ಧರಿಸುವ ಬಟ್ಟೆಗೂ ಸರ್ಕಾರಕ್ಕೂ ಏನ್​ ಸಂಬಂಧ ಅನ್ನೋದೇ ಅರ್ಥವಾಗ್ತಿಲ್ಲ.. ಹಿಜಾಬ್​ ಬಗ್ಗೆ ಸಿಎಂ ಕೆಸಿಆರ್​ ಮಾತು

By

Published : Mar 15, 2022, 3:19 PM IST

Updated : Feb 3, 2023, 8:19 PM IST

thumbnail

ಹೈದರಾಬಾದ್​(ತೆಲಂಗಾಣ) ದೇಶಾದ್ಯಂತ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್​​​ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಹೈಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿದೆ. ಇದೇ ವಿಚಾರವಾಗಿ ತೆಲಂಗಾಣ ವಿಧಾನಸಭೆಯಲ್ಲಿ ಸಿಎಂ ಕೆಸಿಆರ್​ ಮಾತನಾಡಿದ್ದಾರೆ. 'ಯಾರು ಯಾವ ಬಟ್ಟೆ ಧರಿಸುತ್ತಾರೆಂಬುದಕ್ಕೂ ಸರ್ಕಾರಕ್ಕೂ ಏನು ಸಂಬಂಧ?' ಎಂದು ಪ್ರಶ್ನಿಸಿರುವ ಅವರು, ಹಿಜಾಬ್​ ವಿವಾದ ಉದ್ಭವವಾಗಿದ್ದು ಯಾಕೆ ಎಂದಿದ್ದಾರೆ. ಜನರು ಏನು ಧರಿಸಬೇಕು ಎಂಬುದು ಅವರವರ ವಿವೇಕಕ್ಕೆ ಬಿಟ್ಟಿದ್ದು. ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Last Updated : Feb 3, 2023, 8:19 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.