ETV Bharat / sukhibhava

ಬೆಳ್ಳಿ ಗೆಜ್ಜೆ ಧರಿಸುವುದರಿಂದ ಮಹಿಳೆಯರಿಗೆ ಆಗುವ ಅನುಕೂಲಗಳೇನು?... ಒಮ್ಮೆ ತಿಳಿಯಿರಿ..

author img

By

Published : Mar 5, 2022, 1:46 PM IST

Updated : Mar 5, 2022, 4:28 PM IST

ವಿವಾಹಿತ ಮಹಿಳೆಯರು ಬೆಳ್ಳಿ ಕಾಲುಂಗುರ ಮತ್ತು ಗೆಜ್ಜೆಗಳನ್ನು ಧರಿಸುವುದರಿಂದ ಆರೋಗ್ಯಕರ ಗರ್ಭಾಶಯ ಕಾಪಾಡಿಕೊಳ್ಳಬಹುದು. ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಬಲಪಡಿಸುವ ಜೊತೆಗೆ ಮುಟ್ಟಿನ ನೋವು ನಿವಾರಿಸುತ್ತದೆ ಎಂದು ಸಂಶೋಧನೆಗಳು ಹೇಳಿವೆ.

Did you know? Silver anklets can benefit your health too!
ಬೆಳ್ಳಿ ಗೆಜ್ಜೆ ಧರಿಸುವುದರಿಂದ ಮಹಿಳೆಯರಿಗೆ ಆಗುವ ಅನುಕೂಲಗಳನ್ನ ಒಮ್ಮೆ ತಿಳಿಯಿರಿ

ಹೈದರಾಬಾದ್‌: ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಭಾರತೀಯರಲ್ಲಿ ಚಿನ್ನದ ಮೇಲೆ ವ್ಯಾಮೋಹ ಹೆಚ್ಚು ಎಂದು ಹೇಳಬಹುದು. ಆದರೆ, ಈ ಹಳದಿ ಲೋಹದಿಂದ ಮಾಡಿದ ಗೆಜ್ಜೆ ಅಥವಾ ಉಂಗುರವನ್ನು ಕಾಲು, ಕಾಲಿನ ಬೆರಳುಗಳಿಗೆ ಧರಿಸುವುದಿಲ್ಲ. ಏಕೆಂದರೆ ಅವು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಪ್ರತಿನಿಧಿಸುತ್ತವೆ ಎಂಬ ನಂಬಿಕೆ.

ಇದರ ಪರಿಣಾಮವಾಗಿ ಕಾಲು ಚೈನ್ ಹಾಗೂ ಕಾಲಿನ ಬೆರಳಿಗೆ ಬಳಸುವ ಉಂಗುರಗಳು ಸಂಪೂರ್ಣವಾಗಿ ಬೆಳ್ಳಿಯಿಂದ ಮಾಡಿರುವುದನ್ನೇ ಧರಿಸುತ್ತಾರೆ. ಕಾಲು ಗೆಜ್ಜೆಗಳು ನಗರ ಪ್ರದೇಶಗಳಲ್ಲಿ ಮಾಯವಾಗುತ್ತಿದ್ದು, ಕೇವಲ ಮದುವೆಯಂತ ಸಮಾರಂಭಗಳಿಗೆ ಸಮೀತವಾಗುತ್ತಿವೆ ಎಂದು ಜ್ಯುವೆಲ್ಲರಿ ಕಂಪನಿಯೊಂದರ ಸಹಾಯಕ ನಿರ್ದೇಶಕ ಅಮಿತ್ ಗಿಲ್ರಾ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳ್ಳಿಯನ್ನು ಉಡುಗೊರೆಯಾಗಿ ನೀಡಲಾಗುತ್ತೆ. ಶಿಶುಗಳ ನಾಮಕರಣ ಸಮಾರಂಭದಲ್ಲಿ, ನಿಶ್ಚಿತಾರ್ಥ ಸಮಾರಂಭಗಳಲ್ಲಿ ಮತ್ತು ದೀಪಾವಳಿ ಮತ್ತು ಹೋಳಿ ಮುಂತಾದ ಪ್ರಮುಖ ಭಾರತೀಯ ಹಬ್ಬಗಳ ಸಮಯದಲ್ಲಿ ಪೂಜೆಗಳ ಸಮಯದಲ್ಲಿ ಪವಿತ್ರ ಪೂಜಾ ವಸ್ತುವಾಗಿಯೂ ಇವುಗಳನ್ನು ಬಳಸಲಾಗುತ್ತದೆ. ಭಾರತೀಯ ಪ್ರಾಚೀನ ಜ್ಯೋತಿಷಿಗಳ ಪ್ರಕಾರ, ಬೆಳ್ಳಿಯು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಶಿವನ ಕಣ್ಣುಗಳಿಂದ ಬೆಳ್ಳಿ ಉತ್ಪತ್ತಿಯಾಗುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಬೆಳ್ಳಿ ಸಮೃದ್ಧಿಯ ಸಂಕೇತವಾಗಿದೆ. ಆದ್ದರಿಂದ ಯಾರು ಬೆಳ್ಳಿಯನ್ನು ಧರಿಸುತ್ತಾರೋ ಅವರು ಸಂಪ್ರದಾಯಗಳ ಪ್ರಕಾರ ಸಮೃದ್ಧಿಯಾಗುತ್ತಾರೆ ಎಂಬ ನಂಬಿಕೆ ಇದೆ.

ಆಭರಣಕ್ಕಿಂತ ಹೆಚ್ಚು, ಔಷಧಕ್ಕಿಂತ ಕಡಿಮೆ

1. ಭಾರತೀಯ ಸಂಸ್ಕೃತಿಯಲ್ಲಿ ಕಾಲಿನ ಗೆಜ್ಜೆ ಪ್ರಧಾನ ಪ್ರಾಮುಖ್ಯತೆಯನ್ನು ಹೊಂದಿದೆ. ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದ ಪ್ರಾಚೀನ ಸಂಸ್ಕೃತಿಗಳಲ್ಲಿ ಆಭರಣವು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಏಕೆಂದರೆ ಇದು ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಅಂಶಗಳಲ್ಲಿ ಸೌಂದರ್ಯ ಮತ್ತು ಹಲವು ಪ್ರಯೋಜನಗಳನ್ನು ಹೊಂದಿದೆ.

2. ಬೆಳ್ಳಿಯು ಪ್ರತಿಕ್ರಿಯಾತ್ಮಕ ಲೋಹವಾಗಿದೆ. ದೇಹದಿಂದ ಹೊರಸೂಸಲ್ಪಟ್ಟ ಶಕ್ತಿಯನ್ನು ಪ್ರತಿಫಲಿಸುತ್ತದೆ ಮತ್ತು ಹಿಂತಿರುಗಿಸುತ್ತದೆ. ನಮ್ಮ ಹೆಚ್ಚಿನ ಶಕ್ತಿಗಳು ನಮ್ಮ ದೇಹವನ್ನು ಕೈ ಮತ್ತು ಪಾದಗಳಿಂದ ಬಿಡುತ್ತವೆ. ಬೆಳ್ಳಿ, ಕಂಚು ಮುಂತಾದ ಲೋಹಗಳು ಈ ಶಕ್ತಿ ಕುಂದದಂತೆ ಕಾರ್ಯನಿರ್ವಹಿಸುತ್ತವೆ. ಇದು ಹೆಚ್ಚು ಸಕಾರಾತ್ಮಕತೆ ಮತ್ತು ಉತ್ಸಾಹವನ್ನು ಪಡೆಯಲು ಕೂಡ ನೆರವಾಗುತ್ತದೆ.

3. ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಪ್ರಕಾರ, ಬೆಳ್ಳಿಯು ಭೂಮಿಯ ಶಕ್ತಿಯೊಂದಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತದ., ಆದರೆ, ಚಿನ್ನವು ದೇಹದ ಶಕ್ತಿ ಮತ್ತು ಸೆಳವುಗಳೊಂದಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತದೆ. ಆದ್ದರಿಂದ ಬೆಳ್ಳಿಯನ್ನು ಕಾಲು ಗೆಜ್ಜೆ ಅಥವಾ ಕಾಲುಂಗುರಗಳಾಗಿ ಧರಿಸಲಾಗುತ್ತದೆ. ಆದರೆ ದೇಹದ ಮೇಲಿನ ಭಾಗದ ಅಲಂಕಾರಕ್ಕೆ ಚಿನ್ನವನ್ನೇ ಬಳಸುತ್ತಾರೆ.

4. ಒಮ್ಮೆ ಇತಿಹಾಸವನ್ನು ಹಿಂತಿರುಗಿ ನೋಡಿದಾಗ ಬೆಳ್ಳಿಯು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದಾಗಿ ಗುರುತಿಸಲ್ಪಟ್ಟಿದೆ. ಸಾವಿರಾರು ವರ್ಷಗಳ ಹಿಂದೆ ನಾವಿಕರು ದೀರ್ಘ ಪ್ರಯಾಣದಲ್ಲಿ ಪ್ರಯಾಣಿಸುತ್ತಿದ್ದಾಗ ಅವರು ತಮ್ಮೊಂದಿಗೆ ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು ಹೋಗುತ್ತಿದ್ದರು, ಆ ನಾಣ್ಯಗಳನ್ನು ತಮ್ಮ ಕುಡಿಯುವ ನೀರಿನ ಬಾಟಲಿಗಳಲ್ಲಿ ಇಡುತ್ತಿದ್ದರು.

ಬೆಳ್ಳಿಯ ನೀರು ಉತ್ತಮ ಸೋಂಕು ನಿವಾರಕವಾಗಿರುವುದರಿಂದ ಅದನ್ನು ಕುಡಿಯುತ್ತಿದ್ದರು. ಬೆಳ್ಳಿಯ ಅಯಾನುಗಳು ಬ್ಯಾಕ್ಟೀರಿಯಾದ ಪೊರೆಗಳನ್ನು ನಾಶಮಾಡುತ್ತವೆ. ಇದು ಮಹಿಳೆಯರು ಬೆಳ್ಳಿಯ ಕಾಲುಂಗುರಗಳನ್ನು ಧರಿಸಲು ಪ್ರಮುಖ ಕಾರಣವಾಗಿದೆ.

5. ಹೆಚ್ಚುವರಿಯಾಗಿ ಮಹಿಳೆಯರು ಅಡುಗೆಮನೆಯಲ್ಲಿ ನಿಂತುಕೊಂಡು ಮನೆಕೆಲಸಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅವರು ಸಾಮಾನ್ಯವಾಗಿ ಊದಿಕೊಂಡ ಅಥವಾ ನೋವಿನ ಪಾದಗಳೊಂದಿಗೆ ಬಳಲುತ್ತಾರೆ. ನೋವು ಕೆಳ ಬೆನ್ನಿನ ಬೆನ್ನುಮೂಳೆಯ ಮೂಲಕ ಕಾಲುಗಳವರೆಗೆ ಚಲಿಸುತ್ತದೆ.

ಬೆಳ್ಳಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಅದು ನಮ್ಮ ಪಾದಗಳ ಮೇಲೆ ಇರುವುದರಿಂದ ಕಾಲುಗಳ ದೌರ್ಬಲ್ಯವನ್ನು ಶಮನಗೊಳಿಸುತ್ತದೆ. ಈ ಪ್ರಯೋಜನಗಳ ಜೊತೆಗೆ, ಬೆಳ್ಳಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾರ್ಮೋನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ ಎಂದು ಸಾಬೀತುಪಡಿಸಲು ಸಂಶೋಧನೆಗಳು ನಡೆಯುತ್ತಿವೆ.

ನಮ್ಮ ದೇಶದಲ್ಲಿ ವಿವಾಹಿತ ಮಹಿಳೆಯರು ಬೆಳ್ಳಿಯ ಕಾಲುಂಗುರಗಳನ್ನು ಧರಿಸಲು ಈ ಮೇಲಿನ ಕಾರಣವೂ ಒಂದು. ಏಕೆಂದರೆ ಇದು ಆರೋಗ್ಯಕರ ಗರ್ಭಾಶಯವನ್ನು ಕಾಪಾಡಿಕೊಳ್ಳುತ್ತದೆ, ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಬಲಪಡಿಸುತ್ತದೆ ಮತ್ತು ಮುಟ್ಟಿನ ನೋವನ್ನು ನಿವಾರಿಸುತ್ತದೆ.

ಇದನ್ನೂ ಓದಿ: ಶ್ವಾಸಕೋಶ ಸಮಸ್ಯೆಗೆ ಈ ಆಹಾರ ಪದಾರ್ಥಗಳು ರಾಮಬಾಣ..!

ಹೈದರಾಬಾದ್‌: ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಭಾರತೀಯರಲ್ಲಿ ಚಿನ್ನದ ಮೇಲೆ ವ್ಯಾಮೋಹ ಹೆಚ್ಚು ಎಂದು ಹೇಳಬಹುದು. ಆದರೆ, ಈ ಹಳದಿ ಲೋಹದಿಂದ ಮಾಡಿದ ಗೆಜ್ಜೆ ಅಥವಾ ಉಂಗುರವನ್ನು ಕಾಲು, ಕಾಲಿನ ಬೆರಳುಗಳಿಗೆ ಧರಿಸುವುದಿಲ್ಲ. ಏಕೆಂದರೆ ಅವು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಪ್ರತಿನಿಧಿಸುತ್ತವೆ ಎಂಬ ನಂಬಿಕೆ.

ಇದರ ಪರಿಣಾಮವಾಗಿ ಕಾಲು ಚೈನ್ ಹಾಗೂ ಕಾಲಿನ ಬೆರಳಿಗೆ ಬಳಸುವ ಉಂಗುರಗಳು ಸಂಪೂರ್ಣವಾಗಿ ಬೆಳ್ಳಿಯಿಂದ ಮಾಡಿರುವುದನ್ನೇ ಧರಿಸುತ್ತಾರೆ. ಕಾಲು ಗೆಜ್ಜೆಗಳು ನಗರ ಪ್ರದೇಶಗಳಲ್ಲಿ ಮಾಯವಾಗುತ್ತಿದ್ದು, ಕೇವಲ ಮದುವೆಯಂತ ಸಮಾರಂಭಗಳಿಗೆ ಸಮೀತವಾಗುತ್ತಿವೆ ಎಂದು ಜ್ಯುವೆಲ್ಲರಿ ಕಂಪನಿಯೊಂದರ ಸಹಾಯಕ ನಿರ್ದೇಶಕ ಅಮಿತ್ ಗಿಲ್ರಾ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳ್ಳಿಯನ್ನು ಉಡುಗೊರೆಯಾಗಿ ನೀಡಲಾಗುತ್ತೆ. ಶಿಶುಗಳ ನಾಮಕರಣ ಸಮಾರಂಭದಲ್ಲಿ, ನಿಶ್ಚಿತಾರ್ಥ ಸಮಾರಂಭಗಳಲ್ಲಿ ಮತ್ತು ದೀಪಾವಳಿ ಮತ್ತು ಹೋಳಿ ಮುಂತಾದ ಪ್ರಮುಖ ಭಾರತೀಯ ಹಬ್ಬಗಳ ಸಮಯದಲ್ಲಿ ಪೂಜೆಗಳ ಸಮಯದಲ್ಲಿ ಪವಿತ್ರ ಪೂಜಾ ವಸ್ತುವಾಗಿಯೂ ಇವುಗಳನ್ನು ಬಳಸಲಾಗುತ್ತದೆ. ಭಾರತೀಯ ಪ್ರಾಚೀನ ಜ್ಯೋತಿಷಿಗಳ ಪ್ರಕಾರ, ಬೆಳ್ಳಿಯು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಶಿವನ ಕಣ್ಣುಗಳಿಂದ ಬೆಳ್ಳಿ ಉತ್ಪತ್ತಿಯಾಗುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಬೆಳ್ಳಿ ಸಮೃದ್ಧಿಯ ಸಂಕೇತವಾಗಿದೆ. ಆದ್ದರಿಂದ ಯಾರು ಬೆಳ್ಳಿಯನ್ನು ಧರಿಸುತ್ತಾರೋ ಅವರು ಸಂಪ್ರದಾಯಗಳ ಪ್ರಕಾರ ಸಮೃದ್ಧಿಯಾಗುತ್ತಾರೆ ಎಂಬ ನಂಬಿಕೆ ಇದೆ.

ಆಭರಣಕ್ಕಿಂತ ಹೆಚ್ಚು, ಔಷಧಕ್ಕಿಂತ ಕಡಿಮೆ

1. ಭಾರತೀಯ ಸಂಸ್ಕೃತಿಯಲ್ಲಿ ಕಾಲಿನ ಗೆಜ್ಜೆ ಪ್ರಧಾನ ಪ್ರಾಮುಖ್ಯತೆಯನ್ನು ಹೊಂದಿದೆ. ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದ ಪ್ರಾಚೀನ ಸಂಸ್ಕೃತಿಗಳಲ್ಲಿ ಆಭರಣವು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಏಕೆಂದರೆ ಇದು ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದ ಅಂಶಗಳಲ್ಲಿ ಸೌಂದರ್ಯ ಮತ್ತು ಹಲವು ಪ್ರಯೋಜನಗಳನ್ನು ಹೊಂದಿದೆ.

2. ಬೆಳ್ಳಿಯು ಪ್ರತಿಕ್ರಿಯಾತ್ಮಕ ಲೋಹವಾಗಿದೆ. ದೇಹದಿಂದ ಹೊರಸೂಸಲ್ಪಟ್ಟ ಶಕ್ತಿಯನ್ನು ಪ್ರತಿಫಲಿಸುತ್ತದೆ ಮತ್ತು ಹಿಂತಿರುಗಿಸುತ್ತದೆ. ನಮ್ಮ ಹೆಚ್ಚಿನ ಶಕ್ತಿಗಳು ನಮ್ಮ ದೇಹವನ್ನು ಕೈ ಮತ್ತು ಪಾದಗಳಿಂದ ಬಿಡುತ್ತವೆ. ಬೆಳ್ಳಿ, ಕಂಚು ಮುಂತಾದ ಲೋಹಗಳು ಈ ಶಕ್ತಿ ಕುಂದದಂತೆ ಕಾರ್ಯನಿರ್ವಹಿಸುತ್ತವೆ. ಇದು ಹೆಚ್ಚು ಸಕಾರಾತ್ಮಕತೆ ಮತ್ತು ಉತ್ಸಾಹವನ್ನು ಪಡೆಯಲು ಕೂಡ ನೆರವಾಗುತ್ತದೆ.

3. ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಪ್ರಕಾರ, ಬೆಳ್ಳಿಯು ಭೂಮಿಯ ಶಕ್ತಿಯೊಂದಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತದ., ಆದರೆ, ಚಿನ್ನವು ದೇಹದ ಶಕ್ತಿ ಮತ್ತು ಸೆಳವುಗಳೊಂದಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತದೆ. ಆದ್ದರಿಂದ ಬೆಳ್ಳಿಯನ್ನು ಕಾಲು ಗೆಜ್ಜೆ ಅಥವಾ ಕಾಲುಂಗುರಗಳಾಗಿ ಧರಿಸಲಾಗುತ್ತದೆ. ಆದರೆ ದೇಹದ ಮೇಲಿನ ಭಾಗದ ಅಲಂಕಾರಕ್ಕೆ ಚಿನ್ನವನ್ನೇ ಬಳಸುತ್ತಾರೆ.

4. ಒಮ್ಮೆ ಇತಿಹಾಸವನ್ನು ಹಿಂತಿರುಗಿ ನೋಡಿದಾಗ ಬೆಳ್ಳಿಯು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದಾಗಿ ಗುರುತಿಸಲ್ಪಟ್ಟಿದೆ. ಸಾವಿರಾರು ವರ್ಷಗಳ ಹಿಂದೆ ನಾವಿಕರು ದೀರ್ಘ ಪ್ರಯಾಣದಲ್ಲಿ ಪ್ರಯಾಣಿಸುತ್ತಿದ್ದಾಗ ಅವರು ತಮ್ಮೊಂದಿಗೆ ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು ಹೋಗುತ್ತಿದ್ದರು, ಆ ನಾಣ್ಯಗಳನ್ನು ತಮ್ಮ ಕುಡಿಯುವ ನೀರಿನ ಬಾಟಲಿಗಳಲ್ಲಿ ಇಡುತ್ತಿದ್ದರು.

ಬೆಳ್ಳಿಯ ನೀರು ಉತ್ತಮ ಸೋಂಕು ನಿವಾರಕವಾಗಿರುವುದರಿಂದ ಅದನ್ನು ಕುಡಿಯುತ್ತಿದ್ದರು. ಬೆಳ್ಳಿಯ ಅಯಾನುಗಳು ಬ್ಯಾಕ್ಟೀರಿಯಾದ ಪೊರೆಗಳನ್ನು ನಾಶಮಾಡುತ್ತವೆ. ಇದು ಮಹಿಳೆಯರು ಬೆಳ್ಳಿಯ ಕಾಲುಂಗುರಗಳನ್ನು ಧರಿಸಲು ಪ್ರಮುಖ ಕಾರಣವಾಗಿದೆ.

5. ಹೆಚ್ಚುವರಿಯಾಗಿ ಮಹಿಳೆಯರು ಅಡುಗೆಮನೆಯಲ್ಲಿ ನಿಂತುಕೊಂಡು ಮನೆಕೆಲಸಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅವರು ಸಾಮಾನ್ಯವಾಗಿ ಊದಿಕೊಂಡ ಅಥವಾ ನೋವಿನ ಪಾದಗಳೊಂದಿಗೆ ಬಳಲುತ್ತಾರೆ. ನೋವು ಕೆಳ ಬೆನ್ನಿನ ಬೆನ್ನುಮೂಳೆಯ ಮೂಲಕ ಕಾಲುಗಳವರೆಗೆ ಚಲಿಸುತ್ತದೆ.

ಬೆಳ್ಳಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಅದು ನಮ್ಮ ಪಾದಗಳ ಮೇಲೆ ಇರುವುದರಿಂದ ಕಾಲುಗಳ ದೌರ್ಬಲ್ಯವನ್ನು ಶಮನಗೊಳಿಸುತ್ತದೆ. ಈ ಪ್ರಯೋಜನಗಳ ಜೊತೆಗೆ, ಬೆಳ್ಳಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾರ್ಮೋನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ ಎಂದು ಸಾಬೀತುಪಡಿಸಲು ಸಂಶೋಧನೆಗಳು ನಡೆಯುತ್ತಿವೆ.

ನಮ್ಮ ದೇಶದಲ್ಲಿ ವಿವಾಹಿತ ಮಹಿಳೆಯರು ಬೆಳ್ಳಿಯ ಕಾಲುಂಗುರಗಳನ್ನು ಧರಿಸಲು ಈ ಮೇಲಿನ ಕಾರಣವೂ ಒಂದು. ಏಕೆಂದರೆ ಇದು ಆರೋಗ್ಯಕರ ಗರ್ಭಾಶಯವನ್ನು ಕಾಪಾಡಿಕೊಳ್ಳುತ್ತದೆ, ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಬಲಪಡಿಸುತ್ತದೆ ಮತ್ತು ಮುಟ್ಟಿನ ನೋವನ್ನು ನಿವಾರಿಸುತ್ತದೆ.

ಇದನ್ನೂ ಓದಿ: ಶ್ವಾಸಕೋಶ ಸಮಸ್ಯೆಗೆ ಈ ಆಹಾರ ಪದಾರ್ಥಗಳು ರಾಮಬಾಣ..!

Last Updated : Mar 5, 2022, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.