ETV Bharat / state

ಸುರಪುರದಲ್ಲಿ ಉದ್ಯೋಗ ಖಾತ್ರಿ ಕೂಲಿಕಾರರ ಧರಣಿ: ಕೂಲಿ ಹಣ ನೀಡುವಂತೆ ಆಗ್ರಹ - ಸುರಪುರದ ಪ್ರತಿಭಟನೆ ಸುದ್ದಿ

ಲಾಕ್​ಡೌನ್​ ಸಂದರ್ಭದಲ್ಲಿ ಕೆಲಸ ಮಾಡಿಸಿಕೊಂಡಿರುವ ಕೂಲಿ ಹಣ ನೀಡುವಂತೆ ಸುರಪುರದಲ್ಲಿ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಧರಣಿ ನಡೆಸಿದರು.

labours protest
ಕೂಲಿಕಾರರ ಧರಣಿ
author img

By

Published : Oct 13, 2020, 3:31 PM IST

ಸುರಪುರ/ಯಾದಗಿರಿ: ಬಾಕಿ ಉಳಿಸಿಕೊಂಡಿರುವ ಕೂಲಿಹಣವನ್ನು ನೀಡುವಂತೆ ಆಗ್ರಹಿಸಿ ಸುರಪುರ ತಾಲೂಕು ಪಂಚಾಯತ್ ಮುಂದೆ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಧರಣಿ ನಡೆಸಿದ್ರು.

ಕೂಲಿಕಾರರ ಧರಣಿ

ತಾಲೂಕಿನ ಅದಕೇರಾ ಗ್ರಾಮ ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಕಾರ್ಮಿಕರಾದ ಪದ್ಮಾವತಿ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮಿಂದ ಕೂಲಿ ಮಾಡಿಸಿಕೊಂಡು ಎರಡು ತಿಂಗಳಾದರೂ ಕೂಲಿ ಹಣ ನೀಡಿಲ್ಲ. ಆದ್ದರಿಂದ ಕೂಲಿ ನೀಡುವವರೆಗೆ ಧರಣಿ ಮಾಡುವುದಾಗಿ ತಿಳಿಸಿದರು.

ಧರಣಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಆಗಮಿಸಿ, ಕೂಲಿಕಾರರ ಮನವಿ ಆಲಿಸಿ ನಂತರ ಮಾತನಾಡಿ, ನಿಮ್ಮ ಕೂಲಿ ಹಣವನ್ನು ಒಂದು ವಾರದೊಳಗೆ ನೀಡುವುದಾಗಿ ಭರವಸೆ ನೀಡಿದ ನಂತರ ಧರಣಿ ನಿಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ವಿಶ್ವನಾಥ, ಕಾರ್ಮಿಕ ಹೋರಾಟಗಾರ ಶರಣು ಅನಸೂರ ಸೇರಿದಂತೆ ಅನೇಕ ಜನ ಮಹಿಳಾ ಕೂಲಿಕಾರರಿದ್ದರು.

ಸುರಪುರ/ಯಾದಗಿರಿ: ಬಾಕಿ ಉಳಿಸಿಕೊಂಡಿರುವ ಕೂಲಿಹಣವನ್ನು ನೀಡುವಂತೆ ಆಗ್ರಹಿಸಿ ಸುರಪುರ ತಾಲೂಕು ಪಂಚಾಯತ್ ಮುಂದೆ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಧರಣಿ ನಡೆಸಿದ್ರು.

ಕೂಲಿಕಾರರ ಧರಣಿ

ತಾಲೂಕಿನ ಅದಕೇರಾ ಗ್ರಾಮ ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಕಾರ್ಮಿಕರಾದ ಪದ್ಮಾವತಿ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮಿಂದ ಕೂಲಿ ಮಾಡಿಸಿಕೊಂಡು ಎರಡು ತಿಂಗಳಾದರೂ ಕೂಲಿ ಹಣ ನೀಡಿಲ್ಲ. ಆದ್ದರಿಂದ ಕೂಲಿ ನೀಡುವವರೆಗೆ ಧರಣಿ ಮಾಡುವುದಾಗಿ ತಿಳಿಸಿದರು.

ಧರಣಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಆಗಮಿಸಿ, ಕೂಲಿಕಾರರ ಮನವಿ ಆಲಿಸಿ ನಂತರ ಮಾತನಾಡಿ, ನಿಮ್ಮ ಕೂಲಿ ಹಣವನ್ನು ಒಂದು ವಾರದೊಳಗೆ ನೀಡುವುದಾಗಿ ಭರವಸೆ ನೀಡಿದ ನಂತರ ಧರಣಿ ನಿಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ವಿಶ್ವನಾಥ, ಕಾರ್ಮಿಕ ಹೋರಾಟಗಾರ ಶರಣು ಅನಸೂರ ಸೇರಿದಂತೆ ಅನೇಕ ಜನ ಮಹಿಳಾ ಕೂಲಿಕಾರರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.