ETV Bharat / sukhibhava

ಬೇಸಿಗೆ ದಾಹ ತೀರಿಸಲು ಎಳನೀರು ಬೆಸ್ಟ್​; ದೇಹ ನಿರ್ಜಲೀಕರಣದಿಂದ ಪಾರು ಮಾಡುತ್ತೆ ಈ ಪಾನೀಯ

author img

By

Published : Apr 1, 2023, 2:28 PM IST

ಬೇಸಿಗೆಯಲ್ಲಿ ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ ನಿರ್ಜಲೀಕರಣ, ಇದರಿಂದ ಪಾರಾಗಲು ಅತ್ಯುತ್ತಮ ನೈಸರ್ಗಿಕ ಪಾನೀಯ ಆಗಿದೆ.

tender coconut water is best for quenching summer thirst
tender coconut water is best for quenching summer thirst

ನವದೆಹಲಿ: ಬೇಸಿಗೆ ಆರಂಭವಾಗಿದ್ದು, ಈಗಾಗಲೇ ಬಿಸಿಲಿನ ಝಳಕ್ಕೆ ಜನರು ಪರಿತಪಿಸುತ್ತಿದ್ದಾರೆ. ಬಿಸಿ ಅಲೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವ ಹಿನ್ನೆಲೆ ಈ ಸಂಬಂಧ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚಿಸಿದೆ. ಈ ಬೇಸಿಗೆಯ ಬಿಸಿಲಿನ ತಾಪ ಹಲವು ಪ್ರದೇಶದಲ್ಲಿ 40 ರಿಂದ 45 ಡಿಗ್ರಿ ಸೆಲ್ಸಿಯಸ್​ ವರೆಗೂ ದಾಖಲಾಗುತ್ತದೆ. ಭಾರತದಲ್ಲಿ ಅನೇಕ ಮಂದಿ ಈ ಬಿಸಿಲಿನ ಅಲೆಗೆ ಸಾವನ್ನಪ್ಪಿದ ದಾಖಲೆ ಕೂಡ ಇದೆ. ಈ ಹಿನ್ನೆಲೆ ಈಗಾಗಲೇ ಅಗತ್ಯ ಕ್ರಮಕ್ಕೆ ಮುಂದಾಗಲಾಗಿದೆ. ಇದರ ಜೊತೆಗೆ ಪ್ರತಿಯೊಬ್ಬರು ವೈಯಕ್ತಿಕವಾಗಿ ಕಾಳಜಿ ವಹಿಸುವ ಮೂಲಕ ಈ ಬೇಗೆಯಿಂದ ತಪ್ಪಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಬೇಸಿಗೆಯಲ್ಲಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ನಿರ್ಜಲೀಕರಣ ಮತ್ತು ಶಾಖದ ಬಳಲಿಕೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಈ ಋತುಮಾನದಲ್ಲಿ ಗಾಳಿಯಾಡುವ ತೆಳುವಾದ ಬಟ್ಟೆ ಧರಿಸುವುದು, ಹೆಚ್ಚಿನ ನೀರು, ಎಳನೀರು ಮತ್ತಿತರ ಪಾನೀಯ ಸೇವನೆ ಅತ್ಯವಶ್ಯ. ಜೊತೆಗೆ ಸಾಧ್ಯವಾದಷ್ಟು ಮನೆಯೊಳಗೆ ಇರುವುದು ಉತ್ತಮ. ಬೇಸಿಗೆಯ ಬಳಲಿಕೆ ನಿವಾರಣೆಗೆ ಮತ್ತು ದೇಹವನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ಕಾಪಾಡುವಲ್ಲಿ ಎಳನೀರು ಪ್ರಮುಖವಾಗಿದೆ. ಈ ಎಳನೀರು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕುರಿತು ಕೃಷಿ ತಂತ್ರಜ್ಞಾನದ ಸ್ಟ್ರಾರ್ಟ್​ ಅಪ್​​ ಸಂಸ್ಥಾಪಕರು ಮತ್ತು ಸಿಇಒ ವರುಣ್​ ಖುರಾನ್​ ತಿಳಿಸಿದ್ದಾರೆ.

ಎಲೆಕ್ಟ್ರಾಲೈಟ್ಸ್​: ಎಳನೀರಿನಲ್ಲಿ ಪೋಷಾಶಿಯಂ, ಸೋಡಿಯಂ ಮತ್ತು ಮ್ಯಾಂಗನೀಸ್​ನಂತ ಎಲೆಕ್ಟ್ರಾಲೈಟ್ಸ್​ ಅನ್ನು ಕಾಣಬಹುದು. ಈ ಪಾನಿಯ ದೇಹದಲ್ಲಿನ ನೀರಿನ ಅಂಶವನ್ನು ಸಮತೋಲನ ಮಾಡುವುದರಿಂದ ದೇಹದಲ್ಲಿ ನೀರಿನ ಕೊರತೆ ಎದುರಾಗದಂತೆ ಮಾಡುತ್ತದೆ.

ಹೈಡ್ರೇಷನ್​: ದೇಹಕ್ಕೆ ಬೇಕಾದ ಜಲ ಸಂಚಯವನ್ನು ಈ ಏಳನೀರು ಮಾಡುತ್ತದೆ. ಜೊತೆಗೆ ಇದು ಬೆವರಿನಿಂದ ನಷ್ಟವಾಗುವ ನೀರಿನಾಂಶವನ್ನು ಮರು ಸ್ಥಾಪಿಸುತ್ತದೆ. ಜೊತೆಗೆ ನಿರ್ಜಲೀಕರಣ ಮಾಡುವ ಸಕ್ಕರೆ ಅಥವಾ ಹೈ ಕ್ಯಾಲೋರಿ ಪಾನೀಯದಂತೆ ಇದು ಅಲ್ಲ.

ದೇಹಕ್ಕೆ ತಂಪು: ಎಳನೀರು ಸದಾ ದೇಹವನ್ನು ತಂಪಾಗಿಡುತ್ತದೆ. ಇದು ತಾಪಮಾನ ಮತ್ತು ಶಾಖದ ಒತ್ತಡವನ್ನು ಇದು ಹೊಡೆದೋಡಿಸುತ್ತದೆ.

ಪೋಷಕಾಂಶ: ಎಳನೀರಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್​ ಸಿ ನಂತಹ ಪೋಷಕಾಂಶಗಳಿವೆ. ಜೊತೆಗೆ ದೇಹಕ್ಕೆ ಉತ್ಕರ್ಷಣ ವ್ಯವಸ್ಥೆಯ ವೃದ್ಧಿ ಮಾಡುತ್ತದೆ. ದೇಹದ ಅಸಮತೋಲನವನ್ನು ನಿವಾರಣೆ ಮಾಡುತ್ತದೆ. ಅದರಲ್ಲೂ ಬಿಸಿಲಿನ ಅಲೆಯಲ್ಲಿ ಉಂಟಾಗುವ ಅಸ್ವಸ್ಥೆತೆ ಮತ್ತು ಸೋಂಕಿನ ವಿರುದ್ಧ ಹೋರಾಡುವಂತೆ ಮಾಡುತ್ತದೆ.

ಕಡಿಮೆ ಕ್ಯಾಲೋರಿ: ಎಳನೀರು ಕಡಿಮೆ ಕ್ಯಾಲೋರಿ ಪಾನೀಯವಾಗಿದೆ. ಇದು ದೇಹಕ್ಕೆ ಅನುಕೂಲ ನೀಡಲಿದೆ.

ಇತರೆ ಪಾನೀಯಗಳಿಗೆ ಹೋಲಿಕೆ ಮಾಡಿದರೆ ಆರೋಗ್ಯ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಏಳನೀರು ನೈಸರ್ಗಿಕ ಜೊತೆಗೆ ಪೋಷಕಾಂಶಯುಕ್ತ ಪಾನೀಯವಾಗಿದೆ. ಈ ಎಳನೀರನ್ನು ಅನೇಕ ವಿಧದಲ್ಲಿ ನೀವು ಸವಿಯಬಹುದು. ಸ್ಮೂಥಿ ಅಥವಾ ಮೊಜಿಟೊಸ್​ನಂತ ಕಾಕ್​ಟೈಲ್ ರೂಪವಾಗಿ ಇದನ್ನು ಸೇವಿಸಬಹುದು. ಬೇಸಿಗೆಯ ಬಿಸಿಯನ್ನು ಓಡಿಸಿ, ಆರೋಗ್ಯಕರ ಲಾಭ ಪಡೆಯಲು ಏಳನೀರು ಅತ್ಯುತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: ಬೇಸಿಗೆಯ ದಾಹ ತಣಿಸುತ್ತವೆ ಈ ಸ್ಮೂಥಿಗಳು: ಒಮ್ಮೆ ಟ್ರೈ ಮಾಡಿ

ನವದೆಹಲಿ: ಬೇಸಿಗೆ ಆರಂಭವಾಗಿದ್ದು, ಈಗಾಗಲೇ ಬಿಸಿಲಿನ ಝಳಕ್ಕೆ ಜನರು ಪರಿತಪಿಸುತ್ತಿದ್ದಾರೆ. ಬಿಸಿ ಅಲೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವ ಹಿನ್ನೆಲೆ ಈ ಸಂಬಂಧ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚಿಸಿದೆ. ಈ ಬೇಸಿಗೆಯ ಬಿಸಿಲಿನ ತಾಪ ಹಲವು ಪ್ರದೇಶದಲ್ಲಿ 40 ರಿಂದ 45 ಡಿಗ್ರಿ ಸೆಲ್ಸಿಯಸ್​ ವರೆಗೂ ದಾಖಲಾಗುತ್ತದೆ. ಭಾರತದಲ್ಲಿ ಅನೇಕ ಮಂದಿ ಈ ಬಿಸಿಲಿನ ಅಲೆಗೆ ಸಾವನ್ನಪ್ಪಿದ ದಾಖಲೆ ಕೂಡ ಇದೆ. ಈ ಹಿನ್ನೆಲೆ ಈಗಾಗಲೇ ಅಗತ್ಯ ಕ್ರಮಕ್ಕೆ ಮುಂದಾಗಲಾಗಿದೆ. ಇದರ ಜೊತೆಗೆ ಪ್ರತಿಯೊಬ್ಬರು ವೈಯಕ್ತಿಕವಾಗಿ ಕಾಳಜಿ ವಹಿಸುವ ಮೂಲಕ ಈ ಬೇಗೆಯಿಂದ ತಪ್ಪಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಬೇಸಿಗೆಯಲ್ಲಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ನಿರ್ಜಲೀಕರಣ ಮತ್ತು ಶಾಖದ ಬಳಲಿಕೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಈ ಋತುಮಾನದಲ್ಲಿ ಗಾಳಿಯಾಡುವ ತೆಳುವಾದ ಬಟ್ಟೆ ಧರಿಸುವುದು, ಹೆಚ್ಚಿನ ನೀರು, ಎಳನೀರು ಮತ್ತಿತರ ಪಾನೀಯ ಸೇವನೆ ಅತ್ಯವಶ್ಯ. ಜೊತೆಗೆ ಸಾಧ್ಯವಾದಷ್ಟು ಮನೆಯೊಳಗೆ ಇರುವುದು ಉತ್ತಮ. ಬೇಸಿಗೆಯ ಬಳಲಿಕೆ ನಿವಾರಣೆಗೆ ಮತ್ತು ದೇಹವನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ಕಾಪಾಡುವಲ್ಲಿ ಎಳನೀರು ಪ್ರಮುಖವಾಗಿದೆ. ಈ ಎಳನೀರು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕುರಿತು ಕೃಷಿ ತಂತ್ರಜ್ಞಾನದ ಸ್ಟ್ರಾರ್ಟ್​ ಅಪ್​​ ಸಂಸ್ಥಾಪಕರು ಮತ್ತು ಸಿಇಒ ವರುಣ್​ ಖುರಾನ್​ ತಿಳಿಸಿದ್ದಾರೆ.

ಎಲೆಕ್ಟ್ರಾಲೈಟ್ಸ್​: ಎಳನೀರಿನಲ್ಲಿ ಪೋಷಾಶಿಯಂ, ಸೋಡಿಯಂ ಮತ್ತು ಮ್ಯಾಂಗನೀಸ್​ನಂತ ಎಲೆಕ್ಟ್ರಾಲೈಟ್ಸ್​ ಅನ್ನು ಕಾಣಬಹುದು. ಈ ಪಾನಿಯ ದೇಹದಲ್ಲಿನ ನೀರಿನ ಅಂಶವನ್ನು ಸಮತೋಲನ ಮಾಡುವುದರಿಂದ ದೇಹದಲ್ಲಿ ನೀರಿನ ಕೊರತೆ ಎದುರಾಗದಂತೆ ಮಾಡುತ್ತದೆ.

ಹೈಡ್ರೇಷನ್​: ದೇಹಕ್ಕೆ ಬೇಕಾದ ಜಲ ಸಂಚಯವನ್ನು ಈ ಏಳನೀರು ಮಾಡುತ್ತದೆ. ಜೊತೆಗೆ ಇದು ಬೆವರಿನಿಂದ ನಷ್ಟವಾಗುವ ನೀರಿನಾಂಶವನ್ನು ಮರು ಸ್ಥಾಪಿಸುತ್ತದೆ. ಜೊತೆಗೆ ನಿರ್ಜಲೀಕರಣ ಮಾಡುವ ಸಕ್ಕರೆ ಅಥವಾ ಹೈ ಕ್ಯಾಲೋರಿ ಪಾನೀಯದಂತೆ ಇದು ಅಲ್ಲ.

ದೇಹಕ್ಕೆ ತಂಪು: ಎಳನೀರು ಸದಾ ದೇಹವನ್ನು ತಂಪಾಗಿಡುತ್ತದೆ. ಇದು ತಾಪಮಾನ ಮತ್ತು ಶಾಖದ ಒತ್ತಡವನ್ನು ಇದು ಹೊಡೆದೋಡಿಸುತ್ತದೆ.

ಪೋಷಕಾಂಶ: ಎಳನೀರಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್​ ಸಿ ನಂತಹ ಪೋಷಕಾಂಶಗಳಿವೆ. ಜೊತೆಗೆ ದೇಹಕ್ಕೆ ಉತ್ಕರ್ಷಣ ವ್ಯವಸ್ಥೆಯ ವೃದ್ಧಿ ಮಾಡುತ್ತದೆ. ದೇಹದ ಅಸಮತೋಲನವನ್ನು ನಿವಾರಣೆ ಮಾಡುತ್ತದೆ. ಅದರಲ್ಲೂ ಬಿಸಿಲಿನ ಅಲೆಯಲ್ಲಿ ಉಂಟಾಗುವ ಅಸ್ವಸ್ಥೆತೆ ಮತ್ತು ಸೋಂಕಿನ ವಿರುದ್ಧ ಹೋರಾಡುವಂತೆ ಮಾಡುತ್ತದೆ.

ಕಡಿಮೆ ಕ್ಯಾಲೋರಿ: ಎಳನೀರು ಕಡಿಮೆ ಕ್ಯಾಲೋರಿ ಪಾನೀಯವಾಗಿದೆ. ಇದು ದೇಹಕ್ಕೆ ಅನುಕೂಲ ನೀಡಲಿದೆ.

ಇತರೆ ಪಾನೀಯಗಳಿಗೆ ಹೋಲಿಕೆ ಮಾಡಿದರೆ ಆರೋಗ್ಯ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಏಳನೀರು ನೈಸರ್ಗಿಕ ಜೊತೆಗೆ ಪೋಷಕಾಂಶಯುಕ್ತ ಪಾನೀಯವಾಗಿದೆ. ಈ ಎಳನೀರನ್ನು ಅನೇಕ ವಿಧದಲ್ಲಿ ನೀವು ಸವಿಯಬಹುದು. ಸ್ಮೂಥಿ ಅಥವಾ ಮೊಜಿಟೊಸ್​ನಂತ ಕಾಕ್​ಟೈಲ್ ರೂಪವಾಗಿ ಇದನ್ನು ಸೇವಿಸಬಹುದು. ಬೇಸಿಗೆಯ ಬಿಸಿಯನ್ನು ಓಡಿಸಿ, ಆರೋಗ್ಯಕರ ಲಾಭ ಪಡೆಯಲು ಏಳನೀರು ಅತ್ಯುತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: ಬೇಸಿಗೆಯ ದಾಹ ತಣಿಸುತ್ತವೆ ಈ ಸ್ಮೂಥಿಗಳು: ಒಮ್ಮೆ ಟ್ರೈ ಮಾಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.