ETV Bharat / sukhibhava

ಬೇಸಿಗೆಯಲ್ಲಿ ಐಸ್​ಕೋಲ್ಡ್​ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ: ತಜ್ಞರ ಎಚ್ಚರಿಕೆ

author img

By

Published : Apr 10, 2023, 5:55 PM IST

ಬೇಸಿಗೆ ಕಾಲದಲ್ಲಿ ತಣ್ಣೀರು ಕುಡಿಯುವುದು ನಮಗೆ ಸಾಕಷ್ಟು ಹಿತವಾಗಿರುತ್ತದೆ. ಆದರೆ ಕ್ಷಣಕಾಲ ಆರಾಮ ನೀಡುವ ತಣ್ಣೀರು ಆರೋಗ್ಯಕ್ಕೆ ಅದೆಷ್ಟೋ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬೇಸಿಗೆಯಲ್ಲಿ ಐಸ್​ಕೋಲ್ಡ್​ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ: ತಜ್ಞರ ಅಭಿಮತ
Drinking cold or ice-cold water causes several health issues during Summer

ಹೈದರಾಬಾದ್ : ಸುಡುವ ಬೇಸಿಗೆಯಲ್ಲಿ ಐಸ್ ಕೋಲ್ಡ್​ ಆಗಿರುವ ನೀರು ಕುಡಿದಾಗ ಗಂಟಲು ಮತ್ತು ದೇಹಕ್ಕೆ ಅದೆಷ್ಟೋ ಹಿತವೆನಿಸುತ್ತದೆ. ಆದರೆ ತಂಪಾದ ನೀರು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂಬುದು ಕೂಡ ಸತ್ಯ. ರೆಫ್ರಿಜರೇಟರ್‌ನಲ್ಲಿನ ತಣ್ಣೀರು ಶೀತವನ್ನು ಉಂಟುಮಾಡುವ ಮೂಲಕ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ತೊಂದರೆಗಳನ್ನು ಉಂಟುಮಾಡುತ್ತದೆ ಎಂಬುದು ಸಾಕಷ್ಟು ಜನರಿಗೆ ತಿಳಿಸಿದೆ. ಆದರೆ ಇಷ್ಟು ಮಾತ್ರವಲ್ಲದೇ ತಣ್ಣೀರಿನಿಂದ ಇನ್ನೂ ಹೆಚ್ಚಿನ ಅನಾರೋಗ್ಯ ಉಂಟಾಗಬಹುದು. ತಣ್ಣೀರು ಅಥವಾ ಐಸ್ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಹೃದಯದ ಸಮಸ್ಯೆಗಳು ಎದುರಾಗಬಹುದು ಮತ್ತು ನಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.

ಅಲೋಪತಿ, ಆಯುರ್ವೇದ ಮತ್ತು ನ್ಯಾಚುರೋಪತಿಯಂತಹ ವಿವಿಧ ವೈದ್ಯಕೀಯ ವಿಧಾನಗಳು ಕೊಠಡಿಯ ತಾಪಮಾನ ಅಥವಾ ಸಾಮಾನ್ಯ ತಾಪಮಾನ ಹೊಂದಿರುವ ನೀರನ್ನೇ ಕುಡಿಯಬೇಕು ಎಂಬ ಬಗ್ಗೆ ಒತ್ತಿ ಹೇಳಿವೆ. ಕುಡಿಯುವ ನೀರಿನ ವಿಚಾರದಲ್ಲಿ ಆಯುರ್ವೇದದಲ್ಲಿ ಹಲವು ನಿಯಮಗಳನ್ನು ವಿಧಿಸಲಾಗಿದೆ ಎನ್ನುತ್ತಾರೆ ಹರಿದ್ವಾರದ ಆಯುರ್ವೇದ ವೈದ್ಯ ರಾಮೇಶ್ವರ ಶರ್ಮಾ. ಉದಾಹರಣೆಗೆ, ಕುಳಿತುಕೊಂಡು ನೀರು ಕುಡಿಯಬೇಕು, ಯಾವಾಗಲೂ ಕೋಣೆಯ ಉಷ್ಣಾಂಶ ಹೊಂದಿರುವ ನೀರು ಕುಡಿಯಬೇಕು, ಊಟದ ಸಮಯದಲ್ಲಿ ತಣ್ಣೀರು ಕುಡಿಯಬಾರದು, ಊಟದ ನಂತರ ಉಗುರು ಬೆಚ್ಚಗಿನ ನೀರನ್ನು ಮಾತ್ರ ಕುಡಿಯಬೇಕು ಇತ್ಯಾದಿ ನಿಯಮಗಳಿವೆ.

ತಣ್ಣೀರು ಏಕೆ ಕುಡಿಯಬಾರದು: ತಣ್ಣೀರು ಜೀರ್ಣಾಂಗ ವ್ಯವಸ್ಥೆಯಲ್ಲಿನ ಜೀರ್ಣಕಾರಿ ಬೆಂಕಿಯನ್ನು ಕಡಿಮೆ ಮಾಡುತ್ತದೆ ಎಂಬ ಕಾರಣದಿಂದ ಆಹಾರದೊಂದಿಗೆ ಅಥವಾ ಸಾಮಾನ್ಯವಾಗಿ ತಣ್ಣೀರು ಕುಡಿಯುವುದನ್ನು ತಪ್ಪಿಸಬೇಕು ಎಂದು ಆಯುರ್ವೇದ ಹೇಳುತ್ತದೆ. ಜೀರ್ಣಕಾರಿ ಬೆಂಕಿ ಅಥವಾ 'ಜಠರಾಗ್ನಿ' ಜೀರ್ಣಾಂಗ ವ್ಯವಸ್ಥೆಯ ಎಲ್ಲ ಕಾರ್ಯಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ, ಆಹಾರದ ಮೂಲಗಳಿಂದ ಗರಿಷ್ಠ ಪ್ರಮಾಣದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ ಮತ್ತು ಇತರ ಚಟುವಟಿಕೆಗಳು ಸಹ ಸರಿಯಾಗಿ ನಡೆಯುವುದನ್ನು ಖಚಿತಪಡಿಸುತ್ತದೆ. ನೀರು ತಣ್ಣಗಿದ್ದಷ್ಟೂ ಅದು ಜೀರ್ಣಕಾರಿ ಬೆಂಕಿಯನ್ನು ಕಡಿಮೆ ಮಾಡುತ್ತದೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಹೆಚ್ಚು ತಣ್ಣೀರು ಕುಡಿಯುವುದರಿಂದ ದೊಡ್ಡ ಕರುಳಿನ ಕುಗ್ಗುವಿಕೆಗೆ ಕಾರಣವಾಗುತ್ತದೆ. ಇದು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅತಿ ತಣ್ಣನೆಯ ನೀರಿನಿಂದ ವಿಶೇಷವಾಗಿ ಮಲಬದ್ಧತೆಯ ಸಮಸ್ಯೆ ಎದುರಾಗಬಹುದು. ಆಯುರ್ವೇದವು ಮಲಬದ್ಧತೆಯನ್ನು ಬಹುತೇಕ ಎಲ್ಲಾ ರೀತಿಯ ಕಾಯಿಲೆಗಳಿಗೆ ಮೂಲ ಕಾರಣವೆಂದು ಪರಿಗಣಿಸುತ್ತದೆ. ಅಂಥ ಪರಿಸ್ಥಿತಿಯಲ್ಲಿ ತಣ್ಣೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುವುದು ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಶಕ್ತಿಯಲ್ಲಿ ಇಳಿಕೆಯಾಗಬಹುದು. ಹಾಗೆಯೇ ರಕ್ತ ಪರಿಚಲನೆ ಸೇರಿದಂತೆ ಇನ್ನೂ ಹಲವಾರು ಅಪಾಯಗಳು ಎದುರಾಗಬಹುದು.

ತಣ್ಣೀರು ಕುಡಿಯುವುದರಿಂದ ಕಫ ಹೆಚ್ಚಾಗಬಹುದು: ಹೆಚ್ಚು ತಣ್ಣೀರು ಕುಡಿಯುವುದರಿಂದ ದೇಹದಲ್ಲಿ ಕಫದ ಪರಿಣಾಮವೂ ಹೆಚ್ಚಾಗುತ್ತದೆ. ಇದರಿಂದ ಶೀತ ಮತ್ತು ಸೀನುವಿಕೆಯಂಥ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಸೋಂಕಿಗೆ ಒಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ. ತುಂಬಾ ಬಿಸಿಲಿನಲ್ಲಿ ಇದ್ದು ನೆರಳಿಗೆ ಬಂದ ನಂತರ ತಕ್ಷಣ ನೀರು ಕುಡಿಯಬಾರದು. ಹೀಗೆ ಮಾಡಿದರೆ ಅಪಧಮನಿಗಳು ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಅವುಗಳ ಕುಗ್ಗುವಿಕೆಯಿಂದ ಮೆದುಳಿನ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತವೆ ಎಂದು ಅವರು ಹೇಳುತ್ತಾರೆ. ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ ಮತ್ತು ಮೈಗ್ರೇನ್ ರೋಗಿಗಳಿಗೆ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೆಚ್ಚು ತಣ್ಣೀರು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುವುದಿಲ್ಲ ಎಂದು ವೈದ್ಯ ರಾಮೇಶ್ವರ ಶರ್ಮಾ ವಿವರಿಸುತ್ತಾರೆ.

ಇದನ್ನೂ ಓದಿ : ನಿಮ್ಮ ಪುಟ್ಟ ಮಗುವಿನ ದೈನಂದಿನ ಕಾಳಜಿ-ಆರೈಕೆ ಹೀಗಿರಲಿ

ಹೈದರಾಬಾದ್ : ಸುಡುವ ಬೇಸಿಗೆಯಲ್ಲಿ ಐಸ್ ಕೋಲ್ಡ್​ ಆಗಿರುವ ನೀರು ಕುಡಿದಾಗ ಗಂಟಲು ಮತ್ತು ದೇಹಕ್ಕೆ ಅದೆಷ್ಟೋ ಹಿತವೆನಿಸುತ್ತದೆ. ಆದರೆ ತಂಪಾದ ನೀರು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂಬುದು ಕೂಡ ಸತ್ಯ. ರೆಫ್ರಿಜರೇಟರ್‌ನಲ್ಲಿನ ತಣ್ಣೀರು ಶೀತವನ್ನು ಉಂಟುಮಾಡುವ ಮೂಲಕ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ತೊಂದರೆಗಳನ್ನು ಉಂಟುಮಾಡುತ್ತದೆ ಎಂಬುದು ಸಾಕಷ್ಟು ಜನರಿಗೆ ತಿಳಿಸಿದೆ. ಆದರೆ ಇಷ್ಟು ಮಾತ್ರವಲ್ಲದೇ ತಣ್ಣೀರಿನಿಂದ ಇನ್ನೂ ಹೆಚ್ಚಿನ ಅನಾರೋಗ್ಯ ಉಂಟಾಗಬಹುದು. ತಣ್ಣೀರು ಅಥವಾ ಐಸ್ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಹೃದಯದ ಸಮಸ್ಯೆಗಳು ಎದುರಾಗಬಹುದು ಮತ್ತು ನಮ್ಮ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.

ಅಲೋಪತಿ, ಆಯುರ್ವೇದ ಮತ್ತು ನ್ಯಾಚುರೋಪತಿಯಂತಹ ವಿವಿಧ ವೈದ್ಯಕೀಯ ವಿಧಾನಗಳು ಕೊಠಡಿಯ ತಾಪಮಾನ ಅಥವಾ ಸಾಮಾನ್ಯ ತಾಪಮಾನ ಹೊಂದಿರುವ ನೀರನ್ನೇ ಕುಡಿಯಬೇಕು ಎಂಬ ಬಗ್ಗೆ ಒತ್ತಿ ಹೇಳಿವೆ. ಕುಡಿಯುವ ನೀರಿನ ವಿಚಾರದಲ್ಲಿ ಆಯುರ್ವೇದದಲ್ಲಿ ಹಲವು ನಿಯಮಗಳನ್ನು ವಿಧಿಸಲಾಗಿದೆ ಎನ್ನುತ್ತಾರೆ ಹರಿದ್ವಾರದ ಆಯುರ್ವೇದ ವೈದ್ಯ ರಾಮೇಶ್ವರ ಶರ್ಮಾ. ಉದಾಹರಣೆಗೆ, ಕುಳಿತುಕೊಂಡು ನೀರು ಕುಡಿಯಬೇಕು, ಯಾವಾಗಲೂ ಕೋಣೆಯ ಉಷ್ಣಾಂಶ ಹೊಂದಿರುವ ನೀರು ಕುಡಿಯಬೇಕು, ಊಟದ ಸಮಯದಲ್ಲಿ ತಣ್ಣೀರು ಕುಡಿಯಬಾರದು, ಊಟದ ನಂತರ ಉಗುರು ಬೆಚ್ಚಗಿನ ನೀರನ್ನು ಮಾತ್ರ ಕುಡಿಯಬೇಕು ಇತ್ಯಾದಿ ನಿಯಮಗಳಿವೆ.

ತಣ್ಣೀರು ಏಕೆ ಕುಡಿಯಬಾರದು: ತಣ್ಣೀರು ಜೀರ್ಣಾಂಗ ವ್ಯವಸ್ಥೆಯಲ್ಲಿನ ಜೀರ್ಣಕಾರಿ ಬೆಂಕಿಯನ್ನು ಕಡಿಮೆ ಮಾಡುತ್ತದೆ ಎಂಬ ಕಾರಣದಿಂದ ಆಹಾರದೊಂದಿಗೆ ಅಥವಾ ಸಾಮಾನ್ಯವಾಗಿ ತಣ್ಣೀರು ಕುಡಿಯುವುದನ್ನು ತಪ್ಪಿಸಬೇಕು ಎಂದು ಆಯುರ್ವೇದ ಹೇಳುತ್ತದೆ. ಜೀರ್ಣಕಾರಿ ಬೆಂಕಿ ಅಥವಾ 'ಜಠರಾಗ್ನಿ' ಜೀರ್ಣಾಂಗ ವ್ಯವಸ್ಥೆಯ ಎಲ್ಲ ಕಾರ್ಯಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ, ಆಹಾರದ ಮೂಲಗಳಿಂದ ಗರಿಷ್ಠ ಪ್ರಮಾಣದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ ಮತ್ತು ಇತರ ಚಟುವಟಿಕೆಗಳು ಸಹ ಸರಿಯಾಗಿ ನಡೆಯುವುದನ್ನು ಖಚಿತಪಡಿಸುತ್ತದೆ. ನೀರು ತಣ್ಣಗಿದ್ದಷ್ಟೂ ಅದು ಜೀರ್ಣಕಾರಿ ಬೆಂಕಿಯನ್ನು ಕಡಿಮೆ ಮಾಡುತ್ತದೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಹೆಚ್ಚು ತಣ್ಣೀರು ಕುಡಿಯುವುದರಿಂದ ದೊಡ್ಡ ಕರುಳಿನ ಕುಗ್ಗುವಿಕೆಗೆ ಕಾರಣವಾಗುತ್ತದೆ. ಇದು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅತಿ ತಣ್ಣನೆಯ ನೀರಿನಿಂದ ವಿಶೇಷವಾಗಿ ಮಲಬದ್ಧತೆಯ ಸಮಸ್ಯೆ ಎದುರಾಗಬಹುದು. ಆಯುರ್ವೇದವು ಮಲಬದ್ಧತೆಯನ್ನು ಬಹುತೇಕ ಎಲ್ಲಾ ರೀತಿಯ ಕಾಯಿಲೆಗಳಿಗೆ ಮೂಲ ಕಾರಣವೆಂದು ಪರಿಗಣಿಸುತ್ತದೆ. ಅಂಥ ಪರಿಸ್ಥಿತಿಯಲ್ಲಿ ತಣ್ಣೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುವುದು ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಶಕ್ತಿಯಲ್ಲಿ ಇಳಿಕೆಯಾಗಬಹುದು. ಹಾಗೆಯೇ ರಕ್ತ ಪರಿಚಲನೆ ಸೇರಿದಂತೆ ಇನ್ನೂ ಹಲವಾರು ಅಪಾಯಗಳು ಎದುರಾಗಬಹುದು.

ತಣ್ಣೀರು ಕುಡಿಯುವುದರಿಂದ ಕಫ ಹೆಚ್ಚಾಗಬಹುದು: ಹೆಚ್ಚು ತಣ್ಣೀರು ಕುಡಿಯುವುದರಿಂದ ದೇಹದಲ್ಲಿ ಕಫದ ಪರಿಣಾಮವೂ ಹೆಚ್ಚಾಗುತ್ತದೆ. ಇದರಿಂದ ಶೀತ ಮತ್ತು ಸೀನುವಿಕೆಯಂಥ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಸೋಂಕಿಗೆ ಒಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ. ತುಂಬಾ ಬಿಸಿಲಿನಲ್ಲಿ ಇದ್ದು ನೆರಳಿಗೆ ಬಂದ ನಂತರ ತಕ್ಷಣ ನೀರು ಕುಡಿಯಬಾರದು. ಹೀಗೆ ಮಾಡಿದರೆ ಅಪಧಮನಿಗಳು ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಅವುಗಳ ಕುಗ್ಗುವಿಕೆಯಿಂದ ಮೆದುಳಿನ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತವೆ ಎಂದು ಅವರು ಹೇಳುತ್ತಾರೆ. ಇದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ ಮತ್ತು ಮೈಗ್ರೇನ್ ರೋಗಿಗಳಿಗೆ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೆಚ್ಚು ತಣ್ಣೀರು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುವುದಿಲ್ಲ ಎಂದು ವೈದ್ಯ ರಾಮೇಶ್ವರ ಶರ್ಮಾ ವಿವರಿಸುತ್ತಾರೆ.

ಇದನ್ನೂ ಓದಿ : ನಿಮ್ಮ ಪುಟ್ಟ ಮಗುವಿನ ದೈನಂದಿನ ಕಾಳಜಿ-ಆರೈಕೆ ಹೀಗಿರಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.