ಕನಿಗಿರಿಯಲ್ಲಿ ‘ಕಾವೇರಿ’ ಧಗಧಗ... ಪ್ರಯಾಣಿಕರನ್ನ ಕಾಪಾಡಿದ ಬಸ್​ ಚಾಲಕ! - ಪ್ರಕಾಶಂ ಬಸ್​ಗೆ ಬೆಂಕಿ ಸುದ್ದಿ

🎬 Watch Now: Feature Video

thumbnail

By

Published : Nov 27, 2019, 8:01 AM IST

ಖಾಸಗಿ ಬಸ್​ವೊಂದು ಬೆಂಕಿಗೆ ಆಹುತಿಯಾಗಿದೆ. ಬಸ್​ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿದೆ. ಪಾಮೂರಿನಿಂದ ಹೈದರಾಬಾದ್​ಗೆ ಹೋಗುತ್ತಿದ್ದ ಕಾವೇರಿ ಬಸ್​ ಪ್ರಕಾಶಂ ಜಿಲ್ಲೆಯ ಕನಿಗಿರಿಯ ಲಿಂಗಾರೆಡ್ಡಿಪಲ್ಲೆ ಬಳಿ ಬರುತ್ತಿದ್ದಂತೆ ಆಯಲ್​ ಟ್ಯಾಂಕ್​ ಲೀಕ್​ ಆಗಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಬಸ್​ ಚಾಲಕ ಕೂಡಲೇ ಬಸ್​ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಇಳಿದ ಸ್ವಲ್ಪ ಹೊತ್ತಿನಲ್ಲಿ ಬೆಂಕಿ ಬಸ್​ ತುಂಬ ಆವರಿಸಿಕೊಂಡಿತು. ನೋಡ - ನೋಡುತ್ತಿದ್ದಂತೆ ಎಲ್ಲರ ಎದುರೇ ಬಸ್​ ಬೆಂಕಿಗಾಹುತಿ. ಡ್ರೈವರ್​ನ ಸಮಯಪ್ರಜ್ಞೆ ಯಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದ್ರೆ ಪ್ರಯಾಣಿಕರ ಲಕ್ಷಾಂತರ ಮಾಲ್ಯದ ವಸ್ತುಗಳು​ ಸುಟ್ಟು ಕರಕಲಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.