ETV Bharat / state

ಪ್ರವಾಹ ‌ಪೀಡಿತ ಪ್ರದೇಶಕ್ಕೆ ಭೇಟಿ ನೆಪದಲ್ಲಿ ರೋಡ್​ ಶೋ ನಡೆಸಿದ ಸಿದ್ದರಾಮಯ್ಯ...! - Crop damage in Naickal village

ಯಾದಗಿರಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಸಂತ್ರಸ್ತರ ಸಮಸ್ಯೆ ಕೇಳುವ ಬದಲು ಕಾರ್ಯಕರ್ತರನ್ನು ಭೇಟಿ ಮಾಡುವುದನ್ನೇ ದೊಡ್ಡ ಸಾಧನೆಯೆಂಬಂತೆ ಭಾವಿಸಿ ಸಂತ್ರಸ್ತರ ಅಳಲನ್ನು ಕಡೆಗಣಿಸಿದ್ದಾರೆ.

Siddaramaiah Road Show at Yadagiri
ರೋಡ್​ ಶೋ ನಡೆಸಿದ ಸಿದ್ದರಾಮಯ್ಯ
author img

By

Published : Oct 26, 2020, 8:12 PM IST

ಯಾದಗಿರಿ: ಪ್ರವಾಹ ‌ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ನಿರಾಶ್ರಿತರ ಗೋಳು ಕೇಳಬೇಕಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂತ್ರಸ್ತರ ಭೇಟಿ ನೆಪದಲ್ಲಿ ರೋಡ್ ಶೋ ನಡೆಸಿದ್ದಾರೆ.

ರೋಡ್​ ಶೋ ನಡೆಸಿದ ಸಿದ್ದರಾಮಯ್ಯ
ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಸಂತ್ರಸ್ತರ ಸಮಸ್ಯೆ ಕೇಳುವ ಬದಲು ಕಾರ್ಯಕರ್ತರ ಭೇಟಿ ಮಾಡುವುದನ್ನೇ ದೊಡ್ಡ ಸಾಧನೆ ಮಾಡಿಕೊಂಡಿದ್ದಾರೆ. ನಂತರ, ಹುರಸಗುಂಡಗಿಗೆ ಭೇಟಿ ನೀಡಿ ನಿರಾಶ್ರಿತರ ಗೋಳು ಕೇಳದೆ, ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಧ್ವಜಾರೋಹಣ ಮಾಡಿ ಸರ್ಕಲ್‌ ಉದ್ಘಾಟನೆ ಮಾಡಿದ್ದಾರೆ.

ನಂತರ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡದೆ, ರಾಜ್ಯ ಹೆದ್ದಾರಿ ಮಧ್ಯದಲ್ಲಿಯೇ ವಾಹನ ನಿಲ್ಲಿಸಿ ಜನರತ್ತ ಕೈಬೀಸಿದರು. ಈ ವೇಳೆ ನಿರಾಶ್ರಿತರು ನಮಗೂ ಹೆಚ್ಚಿನ ಪರಿಹಾರ ಕಲ್ಪಿಸಬೇಕೆಂದು ನೋವು‌ ತೋಡಿಕೊಳ್ಳಲು ಮುಂದಾದರು. ಈ ವೇಳೆ ಜನರ ಮಾತು ಕೇಳಿಸಿಕೊಳ್ಳದ ಅವರು, ರೋಡ್ ಶೋ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಯಾದಗಿರಿ: ಪ್ರವಾಹ ‌ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ನಿರಾಶ್ರಿತರ ಗೋಳು ಕೇಳಬೇಕಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂತ್ರಸ್ತರ ಭೇಟಿ ನೆಪದಲ್ಲಿ ರೋಡ್ ಶೋ ನಡೆಸಿದ್ದಾರೆ.

ರೋಡ್​ ಶೋ ನಡೆಸಿದ ಸಿದ್ದರಾಮಯ್ಯ
ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಸಂತ್ರಸ್ತರ ಸಮಸ್ಯೆ ಕೇಳುವ ಬದಲು ಕಾರ್ಯಕರ್ತರ ಭೇಟಿ ಮಾಡುವುದನ್ನೇ ದೊಡ್ಡ ಸಾಧನೆ ಮಾಡಿಕೊಂಡಿದ್ದಾರೆ. ನಂತರ, ಹುರಸಗುಂಡಗಿಗೆ ಭೇಟಿ ನೀಡಿ ನಿರಾಶ್ರಿತರ ಗೋಳು ಕೇಳದೆ, ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಧ್ವಜಾರೋಹಣ ಮಾಡಿ ಸರ್ಕಲ್‌ ಉದ್ಘಾಟನೆ ಮಾಡಿದ್ದಾರೆ.

ನಂತರ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡದೆ, ರಾಜ್ಯ ಹೆದ್ದಾರಿ ಮಧ್ಯದಲ್ಲಿಯೇ ವಾಹನ ನಿಲ್ಲಿಸಿ ಜನರತ್ತ ಕೈಬೀಸಿದರು. ಈ ವೇಳೆ ನಿರಾಶ್ರಿತರು ನಮಗೂ ಹೆಚ್ಚಿನ ಪರಿಹಾರ ಕಲ್ಪಿಸಬೇಕೆಂದು ನೋವು‌ ತೋಡಿಕೊಳ್ಳಲು ಮುಂದಾದರು. ಈ ವೇಳೆ ಜನರ ಮಾತು ಕೇಳಿಸಿಕೊಳ್ಳದ ಅವರು, ರೋಡ್ ಶೋ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.