ETV Bharat / state

ಸೀತಾಫಲ ಆಸೆ ತೋರಿಸಿ ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ: ಯಾದಗಿರಿಯಲ್ಲಿ ಆರೋಪಿ ಅರೆಸ್ಟ್‌

author img

By

Published : Oct 8, 2021, 12:41 PM IST

Updated : Oct 8, 2021, 1:16 PM IST

ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 4ರಂದು ಪ್ರಕರಣ ನಡೆದಿದ್ದು, ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

Man arrested for raping relative in Yadigir
ಸಹೋದರ ಸಂಬಂಧಿಯಿಂದಲೇ ಅತ್ಯಾಚಾರ..ಪೊಲೀಸರಿಂದ ಕಾಮುಕನ ಬಂಧನ

ಯಾದಗಿರಿ: ಸಹೋದರ ಸಂಬಂಧಿಯೇ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 4ರಂದು ಪ್ರಕರಣ ನಡೆದಿದ್ದು, ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ಘಟನೆಯ ಹಿನ್ನೆಲೆ:

ಸುರಪುರ ತಾಲೂಕಿನ ಗ್ರಾಮವೊಂದರ ಮಹಿಳೆ ಅಸ್ವಸ್ಥಗೊಂಡಿದ್ದು ಆಕೆ ಪೋಷಕರೊಂದಿಗೆ ಸುರಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ಆದರೆ ಅವರು ಆಸ್ಪತ್ರೆಯಲ್ಲಿ ನೀಡಲಾಗಿದ್ದ ಮಾತ್ರೆಗಳನ್ನು ಬಸ್ ನಿಲ್ದಾಣ ಹತ್ತಿರದ ಎಳನೀರು ಅಂಗಡಿಯೊಂದರಲ್ಲಿ ಮರೆತು ಬಂದಿದ್ದರು. ಹೀಗಾಗಿ, ಮಾತ್ರೆಗಳನ್ನು ತರಲು ಸುರಪುರಕ್ಕೆ ವಾಪಸ್​ ತೆರಳಲು ಗ್ರಾಮದ ಬಸ್ ನಿಲ್ದಾಣಕ್ಕೆ ಬಂದಿದ್ದಾಗ, ಬೈಕ್​ನಲ್ಲಿ ಬಂದ ಮಹಿಳೆಯ ಸಹೋದರ ಸಂಬಂಧಿ ಸುರಪುರಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಬಸ್ ಬರುವುದು ತಡವಾಗಬಹುದು ಎಂದು ಆತನ ಜೊತೆಗೆ ಬೈಕ್‌ನಲ್ಲಿ ಮಹಿಳೆ ತೆರಳಿದ್ದಾರೆ. ಆ ಬಳಿಕ ಸುರಪುರಕ್ಕೆ ಬಂದು ಮಾತ್ರೆಗಳನ್ನು ತೆಗೆದುಕೊಂಡು ಮರಳಿ ಬೈಕ್​ನಲ್ಲಿ ಮನೆ ಕಡೆ ಹೊರಟರು. ಆದರೆ ಮಾರ್ಗಮಧ್ಯೆ ಹೊಲದ ಬಳಿ ಒಬ್ಬರನ್ನು ಭೇಟಿಯಾಗಬೇಕು ಎಂದು ಆತ ಹಾದಿ ಬದಲಿಸಿದ್ದಾನೆ. ಈ ವೇಳೆ ನಿರ್ಜನ ಪ್ರದೇಶ ಬಂದಾಗ ಮಹಿಳೆ ಪ್ರಶ್ನಿಸಿದ್ದರು. ಆರೋಪಿ ಇಲ್ಲಿ ಸೀತಾಫಲ ಹಣ್ಣುಗಳಿವೆ ತೆಗೆದುಕೊಳ್ಳೋಣ ಎಂದಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದು, ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಮಹಿಳೆ ಗೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಈ ದೂರು ಆಧರಿಸಿ ಅತ್ಯಚಾರಿಯನ್ನು ಬಂಧಿಸಿರುವ ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ, ಪತಿಯಿಂದಲೇ ಕೊಲೆ ಶಂಕೆ

ಯಾದಗಿರಿ: ಸಹೋದರ ಸಂಬಂಧಿಯೇ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 4ರಂದು ಪ್ರಕರಣ ನಡೆದಿದ್ದು, ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ಘಟನೆಯ ಹಿನ್ನೆಲೆ:

ಸುರಪುರ ತಾಲೂಕಿನ ಗ್ರಾಮವೊಂದರ ಮಹಿಳೆ ಅಸ್ವಸ್ಥಗೊಂಡಿದ್ದು ಆಕೆ ಪೋಷಕರೊಂದಿಗೆ ಸುರಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ಆದರೆ ಅವರು ಆಸ್ಪತ್ರೆಯಲ್ಲಿ ನೀಡಲಾಗಿದ್ದ ಮಾತ್ರೆಗಳನ್ನು ಬಸ್ ನಿಲ್ದಾಣ ಹತ್ತಿರದ ಎಳನೀರು ಅಂಗಡಿಯೊಂದರಲ್ಲಿ ಮರೆತು ಬಂದಿದ್ದರು. ಹೀಗಾಗಿ, ಮಾತ್ರೆಗಳನ್ನು ತರಲು ಸುರಪುರಕ್ಕೆ ವಾಪಸ್​ ತೆರಳಲು ಗ್ರಾಮದ ಬಸ್ ನಿಲ್ದಾಣಕ್ಕೆ ಬಂದಿದ್ದಾಗ, ಬೈಕ್​ನಲ್ಲಿ ಬಂದ ಮಹಿಳೆಯ ಸಹೋದರ ಸಂಬಂಧಿ ಸುರಪುರಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಬಸ್ ಬರುವುದು ತಡವಾಗಬಹುದು ಎಂದು ಆತನ ಜೊತೆಗೆ ಬೈಕ್‌ನಲ್ಲಿ ಮಹಿಳೆ ತೆರಳಿದ್ದಾರೆ. ಆ ಬಳಿಕ ಸುರಪುರಕ್ಕೆ ಬಂದು ಮಾತ್ರೆಗಳನ್ನು ತೆಗೆದುಕೊಂಡು ಮರಳಿ ಬೈಕ್​ನಲ್ಲಿ ಮನೆ ಕಡೆ ಹೊರಟರು. ಆದರೆ ಮಾರ್ಗಮಧ್ಯೆ ಹೊಲದ ಬಳಿ ಒಬ್ಬರನ್ನು ಭೇಟಿಯಾಗಬೇಕು ಎಂದು ಆತ ಹಾದಿ ಬದಲಿಸಿದ್ದಾನೆ. ಈ ವೇಳೆ ನಿರ್ಜನ ಪ್ರದೇಶ ಬಂದಾಗ ಮಹಿಳೆ ಪ್ರಶ್ನಿಸಿದ್ದರು. ಆರೋಪಿ ಇಲ್ಲಿ ಸೀತಾಫಲ ಹಣ್ಣುಗಳಿವೆ ತೆಗೆದುಕೊಳ್ಳೋಣ ಎಂದಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದು, ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಮಹಿಳೆ ಗೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಈ ದೂರು ಆಧರಿಸಿ ಅತ್ಯಚಾರಿಯನ್ನು ಬಂಧಿಸಿರುವ ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ, ಪತಿಯಿಂದಲೇ ಕೊಲೆ ಶಂಕೆ

Last Updated : Oct 8, 2021, 1:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.