ETV Bharat / sukhibhava

Brain eating amoeba: ಬಾಲಕನ ಮೆದುಳು ತಿಂದ ಅಮೀಬಾ; ಕೆರೆ, ಕೊಳದಲ್ಲಿ ಈಜುವ ಮುನ್ನ ಇರಲಿ ಎಚ್ಚರ!

author img

By

Published : Jul 8, 2023, 12:36 PM IST

ಬೆಚ್ಚಗಿನ ವಾತಾವರಣದಲ್ಲಿ ಈ ಅಮೀಬಾ ಬೆಳವಣಿಗೆ ಕಂಡು ಬರುತ್ತದೆ. ಕೆಸರಿನಿಂದ ಕೂಡ ಕಲುಷಿತ ನೀರು, ಸರೋವರದಲ್ಲಿ ಇದು ಜೀವಿಸುತ್ತದೆ.

Amoeba ate a 15-year-old's brain; Be careful before swimming in lakes and ponds
Amoeba ate a 15-year-old's brain; Be careful before swimming in lakes and ponds

ಆಲಪ್ಪುಳ: ಕೇರಳದ 15ವರ್ಷ ವಯಸ್ಸಿನ ಬಾಲಕನ ಸಾವು ಇದೀಗ ವೈದ್ಯಲೋಕ ಸೇರಿದಂತೆ ಜನಸಾಮಾನ್ಯರಲ್ಲಿ ಆತಂಕ ಮತ್ತು ಭೀತಿ ಮೂಡಿಸಿದೆ. ಇಲ್ಲಿನ ಆಲಪ್ಪುಳ ಜಿಲ್ಲೆಯ ಪನವಲ್ಲಿ ಪಂಚಾಯತ್​ನ 15 ವರ್ಷದ ಬಾಲಕನ ಸಾವಿಗೆ ಕಾರಣ ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್. ಈ ಬಾಲಕನ ಮೆದುಳು ಕಲುಷಿತ ನೀರಿನಲ್ಲಿ ಜೀವಿಸುವ ಜೀವಂತ ಅಮೀಬಾದ ಸೋಂಕಿಗೆ ಒಳಗಾಗಿದೆ. ಮೂಗಿನ ಮೂಲಕ ದೇಹ ಹೊಕ್ಕ ಜೀವಂತ ಅಮೀಬಾ ಮೆದುಳನ್ನು ತಿಂದು ಹಾಕಿದೆ. ಈ ಮೆದುಳು ಸೋಂಕಿನಿಂದ ಆತ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಸಚಿವಾರಾದ ವೀಣಾ ಜಾರ್ಜ್​ ಕೂಡ ಮಾಹಿತಿ ನೀಡಿದ್ದಾರೆ.

ಏನಿದು ಘಟನೆ: ಅನಿಲ್​ ಕುಮಾರ್​ ಮತ್ತು ಶಾಲಿನಿ ದಂಪತಿಯಾಗಿರುವ 15 ವರ್ಷದ ಗುರುದತ್​​ ಸಾವನ್ನಪ್ಪಿರುವ ಬಾಲಕ. 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಕಳೆದ ಭಾನುವಾರ ಆಳಪ್ಪುಳ ಮೆಡಿಕಲ್​ ಕಾಲೇಜ್​ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ರೀತಿ ಪ್ರಕರಣ ಕೇರಳದಲ್ಲಿ ಮೊದಲಲ್ಲ. ಈ ಹಿಂದೆ ಕೂಡ ಇದೇ ರೀತಿಯ ಐದು ಅಪರೂಪದ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.

ಮೊದಲ ಪ್ರಕರಣ: 2016ರಲ್ಲಿ ಆಲಪ್ಪುಳದ ತಿರುಮಲ ವಾರ್ಡ್​ನಲ್ಲಿ ಮೊದಲು ದಾಖಲಾಗಿತ್ತು. ಇದಾದ ಬಳಿಕ 2019 ಮತ್ತು 2020ರಲ್ಲಿ ಮಲಪ್ಪುರಂನಲ್ಲಿ ಮತ್ತೆ ಎರಡು ಪ್ರಕರಣಗಳು ದಾಖಲಾದವು. ಇದಾದ ಬಳಿಕ 2020ರಲ್ಲಿ ಕಾಜಿಗೋಡ್​ ಮತ್ತು 2022ರಲ್ಲಿ ತ್ರಿಸ್ಸೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ರೋಗದ ಪ್ರಮುಖ ಲಕ್ಷಣ ಎಂದರೆ, ಜ್ವರ, ತಲೆನೋವು, ವಾಂತಿ ಮತ್ತು ಸೀನುವಿಕೆ. ಕಲುಷಿತ ನೀರಿಗೆ ತೆರೆದುಕೊಂಡ ಒಂದರಿಂದ ಎರಡು ವಾರದಲ್ಲಿ ಈ ರೀತಿಯ ಲಕ್ಷಣಗಳು ಪತ್ತೆಯಾಗುತ್ತವೆ. ಕೆಲವು ವೇಳೆ ಮೊದಲ ಲಕ್ಷಣದಲ್ಲೇ ವಾಸನೆ ಅಥವಾ ರುಚಿಯನ್ನು ಕಳೆದುಕೊಳ್ಳಬಹುದು.

ಈ ರೀತಿಯ ಸೋಂಕಿಗೆ ಒಳಗಾದ ಎಲ್ಲಾ ರೋಗಿಗಳು ಸಾವನ್ನಪ್ಪುತ್ತಾರೆ. ಮೆದುಳು ಸೋಂಕಿನ ಸಾವಿನ ದರ ಶೇ 100ರಷ್ಟಿದೆ. ಮುಕ್ತವಾಗಿ- ಜೀವಿಸುವ ಅಮೀಬಾ ಈ ಸೋಂಕಿಗೆ ಕಾರಣ. ಈ ಅಮೀಬಾ ನಿಂತ ನೀರಿನಲ್ಲಿ ಕಂಡು ಬರುತ್ತದೆ ಎಂದು ಸಚಿವರು ವಿವರಣೆ ನೀಡಿದರು.

ವೈದ್ಯರ ಪ್ರಕಾರ, ಮಾನವನ ಮೆದುಳು ಮುಕ್ತ ಜೀವಿಸುವ, ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗುತ್ತದೆ. ಇದು ಮೂಗಿನ ಮೂಲಕ ದೇಹ ಸೇರುತ್ತದೆ. ಇದನ್ನು ಗಂಭೀರ ರೋಗ ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು, ಜನರಿಗೆ ನಿಂತ ಕಲುಷಿತ ನೀರಿನಲ್ಲಿ ಯಾವುದೇ ಕಾರಣಕ್ಕೂ ಸ್ನಾನ ಮಾಡದಂತೆ ಎಚ್ಚರಿಸಿದ್ದಾರೆ.

ನೇಗ್ಲೇರಿಯಾ ಫೌಲೆರಿ: ನೇಗ್ಲೇರಿಯಾ ಫೌಲೆರಿ ಪರಿಸರದಲ್ಲಿ ದೀರ್ಘಕಾಲ ಅಸ್ತಿತ್ವದಲ್ಲಿರುತ್ತದೆ. ಬೆಚ್ಚಗಿನ ವಾತಾವರಣದಲ್ಲಿ ಈ ಅಮೀಬಾ ಬೆಳವಣಿಗೆ ಕಂಡು ಬರುತ್ತದೆ. ಕೆಸರಿನಿಂದ ಕೂಡ ಕಲುಷಿತ ನೀರು, ಸರೋವರದಲ್ಲಿ ಇದು ಜೀವಿಸುತ್ತದೆ. ಸಮುದ್ರದಲ್ಲಿ ಇದು ಜೀವಿಸುವುದಿಲ್ಲ. ಇದರಲ್ಲಿ ಈ ಅಮೀಬಾ ವಾಸವಿದ್ದು, ಮಾನವನಿಗೆ ಇದು ಅಪಾಯಕಾರಿಯಾಗಿದೆ. ಮೂಗಿನ ಮೂಲಕ ದೇಹ ಸೇರುವ ಈ ಜೀವಂತ ಅಮೀಬಾ ಮೆದುಳು ಸೋಂಕಿಗೆ ಕಾರಣವಾಗುತ್ತದೆ. ಕಲುಷಿತ ನೀರಿನಲ್ಲಿ ಸ್ನಾನ ಮಾಡುವುದು, ಮುಖ, ಬಾಯಿ ತೊಳೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಇದು ಅನೇಕ ರೋಗಕ್ಕೆ ಕಾರಣವಾಗುತ್ತದೆ. ಮಳೆ ಪ್ರಾರಂಭವಾದ ಬಳಿಕ ಇಂತಹ ತೆರೆದ ಕೊಳದಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸಬೇಕು.

ಇದನ್ನೂ ಓದಿ: ದೆಹಲಿಯ ಮೆಕ್​​ಡೊನಾಲ್ಡ್​ ಮೆನುವಿನಿಂದ ಟೊಮೆಟೊ ಕಣ್ಮರೆ; ಕಾರಣ ಬೆಲೆ ಏರಿಕೆ, ಅಲಭ್ಯತೆ

ಆಲಪ್ಪುಳ: ಕೇರಳದ 15ವರ್ಷ ವಯಸ್ಸಿನ ಬಾಲಕನ ಸಾವು ಇದೀಗ ವೈದ್ಯಲೋಕ ಸೇರಿದಂತೆ ಜನಸಾಮಾನ್ಯರಲ್ಲಿ ಆತಂಕ ಮತ್ತು ಭೀತಿ ಮೂಡಿಸಿದೆ. ಇಲ್ಲಿನ ಆಲಪ್ಪುಳ ಜಿಲ್ಲೆಯ ಪನವಲ್ಲಿ ಪಂಚಾಯತ್​ನ 15 ವರ್ಷದ ಬಾಲಕನ ಸಾವಿಗೆ ಕಾರಣ ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್. ಈ ಬಾಲಕನ ಮೆದುಳು ಕಲುಷಿತ ನೀರಿನಲ್ಲಿ ಜೀವಿಸುವ ಜೀವಂತ ಅಮೀಬಾದ ಸೋಂಕಿಗೆ ಒಳಗಾಗಿದೆ. ಮೂಗಿನ ಮೂಲಕ ದೇಹ ಹೊಕ್ಕ ಜೀವಂತ ಅಮೀಬಾ ಮೆದುಳನ್ನು ತಿಂದು ಹಾಕಿದೆ. ಈ ಮೆದುಳು ಸೋಂಕಿನಿಂದ ಆತ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಸಚಿವಾರಾದ ವೀಣಾ ಜಾರ್ಜ್​ ಕೂಡ ಮಾಹಿತಿ ನೀಡಿದ್ದಾರೆ.

ಏನಿದು ಘಟನೆ: ಅನಿಲ್​ ಕುಮಾರ್​ ಮತ್ತು ಶಾಲಿನಿ ದಂಪತಿಯಾಗಿರುವ 15 ವರ್ಷದ ಗುರುದತ್​​ ಸಾವನ್ನಪ್ಪಿರುವ ಬಾಲಕ. 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಕಳೆದ ಭಾನುವಾರ ಆಳಪ್ಪುಳ ಮೆಡಿಕಲ್​ ಕಾಲೇಜ್​ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ರೀತಿ ಪ್ರಕರಣ ಕೇರಳದಲ್ಲಿ ಮೊದಲಲ್ಲ. ಈ ಹಿಂದೆ ಕೂಡ ಇದೇ ರೀತಿಯ ಐದು ಅಪರೂಪದ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.

ಮೊದಲ ಪ್ರಕರಣ: 2016ರಲ್ಲಿ ಆಲಪ್ಪುಳದ ತಿರುಮಲ ವಾರ್ಡ್​ನಲ್ಲಿ ಮೊದಲು ದಾಖಲಾಗಿತ್ತು. ಇದಾದ ಬಳಿಕ 2019 ಮತ್ತು 2020ರಲ್ಲಿ ಮಲಪ್ಪುರಂನಲ್ಲಿ ಮತ್ತೆ ಎರಡು ಪ್ರಕರಣಗಳು ದಾಖಲಾದವು. ಇದಾದ ಬಳಿಕ 2020ರಲ್ಲಿ ಕಾಜಿಗೋಡ್​ ಮತ್ತು 2022ರಲ್ಲಿ ತ್ರಿಸ್ಸೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ರೋಗದ ಪ್ರಮುಖ ಲಕ್ಷಣ ಎಂದರೆ, ಜ್ವರ, ತಲೆನೋವು, ವಾಂತಿ ಮತ್ತು ಸೀನುವಿಕೆ. ಕಲುಷಿತ ನೀರಿಗೆ ತೆರೆದುಕೊಂಡ ಒಂದರಿಂದ ಎರಡು ವಾರದಲ್ಲಿ ಈ ರೀತಿಯ ಲಕ್ಷಣಗಳು ಪತ್ತೆಯಾಗುತ್ತವೆ. ಕೆಲವು ವೇಳೆ ಮೊದಲ ಲಕ್ಷಣದಲ್ಲೇ ವಾಸನೆ ಅಥವಾ ರುಚಿಯನ್ನು ಕಳೆದುಕೊಳ್ಳಬಹುದು.

ಈ ರೀತಿಯ ಸೋಂಕಿಗೆ ಒಳಗಾದ ಎಲ್ಲಾ ರೋಗಿಗಳು ಸಾವನ್ನಪ್ಪುತ್ತಾರೆ. ಮೆದುಳು ಸೋಂಕಿನ ಸಾವಿನ ದರ ಶೇ 100ರಷ್ಟಿದೆ. ಮುಕ್ತವಾಗಿ- ಜೀವಿಸುವ ಅಮೀಬಾ ಈ ಸೋಂಕಿಗೆ ಕಾರಣ. ಈ ಅಮೀಬಾ ನಿಂತ ನೀರಿನಲ್ಲಿ ಕಂಡು ಬರುತ್ತದೆ ಎಂದು ಸಚಿವರು ವಿವರಣೆ ನೀಡಿದರು.

ವೈದ್ಯರ ಪ್ರಕಾರ, ಮಾನವನ ಮೆದುಳು ಮುಕ್ತ ಜೀವಿಸುವ, ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗುತ್ತದೆ. ಇದು ಮೂಗಿನ ಮೂಲಕ ದೇಹ ಸೇರುತ್ತದೆ. ಇದನ್ನು ಗಂಭೀರ ರೋಗ ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು, ಜನರಿಗೆ ನಿಂತ ಕಲುಷಿತ ನೀರಿನಲ್ಲಿ ಯಾವುದೇ ಕಾರಣಕ್ಕೂ ಸ್ನಾನ ಮಾಡದಂತೆ ಎಚ್ಚರಿಸಿದ್ದಾರೆ.

ನೇಗ್ಲೇರಿಯಾ ಫೌಲೆರಿ: ನೇಗ್ಲೇರಿಯಾ ಫೌಲೆರಿ ಪರಿಸರದಲ್ಲಿ ದೀರ್ಘಕಾಲ ಅಸ್ತಿತ್ವದಲ್ಲಿರುತ್ತದೆ. ಬೆಚ್ಚಗಿನ ವಾತಾವರಣದಲ್ಲಿ ಈ ಅಮೀಬಾ ಬೆಳವಣಿಗೆ ಕಂಡು ಬರುತ್ತದೆ. ಕೆಸರಿನಿಂದ ಕೂಡ ಕಲುಷಿತ ನೀರು, ಸರೋವರದಲ್ಲಿ ಇದು ಜೀವಿಸುತ್ತದೆ. ಸಮುದ್ರದಲ್ಲಿ ಇದು ಜೀವಿಸುವುದಿಲ್ಲ. ಇದರಲ್ಲಿ ಈ ಅಮೀಬಾ ವಾಸವಿದ್ದು, ಮಾನವನಿಗೆ ಇದು ಅಪಾಯಕಾರಿಯಾಗಿದೆ. ಮೂಗಿನ ಮೂಲಕ ದೇಹ ಸೇರುವ ಈ ಜೀವಂತ ಅಮೀಬಾ ಮೆದುಳು ಸೋಂಕಿಗೆ ಕಾರಣವಾಗುತ್ತದೆ. ಕಲುಷಿತ ನೀರಿನಲ್ಲಿ ಸ್ನಾನ ಮಾಡುವುದು, ಮುಖ, ಬಾಯಿ ತೊಳೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಇದು ಅನೇಕ ರೋಗಕ್ಕೆ ಕಾರಣವಾಗುತ್ತದೆ. ಮಳೆ ಪ್ರಾರಂಭವಾದ ಬಳಿಕ ಇಂತಹ ತೆರೆದ ಕೊಳದಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸಬೇಕು.

ಇದನ್ನೂ ಓದಿ: ದೆಹಲಿಯ ಮೆಕ್​​ಡೊನಾಲ್ಡ್​ ಮೆನುವಿನಿಂದ ಟೊಮೆಟೊ ಕಣ್ಮರೆ; ಕಾರಣ ಬೆಲೆ ಏರಿಕೆ, ಅಲಭ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.