ETV Bharat / state

CAA ಜಾರಿಯಾದರೆ ರಾಹುಲ್ ಗಾಂಧಿ ಅಡ್ರೆಸ್​ ಇಲ್ಲದೆ ಇಟಲಿಗೆ ಹೋಗಬೇಕಾಗುತ್ತೆ: ರಾಜುಗೌಡ - ಬಿಜೆಪಿ ಶಾಸಕ ರಾಜುಗೌಡ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್​ ಯಾದಗಿರಿ

ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿರುವ ಕಾಂಗ್ರೆಸ್​ ಮುಖಂಡರಿಗೆ ಈಗ ಬೇರೆಯದೇ ಚಿಂತೆ ಶುರುವಾಗಿದೆ. ಸಿಎಎ ಹಾಗೂ ಎನ್​ಆರ್​ಸಿ ಅನುಷ್ಠಾನಗೊಂಡರೇ ರಾಹುಲ್​ ಗಾಂಧಿ ಅವರಿಗೆ ಇಲ್ಲಿಯ ಅಡ್ರಸ್​ ಇಲ್ಲದಂತಾಗಿ ಇಟಲಿಗೆ ಹೋಗಬೇಕಾಗುತ್ತದೆ ಎಂದು ಶಾಸಕ ರಾಜುಗೌಡ ಅವರು ಸಿಎಎ ಕುರಿತು ಆಯೋಜಿದ್ದ ಜನಜಾಗೃತಿ ಅಭಿಯಾನದಲ್ಲಿ ಲೇವಡಿ ಮಾಡಿದರು.

MLA Raju Gowda
ಶಾಸಕ ರಾಜುಗೌಡ
author img

By

Published : Jan 12, 2020, 5:28 AM IST

ಯಾದಗಿರಿ: ಸಿಎಎ ಮತ್ತು ಎನ್​ಆರ್​ಸಿ ಜಾರಿಯಾದರೇ ರಾಹುಲ್ ಗಾಂಧಿ ಇಲ್ಲಿಯ ಅಡ್ರಸ್​ ಇಲ್ಲದಂತಾಗಿ ಇಟಲಿಗೆ ಹೋಗಬೇಕಾಗುತ್ತದೆ ಎಂದು ಶಾಸಕ ರಾಜುಗೌಡ ವ್ಯಂಗ್ಯವಾಡಿದರು.

ಸಿಎಎ ಕುರಿತು ಆಯೋಜಿದ್ದ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಶಾಸಕ ರಾಜುಗೌಡ

ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಆಯೋಜಿದ್ದ ಜನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿರುವ ಕಾಂಗ್ರೆಸ್​ ಮುಖಂಡರಿಗೆ ಈಗ ಬೇರೆಯದೇ ಚಿಂತೆ ಶುರುವಾಗಿದೆ. ಸಿಎಎ ಹಾಗೂ ಎನ್​ಆರ್​ಸಿ ಅನುಷ್ಠಾನಗೊಂಡರೇ ರಾಹುಲ್​ ಗಾಂಧಿ ಅವರಿಗೆ ಇಲ್ಲಿಯ ಅಡ್ರಸ್​ ಇಲ್ಲದಂತಾಗಿ ಇಟಲಿಗೆ ಹೋಗಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

ಕಾಗ್ರೆಸ್​ನವರು ತಮ್ಮ ನಾಯಕ ಹೊರ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಪೌರತ್ವ ತಿದ್ದುಪಡೆ ಕಾಯ್ದೆಗೆ ವಿರೋಧಿಸುತ್ತಿದ್ದರೆ. ಮುಸ್ಲಿಮರು ಇಲ್ಲಿಯೇ ಹುಟ್ಟಿದ್ದೇವೆ, ಇಲ್ಲಿಯೇ ಸಾಯುತ್ತೇವೆ ಎನ್ನುತ್ತಿದ್ದಾರೆ. ಅವರು ಎಲ್ಲಿಗೂ ಹೋಗುವ ಅಗತ್ಯ ಇಲ್ಲ. ಕಾಯ್ದೆ ಜಾರಿಯಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಮೋದಿ ಅವರನ್ನು ನೆರವಾಗಿ ಎದುರಸಲು ಆಗದ ಕಾಂಗ್ರೆಸ್​ನವರು ಸಿಎಎ ವಿಚಾರವನ್ನು ಮುಂದಿಟ್ಟುಕೊಂಡು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾವುದೇ ಗೊಂದಲ ಇಲ್ಲ. ಗೊಂದಲ ಇರುವುದು ಕೆಲವು ಪಕ್ಷದವರಲ್ಲಿ ಮಾತ್ರ. ಸಿಎಎ ಬಗ್ಗೆ ಕಾಂಗ್ರೆಸ್​ಗೆ ತಿಳಿ ಹೇಳಲು ವಿಶೇಷ ಕ್ಲಾಸ್ ತೆಗೆದುಕೊಳ್ಳಬೇಕಿದೆ. ವಿಶೇಷ ಕ್ಲಾಸ್ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ ಎಂದು ರಾಜುಗೌಡ ಹೇಳಿದರು.

ಯಾದಗಿರಿ: ಸಿಎಎ ಮತ್ತು ಎನ್​ಆರ್​ಸಿ ಜಾರಿಯಾದರೇ ರಾಹುಲ್ ಗಾಂಧಿ ಇಲ್ಲಿಯ ಅಡ್ರಸ್​ ಇಲ್ಲದಂತಾಗಿ ಇಟಲಿಗೆ ಹೋಗಬೇಕಾಗುತ್ತದೆ ಎಂದು ಶಾಸಕ ರಾಜುಗೌಡ ವ್ಯಂಗ್ಯವಾಡಿದರು.

ಸಿಎಎ ಕುರಿತು ಆಯೋಜಿದ್ದ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಶಾಸಕ ರಾಜುಗೌಡ

ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಆಯೋಜಿದ್ದ ಜನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿರುವ ಕಾಂಗ್ರೆಸ್​ ಮುಖಂಡರಿಗೆ ಈಗ ಬೇರೆಯದೇ ಚಿಂತೆ ಶುರುವಾಗಿದೆ. ಸಿಎಎ ಹಾಗೂ ಎನ್​ಆರ್​ಸಿ ಅನುಷ್ಠಾನಗೊಂಡರೇ ರಾಹುಲ್​ ಗಾಂಧಿ ಅವರಿಗೆ ಇಲ್ಲಿಯ ಅಡ್ರಸ್​ ಇಲ್ಲದಂತಾಗಿ ಇಟಲಿಗೆ ಹೋಗಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

ಕಾಗ್ರೆಸ್​ನವರು ತಮ್ಮ ನಾಯಕ ಹೊರ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಪೌರತ್ವ ತಿದ್ದುಪಡೆ ಕಾಯ್ದೆಗೆ ವಿರೋಧಿಸುತ್ತಿದ್ದರೆ. ಮುಸ್ಲಿಮರು ಇಲ್ಲಿಯೇ ಹುಟ್ಟಿದ್ದೇವೆ, ಇಲ್ಲಿಯೇ ಸಾಯುತ್ತೇವೆ ಎನ್ನುತ್ತಿದ್ದಾರೆ. ಅವರು ಎಲ್ಲಿಗೂ ಹೋಗುವ ಅಗತ್ಯ ಇಲ್ಲ. ಕಾಯ್ದೆ ಜಾರಿಯಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಮೋದಿ ಅವರನ್ನು ನೆರವಾಗಿ ಎದುರಸಲು ಆಗದ ಕಾಂಗ್ರೆಸ್​ನವರು ಸಿಎಎ ವಿಚಾರವನ್ನು ಮುಂದಿಟ್ಟುಕೊಂಡು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾವುದೇ ಗೊಂದಲ ಇಲ್ಲ. ಗೊಂದಲ ಇರುವುದು ಕೆಲವು ಪಕ್ಷದವರಲ್ಲಿ ಮಾತ್ರ. ಸಿಎಎ ಬಗ್ಗೆ ಕಾಂಗ್ರೆಸ್​ಗೆ ತಿಳಿ ಹೇಳಲು ವಿಶೇಷ ಕ್ಲಾಸ್ ತೆಗೆದುಕೊಳ್ಳಬೇಕಿದೆ. ವಿಶೇಷ ಕ್ಲಾಸ್ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ ಎಂದು ರಾಜುಗೌಡ ಹೇಳಿದರು.

Intro:ಸಿಎಎ, ಎನ್ ಆರ್ ಸಿ ಜಾರಿಯಿಂದ ರಾಹುಲ್ ಗಾಂಧಿ ಅಡ್ತೆಸ್ ಇಲ್ಲದಂತಾಗಿ ಇಟಲಿಗೆ ಹೋಗಬೇಕಾಗುತ್ತದೆ, ಇದರಿಂದ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಂತ ಹೇಳಿಕೊಂಡು ತಿರುಗುತ್ತಿರಿವ ಕಾಂಗ್ರಸ್ ನವರಿಗೆ ಈಗ ಬೇರೆ ಚಿಂತೆ ಶುರುವಾಗಿದೆ ಅಂತ ಬಿಜೆಪಿ ಶಾಸಕ ರಾಜುಗೌಡ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರು ಕಾಂಗ್ರೆಸ್ ಪಕ್ಷದ ನಡೆಗೆ ಯಾದಗಿರಿಯಲ್ಲಿ ಲೇವಡಿ ಮಾಡಿದ್ದಾರೆ..

Body:ನಮ್ಮ ನಾಯಕ ಹೊರ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಕೈ ನಾಯಕರಿಂದ ಪೌರತ್ವ ತಿದ್ದುಪಡೆಗೆ ಕಾಯ್ದೆಗೆ ಕಾಂಗ್ರೆಸ್ ನವರು ವಿರೋಧ ಮಾಡುತ್ತಿದ್ದರೆ ಅಂತ ಕೈ ನಾಯಕರಿಗೆ ಶಾಸಕ ರಾಜುಗೌಡ ಟಾಂಗ್ ನೀಡಿದ್ದರೆ. ನಗರದ ಪದವಿ ಪೂರ್ವ ಕಲೇಜಿನ ಮೈದಾನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಸ್ಲಿಂಮರು ಇಲ್ಲೇ ಹುಟ್ಟಿದ್ದೇವೆ ಇಲ್ಲೇ ಸಾಯುತ್ತೇವೆ ಅಂತಿದ್ದಾರೆ ಅವರು ಎಲ್ಲಿಯೂ ಹೋಗುವ ಅಗತ್ಯ ಇಲ್ಲ ಇದರಿಂದ ದೇಶದ ಮುಸ್ಲಿಮರಿಗೆ ಯಾವೂದೇ ತೊಂದರೆ ಆಗಲ್ಲ ಅಂತ ತಿಳಿಸಿದರು. ಮೋದಿಯವರನ್ನ ಡೈರೆಕ್ಟಾಗಿ ಎದುರಸಲು ಕಾಂಗ್ರೆಸ್ ಗೆ ಆಗುತ್ತಿಲ್ಲ ಹೀಗಾಗಿ ಸಿಎಎ ಬಗ್ಗೆ ಜನರ ದಾರಿ ತಪ್ಪಿಸುವಂತಾ ಕೆಲಸ ಮಾಡ್ತಿದ್ದಾರೆ ಅಂತ ಕಾಂಗ್ರಸ್ ಪಕ್ಷದ ವಿರುದ್ಧ ಹರಿಹಾಯ್ದರು.

Conclusion:ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಗೊಂದಲ ಎಲ್ಲೂ ಇಲ್ಲ, ಗೊಂದಲ ಕೆಲ ಪಕ್ಷದವರಲ್ಲಿದೆ
ಸಿಎಎ ವಿಚಾರವಾಗಿ ಕಾಂಗ್ರೆಸ್ ಗೆ ತಿಳಿಹೇಳಲು ವಿಶೇಷ ಕ್ಲಾಸ್ ಅಗತ್ಯ ಇದೆ, ಕಾಂಗ್ರೆಸ್ ಗೆ ವಿಶೇಷ ಕ್ಲಾಸ್ ತೆಗೆದುಕೊಳ್ಳುವಂತೆ ಸಿಎಂ ಬಿಎಸ್ ವೈ ಅವರಿಗೆ ಮನವಿ ಮಾಡುತ್ತೇವೆ ಅಂತ ಶಾಸಕ ರಾಜುಗೌಡ ಮಾತಿನ ಚಾಟಿ ಬೀಸಿದರು...

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.