ETV Bharat / state

ಸುರಪುರ: ಬೀದಿ ಬದಿ ಮೊಬೈಲ್​ ಕ್ಯಾಂಟೀನ್​ ಆರಂಭಿಸಿದ ಖಾಸಗಿ ಶಾಲೆಯ ಮುಖ್ಯಸ್ಥ!

ಆರ್ಥಿಕ ಸಂಕಷ್ಟಕ್ಕೊಳಗಾದ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಶಾಲೆಯ ಮುಖ್ಯಸ್ಥ ಮತ್ತು ಶಿಕ್ಷಕರೊಬ್ಬರು ಜೀವನ ನಡೆಸಲು ಬೀದಿ ಬದಿ ಮೊಬೈಲ್​​ ಕ್ಯಾಂಟೀನ್​ ಆರಂಭಿಸಿದ್ದಾರೆ.

author img

By

Published : Aug 18, 2020, 1:30 PM IST

Updated : Aug 18, 2020, 1:57 PM IST

A teacher started mobile canteen in Yadagiri district
ಮೊಬೈಲ್​ ಕ್ಯಾಂಟೀನ್​ ಆರಂಭಿಸಿದ ಖಾಸಗಿ ಶಾಲೆಯ ಮುಖ್ಯಸ್ಥ

ಸುರಪುರ: ಕೊರೊನಾ ವೈರಸ್​ ಹಾವಳಿಗೆ ಜಗತ್ತೇ ನಡುಗಿದ್ದು, ಅದರ ಪರಿಣಾಮ ದೇಶದ ಎಲ್ಲಾ ರಂಗಗಳ ಮೇಲೆ ಬೀರಿದೆ. ವೈರಸ್ ನೀಡಿದ ಹೊಡೆತಕ್ಕೆ ತಾಲೂಕಿನ ಕೆಂಭಾವಿ ಪಟ್ಟಣದ ಪ್ರತಾಪ ಗಿರಿ ವೆಂಕಟಸುಬ್ಬಯ್ಯ ಶಾಸ್ತ್ರಿ (ಪಿವಿಎಸ್​) ಖಾಸಗಿ ಶಾಲೆಯ ಮುಖ್ಯಸ್ಥ ಹಾಗೂ ಶಿಕ್ಷಕರೊಬ್ಬರು ಬೀದಿಬದಿ ವ್ಯಾಪಾರದಲ್ಲಿ ತೊಡಗಿದ್ದಾರೆ.

ಒಬ್ಬ ಶಿಕ್ಷಕ ಮಕ್ಕಳಿಗೆ ಆದರ್ಶ ಹಾಗೂ ಸಮಾಜಕ್ಕೆ ಹೇಗೆ ಮಾದರಿಯಾಗಬಲ್ಲ ಎಂಬುದಕ್ಕೆ ಶಿಕ್ಷಕ ಸಂತೋಷ್ ಅವರೇ ಸಾಕ್ಷಿಯಾಗುತ್ತಾರೆ. ಸುಮಾರು 15 ವರ್ಷಗಳಿಂದ ಖಾಸಗಿ ಶಾಲೆಯೊಂದನ್ನು ನಡೆಸಿಕೊಂಡು ಬರುತ್ತಿರುವ ಅವರು, ಹಣ ಗಳಿಕೆಗೆ ಆಸೆಪಡದೆ ಅತಿ ಕಡಿಮೆ ಶುಲ್ಕದಲ್ಲೇ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಿ ಸಾರ್ಥಕತೆ ಮೆರೆದವರು.

A teacher started mobile canteen in Yadagiri district
ಮೊಬೈಲ್​ ಕ್ಯಾಂಟೀನ್​ ಆರಂಭಿಸಿದ ಖಾಸಗಿ ಶಾಲೆಯ ಮುಖ್ಯಸ್ಥ

ಪಿವಿಎಸ್ ಶಾಲೆ ಕೆಂಭಾವಿ ಪಟ್ಟಣದ ಎಲ್ಲರಿಗೂ ಚಿರಪರಿಚಿತ. ಆದರೆ, ಕಳೆದ 5 ತಿಂಗಳ ಹಿಂದೆ ರಾಜ್ಯದಲ್ಲಿ ಮಹಾಮಾರಿಯಂತೆ ವಕ್ಕರಿಸಿರುವ ಕೊರೊನಾ ವೈರಸ್​​​​ನಿಂದಾಗಿ ರಾಜ್ಯದಲ್ಲಿ ಲಾಕ್​​ಡೌನ್ ಘೋಷಣೆಯ ಕರಿಛಾಯೆ ಶಿಕ್ಷಣ ಸಂಸ್ಥೆಯ ಮೇಲೆ ಬೀರಿತು. ಇದರಿಂದಾಗಿ ಶಾಲೆ ನಡೆಯದ ಕಾರಣ ಜೀವನ ನಡೆಸುವುದು ಕಷ್ಟವಾಯಿತು.

ಮೊಬೈಲ್​ ಕ್ಯಾಂಟೀನ್​ ಆರಂಭಿಸಿದ ಖಾಸಗಿ ಶಾಲೆಯ ಶಿಕ್ಷಕ/ಮುಖ್ಯಸ್ಥ

ಶಾಲೆಗಾಗಿ ಮಾಡಿರುವ ಸಾಲವನ್ನು ತೀರಿಸುವ ಸಲುವಾಗಿ ಆರ್ಥಿಕ ತೊಂದರೆಗೆ ಸಿಲುಕಿರುವ ಸಂತೋಷ್ ಅವರು ಜೀವನ ನಡೆಸಲು ಪಟ್ಟಣದಲ್ಲಿ ಮಾರುಕಟ್ಟೆಯಲ್ಲಿ ಬೀದಿ ಬದಿ ಬಾಲಾಜಿ ಟಿಫಿನ್ಸ್ ಹೆಸರಿನ ಮೊಬೈಲ್ ಕ್ಯಾಂಟೀನ್ ಆರಂಭಿಸಿದ್ದಾರೆ.

ಈ ಮೊಬೈಲ್ ಕ್ಯಾಂಟೀನ್​​​ನಲ್ಲಿ ಇಡ್ಲಿ, ವಡೆ, ಪೂರಿ ಮತ್ತಿತರ ಉಪಹಾರದ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಇದು ಕೇವಲ ಒಬ್ಬ ಶಾಲೆಯ ಮುಖ್ಯಸ್ಥ ಸಂತೋಷ್ ಅವರ ಕತೆಯಷ್ಟೇ ಅಲ್ಲ, ಅವರಂತೆ ಖಾಸಗಿ ಶಾಲಾ-ಕಾಲೇಜುಗಳಲ್ಲಿ ದುಡಿಯುವ ಸಾವಿರಾರು ಶಿಕ್ಷಕರ ಬದುಕು ಸಹ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದೆ.

ಖಾಸಗಿ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿಗೆ ಆರ್ಥಿಕ ಸಹಾಯವನ್ನು ಸರ್ಕಾರ ಮಾಡಲಿ ಎಂಬುದು ಸ್ಥಳೀಯರ ಮನವಿಯಾಗಿದೆ.

ಸುರಪುರ: ಕೊರೊನಾ ವೈರಸ್​ ಹಾವಳಿಗೆ ಜಗತ್ತೇ ನಡುಗಿದ್ದು, ಅದರ ಪರಿಣಾಮ ದೇಶದ ಎಲ್ಲಾ ರಂಗಗಳ ಮೇಲೆ ಬೀರಿದೆ. ವೈರಸ್ ನೀಡಿದ ಹೊಡೆತಕ್ಕೆ ತಾಲೂಕಿನ ಕೆಂಭಾವಿ ಪಟ್ಟಣದ ಪ್ರತಾಪ ಗಿರಿ ವೆಂಕಟಸುಬ್ಬಯ್ಯ ಶಾಸ್ತ್ರಿ (ಪಿವಿಎಸ್​) ಖಾಸಗಿ ಶಾಲೆಯ ಮುಖ್ಯಸ್ಥ ಹಾಗೂ ಶಿಕ್ಷಕರೊಬ್ಬರು ಬೀದಿಬದಿ ವ್ಯಾಪಾರದಲ್ಲಿ ತೊಡಗಿದ್ದಾರೆ.

ಒಬ್ಬ ಶಿಕ್ಷಕ ಮಕ್ಕಳಿಗೆ ಆದರ್ಶ ಹಾಗೂ ಸಮಾಜಕ್ಕೆ ಹೇಗೆ ಮಾದರಿಯಾಗಬಲ್ಲ ಎಂಬುದಕ್ಕೆ ಶಿಕ್ಷಕ ಸಂತೋಷ್ ಅವರೇ ಸಾಕ್ಷಿಯಾಗುತ್ತಾರೆ. ಸುಮಾರು 15 ವರ್ಷಗಳಿಂದ ಖಾಸಗಿ ಶಾಲೆಯೊಂದನ್ನು ನಡೆಸಿಕೊಂಡು ಬರುತ್ತಿರುವ ಅವರು, ಹಣ ಗಳಿಕೆಗೆ ಆಸೆಪಡದೆ ಅತಿ ಕಡಿಮೆ ಶುಲ್ಕದಲ್ಲೇ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಿ ಸಾರ್ಥಕತೆ ಮೆರೆದವರು.

A teacher started mobile canteen in Yadagiri district
ಮೊಬೈಲ್​ ಕ್ಯಾಂಟೀನ್​ ಆರಂಭಿಸಿದ ಖಾಸಗಿ ಶಾಲೆಯ ಮುಖ್ಯಸ್ಥ

ಪಿವಿಎಸ್ ಶಾಲೆ ಕೆಂಭಾವಿ ಪಟ್ಟಣದ ಎಲ್ಲರಿಗೂ ಚಿರಪರಿಚಿತ. ಆದರೆ, ಕಳೆದ 5 ತಿಂಗಳ ಹಿಂದೆ ರಾಜ್ಯದಲ್ಲಿ ಮಹಾಮಾರಿಯಂತೆ ವಕ್ಕರಿಸಿರುವ ಕೊರೊನಾ ವೈರಸ್​​​​ನಿಂದಾಗಿ ರಾಜ್ಯದಲ್ಲಿ ಲಾಕ್​​ಡೌನ್ ಘೋಷಣೆಯ ಕರಿಛಾಯೆ ಶಿಕ್ಷಣ ಸಂಸ್ಥೆಯ ಮೇಲೆ ಬೀರಿತು. ಇದರಿಂದಾಗಿ ಶಾಲೆ ನಡೆಯದ ಕಾರಣ ಜೀವನ ನಡೆಸುವುದು ಕಷ್ಟವಾಯಿತು.

ಮೊಬೈಲ್​ ಕ್ಯಾಂಟೀನ್​ ಆರಂಭಿಸಿದ ಖಾಸಗಿ ಶಾಲೆಯ ಶಿಕ್ಷಕ/ಮುಖ್ಯಸ್ಥ

ಶಾಲೆಗಾಗಿ ಮಾಡಿರುವ ಸಾಲವನ್ನು ತೀರಿಸುವ ಸಲುವಾಗಿ ಆರ್ಥಿಕ ತೊಂದರೆಗೆ ಸಿಲುಕಿರುವ ಸಂತೋಷ್ ಅವರು ಜೀವನ ನಡೆಸಲು ಪಟ್ಟಣದಲ್ಲಿ ಮಾರುಕಟ್ಟೆಯಲ್ಲಿ ಬೀದಿ ಬದಿ ಬಾಲಾಜಿ ಟಿಫಿನ್ಸ್ ಹೆಸರಿನ ಮೊಬೈಲ್ ಕ್ಯಾಂಟೀನ್ ಆರಂಭಿಸಿದ್ದಾರೆ.

ಈ ಮೊಬೈಲ್ ಕ್ಯಾಂಟೀನ್​​​ನಲ್ಲಿ ಇಡ್ಲಿ, ವಡೆ, ಪೂರಿ ಮತ್ತಿತರ ಉಪಹಾರದ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಇದು ಕೇವಲ ಒಬ್ಬ ಶಾಲೆಯ ಮುಖ್ಯಸ್ಥ ಸಂತೋಷ್ ಅವರ ಕತೆಯಷ್ಟೇ ಅಲ್ಲ, ಅವರಂತೆ ಖಾಸಗಿ ಶಾಲಾ-ಕಾಲೇಜುಗಳಲ್ಲಿ ದುಡಿಯುವ ಸಾವಿರಾರು ಶಿಕ್ಷಕರ ಬದುಕು ಸಹ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದೆ.

ಖಾಸಗಿ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿಗೆ ಆರ್ಥಿಕ ಸಹಾಯವನ್ನು ಸರ್ಕಾರ ಮಾಡಲಿ ಎಂಬುದು ಸ್ಥಳೀಯರ ಮನವಿಯಾಗಿದೆ.

Last Updated : Aug 18, 2020, 1:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.