದೀರಿ. ಪಂಜಾಬ್​ನಿಂದ ಮಾತ್ರವೇ ಅಮೆರಿಕಕ್ಕೆ ವಲಸಿಗರು ಇದ್ದಾರೆ ಎಂಬ ಸಂದೇಶವನ್ನು ನೀವು ನೀಡುತ್ತಿದ್ದೀರಾ? ವಲಸಿಗರಲ್ಲಿ ಗುಜರಾತ್​, ಹರಿಯಾಣದವರು ಇದ್ದಾರೆ. ಈ ವಿಮಾನವನ್ನು ದೆಹಲಿ ಅಥವಾ ಇನ್ನಿತರ ಕಡೆ ಇಳಿಸಬಹುದು. ಅಮೃತ್​ಸರವನ್ನು ಮಾತ್ರ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಕೇಂದ್ರಕ್ಕೆ ಮಾನ್​ ಪ್ರಶ್ನಿಸಿದ್ದಾರೆ.

ಲಘುವಾಗಿ ಪರಿಗಣಿಸಬೇಡಿ, ಬೆಲೆ ತೆರಬೇಕಾದೀತು: ಮಾನ್​ ಅವರ ಈ ವಾದಕ್ಕೆ ಕಾಂಗ್ರೆಸ್​ ಸಂಸದ ಮನೀಶ್​ ತಿವಾರಿ ಕೂಡ ಬೆಂಬಲ ವ್ಯಕ್ತ ಪಡಿದಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಪಂಜಾಬ್​ ಅನ್ನು ಹಗುರವಾಗಿ ತೆಗೆದುಕೊಂಡು ಮುಜುಗರ ಉಂಟುಮಾಡುವ ಕುರಿತು ಲಘುವಾಗಿ ಪರಿಗಣಿಸಬೇಡಿ. ಇದಕ್ಕೆ ಬೆಲೆ ತೆರಬೇಕಾಗುತ್ತದೆ ಇದು ದೆಹಲಿಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಶಿರೋಮಣಿ ಅಕಾಲಿ ದಳ ನಾಯಕ ಹಾಗೂ ಪಂಜಾಬ್​ ಮಾಜಿ ಸಚಿವ ಗುಲ್ಜಾರ್​ ಸಿಂಗ್​ ರಣಿಕೆ ಕೂಡ ಕೇಂದ್ರ ಪಂಜಾಬ್​ ಅನ್ನು ಗುರಿಯಾಗಿಸುತ್ತಿದ್ದು, ಗಡೀಪಾರಾಗಿರುವ ಭಾರತೀಯರನ್ನು ಅಮೃತ್​ಸರ ವಿಮಾನ ನಿಲ್ದಾಣದಲ್ಲಿ ಇಳಿಸುವುದರ ಹಿಂದೆ ಪಿತೂರಿ ಇದೆ ಎಂದಿದ್ದಾರೆ.

ಪಂಜಾಬ್​ ಅನ್ನು ಯಾವಾಗಲೂ ಅವಮಾನ ಮಾಡುತ್ತಿರುವುದು ದುರಾದೃಷ್ಟಕರ. ಪಂಜಾಬ್​ ಗಡಿ ರಾಜ್ಯವಾಗಿದೆ. ವಿಶೇಷವಾಗಿ ಅಮೃತ್​ಸರ ಗಡಿ ಸಮೀಪದಲ್ಲೇ ಇದೆ. ಇಲ್ಲಿ ಅಕ್ರಮ ವಲಸಿಗರಿರುವ ವಿಮಾನವನ್ನು ಇಳಿಸುವ ಮೂಲಕ ಪಂಜಾಬ್​ ಅನ್ನು ಅವಮಾನ ಮಾಡುವ ಮತ್ತು ಪಂಜಾಬಿಗರು ಮಾತ್ರ ಅಕ್ರಮ ವಲಸಿಗರು ಎಂದು ಬಿಂಬಸುವ ಪಿತೂರಿಯಾಗಿದೆ. ಈ ವಿಮಾನಗಳು ಬೇರೆ ಎಲ್ಲಾದರೂ ಇಳಿಯಬಹುದು. ನಾವು ಅಮೃತ್​ಸರದಿಂದ ಅಂತಾರಾಷ್ಟ್ರೀಯ ವಿಮಾನಗಳ ಆರಂಭಕ್ಕೆ ಬೇಡಿಕೆ ಇಟ್ಟಿದ್ದೇವೆ. ಆದರೆ, ಇದಕ್ಕೆ ಕೇಂದ್ರ ಒಪ್ಪಿಗೆ ನೀಡಿಲ್ಲ. ಆದರೆ, ಇದೀಗ ವಿದೇಶಿ ವಿಮಾನಗಳು ಅಮೃತ್​ಸರಕ್ಕೆ ಬಂದಿಳಿಯುತ್ತಿವೆ. ಇದು ನಮ್ಮನ್ನು ಅವಮಾನ ಮಾಡುವ ಉದ್ದೇಶ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತಿಭಟನಾನಿರತ ರೈತರು - ಕೇಂದ್ರದ ನಡುವೆ ಸೌಹಾರ್ದಯುತ ಸಭೆ: ಫೆ.22ಕ್ಕೆ ಮುಂದಿನ ಸುತ್ತಿನ ಮಾತುಕತೆ

ಇದನ್ನೂ ಓದಿ: ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ 2 ದಿನಗಳ ಭಾರತ ಭೇಟಿ: ತಾಜ್​ ಮಹಲ್​ ವೀಕ್ಷಿಸಲಿರುವ ಬ್ರಿಟನ್​ ಜೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.