ETV Bharat / state

ಅಗತ್ಯ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಿದ ಸುರಪುರ ಕೂಲಿ ಕಾರ್ಮಿಕರು - Employment Guarantee Scheme

ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಸರ್ಕಾರ ಅಗತ್ಯ ಸೌಲಭ್ಯ ನೀಡಬೇಕು ಹಾಗೂ ಕೂಲಿಯನ್ನು ಹೆಚ್ಚಿಸಬೇಕು ಎಂದು ಕಾರ್ಮಿಕರು ಮನವಿ ಮಾಡಿದ್ದಾರೆ.

Daily wage workers requested for basic facilities
ಸುರಪುರ ಕೂಲಿ ಕಾರ್ಮಿಕರು
author img

By

Published : May 21, 2020, 9:41 PM IST

ಸುರಪುರ/ಯಾದಗಿರಿ: ಸುರಪುರ ತಾಲೂಕಿನ ಲಕ್ಷ್ಮಿಪುರ (ಅರಕೇರಾ .ಜೆ ಗ್ರಾಮ) ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಉದ್ಯೋಗ ಖಾತ್ರಿಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಮಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.

ಅಗತ್ಯ ಸೌಲಭ್ಯಗಳಿಗೆ ಮನವಿ ಮಾಡಿದ ಸುರಪುರ ಕೂಲಿ ಕಾರ್ಮಿಕರು

ದೇವರಾಜ್ ನಾಯಕ ಎಂಬುವವರು ಮಾತನಾಡಿ ಉದ್ಯೋಗ ಖಾತ್ರಿಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮಾಸ್ಕ್ ನೀಡಿಲ್ಲ ಸ್ಯಾನಿಟೈಜರ್ ಕೂಡಾ ನೀಡಿಲ್ಲ. ಅಲ್ಲದೆ ಕೆಲಸಕ್ಕೆ ಬಂದ ಕಾರ್ಮಿಕರ ಮಕ್ಕಳಿಗೆ ನೆರಳಿನ ವ್ಯವಸ್ಥೆ ಕೂಡಾ ಇಲ್ಲವಾಗಿದೆ. ಅಲ್ಲದೆ ಈಗ ಕಾರ್ಮಿಕರಿಗೆ ನೀಡುತ್ತಿರುವ 280 ರೂಪಾಯಿ ಹಣ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಪ್ರತಿದಿನದ ಕೂಲಿಯನ್ನು ಕನಿಷ್ಠ 600 ರೂಪಾಯಿಗೆ ಏರಿಸಬೇಕು ಎಂದು ಮನವಿ ಮಾಡಿದ್ದಾರೆ. ಸರ್ಕಾರ ಈ ಕೂಲಿ ಕಾರ್ಮಿಕರ ಬೇಡಿಕೆಗೆ ಸ್ಪಂದಿಸಿ ಕೂಲಿ ಹಣ ಹೆಚ್ಚಿಸಿ ನೆರವಾಗುವುದೆ ಎಂಬುದನ್ನು ಕಾದು ನೋಡಬೇಕಿದೆ.

ಸುರಪುರ/ಯಾದಗಿರಿ: ಸುರಪುರ ತಾಲೂಕಿನ ಲಕ್ಷ್ಮಿಪುರ (ಅರಕೇರಾ .ಜೆ ಗ್ರಾಮ) ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಉದ್ಯೋಗ ಖಾತ್ರಿಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರು ತಮಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.

ಅಗತ್ಯ ಸೌಲಭ್ಯಗಳಿಗೆ ಮನವಿ ಮಾಡಿದ ಸುರಪುರ ಕೂಲಿ ಕಾರ್ಮಿಕರು

ದೇವರಾಜ್ ನಾಯಕ ಎಂಬುವವರು ಮಾತನಾಡಿ ಉದ್ಯೋಗ ಖಾತ್ರಿಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮಾಸ್ಕ್ ನೀಡಿಲ್ಲ ಸ್ಯಾನಿಟೈಜರ್ ಕೂಡಾ ನೀಡಿಲ್ಲ. ಅಲ್ಲದೆ ಕೆಲಸಕ್ಕೆ ಬಂದ ಕಾರ್ಮಿಕರ ಮಕ್ಕಳಿಗೆ ನೆರಳಿನ ವ್ಯವಸ್ಥೆ ಕೂಡಾ ಇಲ್ಲವಾಗಿದೆ. ಅಲ್ಲದೆ ಈಗ ಕಾರ್ಮಿಕರಿಗೆ ನೀಡುತ್ತಿರುವ 280 ರೂಪಾಯಿ ಹಣ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಪ್ರತಿದಿನದ ಕೂಲಿಯನ್ನು ಕನಿಷ್ಠ 600 ರೂಪಾಯಿಗೆ ಏರಿಸಬೇಕು ಎಂದು ಮನವಿ ಮಾಡಿದ್ದಾರೆ. ಸರ್ಕಾರ ಈ ಕೂಲಿ ಕಾರ್ಮಿಕರ ಬೇಡಿಕೆಗೆ ಸ್ಪಂದಿಸಿ ಕೂಲಿ ಹಣ ಹೆಚ್ಚಿಸಿ ನೆರವಾಗುವುದೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.