ETV Bharat / state

ಸುರಪುರ ನಗರಸಭೆ ವ್ಯಾಪ್ತಿಯಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು: ಜನರ ಆಕ್ರೋಶ - drinking water supply

ನಗರಸಭೆ ಸರಬರಾಜು ಮಾಡುವ ನೀರು ಕಲುಷಿತವಾಗಿದ್ದು, ಕುಡಿಯುವುದಕ್ಕಾಗಲಿ, ದಿನಬಳಕೆಗಾಗಲೀ ಯೋಗ್ಯವಾಗಿಲ್ಲ. ಆದ್ದರಿಂದ ನಗರಸಭೆ ಕೂಡಲೇ ಎಚ್ಚೆತ್ತು ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಸುರಪುರ ನಗರಸಭೆ ವ್ಯಾಪ್ತಿಯ ನಿವಾಸಿಗಳು ಒತ್ತಾಯಿಸಿದ್ದಾರೆ.

Contaminated drinking water supply
ಕಲುಷಿತ ಕುಡಿಯುವ ನೀರು ಸರಬರಾಜು
author img

By

Published : Aug 6, 2020, 6:58 PM IST

Updated : Aug 6, 2020, 10:07 PM IST

ಸುರಪುರ: ನಗರಸಭೆ ವ್ಯಾಪ್ತಿಯ ಸುರಪುರ ರಂಗಂಪೇಟೆ, ಕುಂಬಾರಪೇಟೆ, ತಿಮ್ಮಾಪುರ ಸೇರಿದಂತೆ 31 ವಾರ್ಡ್​ಗಳಿಗೂ ಕೃಷ್ಣಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ನೀರು ಕಲುಷಿತ ಆಗಿದ್ದರಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನದಿಯಿಂದ ನೀರನ್ನು ಶುದ್ಧೀಕರಣಗೊಳಿಸಿ ಮನೆಗಳಿಗೆ ಸರಬರಾಜು ಮಾಡುವ ನಿಯಮವಿದ್ದರೂ ಕೃಷ್ಣಾ ನದಿಯಿಂದ ಬರುವ ನೀರು ಯಾವುದೇ ಶುದ್ದೀಕರಣಗೊಳ್ಳದೆ ನೇರವಾಗಿ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ನದಿಯಲ್ಲಿರುವ ರಾಡಿ ಮಿಶ್ರಿತ ಕೊಳಚೆ ನೀರು ನೇರವಾಗಿ ಮನೆಗಳಿಗೆ ಬರುತ್ತಿದೆ. ಇಂತಹ ನೀರನ್ನು ಕುಡಿಯುವುದು ಹೇಗೆ? ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದರ ಕುರಿತು ಡಿಎಸ್ಎಸ್ ತಾಲೂಕು ಸಂಘಟನಾ ಸಂಚಾಲಕ ಶರಣಪ್ಪ ತಳವಾರಗೇರಾ ಮಾತನಾಡಿ, ನಗರಸಭೆ ಸರಬರಾಜು ಮಾಡುವ ನೀರು ಕಲುಷಿತವಾಗಿದ್ದು, ಕುಡಿಯುವುದಕ್ಕಾಗಲಿ, ದಿನಬಳಕೆಗಾಗಲೀ ಯೋಗ್ಯವಾಗಿಲ್ಲ. ಆದರೆ, ನಗರದ ಪ್ರತಿಶತ 90ರಷ್ಟು ಜನರು ಇಂತಹ ಗಲೀಜು ನೀರನ್ನು ಕುಡಿಯುವಂತಾಗಿದೆ. ಇದರಿಂದ ಕೆಮ್ಮು, ನೆಗಡಿ, ಮಲೇರಿಯಾ, ಕಾಲರಾದಂತ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ನಗರಸಭೆ ಕೂಡಲೇ ಎಚ್ಚೆತ್ತು ಶುದ್ಧ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಕಲುಷಿತ ಕುಡಿಯುವ ನೀರು ಸರಬರಾಜು

ಮಳೆಗಾಲದಲ್ಲಿ ಕುಡಿಯುವ ನೀರಿನ ಮಲಿನತೆಯಿಂದ ರೋಗ ಹರಡುವ ಸಂಭವ ಹೆಚ್ಚಾಗಿರಲಿದೆ. ನಗರಸಭೆ ಇನ್ನಾದರೂ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎನ್ನುತ್ತಾರೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಶರಣಪ್ಪ ತಳವಾರಗೇರಾ.

ಸುರಪುರ: ನಗರಸಭೆ ವ್ಯಾಪ್ತಿಯ ಸುರಪುರ ರಂಗಂಪೇಟೆ, ಕುಂಬಾರಪೇಟೆ, ತಿಮ್ಮಾಪುರ ಸೇರಿದಂತೆ 31 ವಾರ್ಡ್​ಗಳಿಗೂ ಕೃಷ್ಣಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ನೀರು ಕಲುಷಿತ ಆಗಿದ್ದರಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನದಿಯಿಂದ ನೀರನ್ನು ಶುದ್ಧೀಕರಣಗೊಳಿಸಿ ಮನೆಗಳಿಗೆ ಸರಬರಾಜು ಮಾಡುವ ನಿಯಮವಿದ್ದರೂ ಕೃಷ್ಣಾ ನದಿಯಿಂದ ಬರುವ ನೀರು ಯಾವುದೇ ಶುದ್ದೀಕರಣಗೊಳ್ಳದೆ ನೇರವಾಗಿ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ನದಿಯಲ್ಲಿರುವ ರಾಡಿ ಮಿಶ್ರಿತ ಕೊಳಚೆ ನೀರು ನೇರವಾಗಿ ಮನೆಗಳಿಗೆ ಬರುತ್ತಿದೆ. ಇಂತಹ ನೀರನ್ನು ಕುಡಿಯುವುದು ಹೇಗೆ? ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದರ ಕುರಿತು ಡಿಎಸ್ಎಸ್ ತಾಲೂಕು ಸಂಘಟನಾ ಸಂಚಾಲಕ ಶರಣಪ್ಪ ತಳವಾರಗೇರಾ ಮಾತನಾಡಿ, ನಗರಸಭೆ ಸರಬರಾಜು ಮಾಡುವ ನೀರು ಕಲುಷಿತವಾಗಿದ್ದು, ಕುಡಿಯುವುದಕ್ಕಾಗಲಿ, ದಿನಬಳಕೆಗಾಗಲೀ ಯೋಗ್ಯವಾಗಿಲ್ಲ. ಆದರೆ, ನಗರದ ಪ್ರತಿಶತ 90ರಷ್ಟು ಜನರು ಇಂತಹ ಗಲೀಜು ನೀರನ್ನು ಕುಡಿಯುವಂತಾಗಿದೆ. ಇದರಿಂದ ಕೆಮ್ಮು, ನೆಗಡಿ, ಮಲೇರಿಯಾ, ಕಾಲರಾದಂತ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ನಗರಸಭೆ ಕೂಡಲೇ ಎಚ್ಚೆತ್ತು ಶುದ್ಧ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಕಲುಷಿತ ಕುಡಿಯುವ ನೀರು ಸರಬರಾಜು

ಮಳೆಗಾಲದಲ್ಲಿ ಕುಡಿಯುವ ನೀರಿನ ಮಲಿನತೆಯಿಂದ ರೋಗ ಹರಡುವ ಸಂಭವ ಹೆಚ್ಚಾಗಿರಲಿದೆ. ನಗರಸಭೆ ಇನ್ನಾದರೂ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎನ್ನುತ್ತಾರೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಶರಣಪ್ಪ ತಳವಾರಗೇರಾ.

Last Updated : Aug 6, 2020, 10:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.