ETV Bharat / state

ಗೋರಿಯಲ್ಲಿದ್ದ ಶವದ ಬಾಯಿಗೆ ನೀರು ಬಿಟ್ಟರು! ಮಳೆಗಾಗಿ ವಿಜಯಪುರದಲ್ಲಿ ವಿಚಿತ್ರ ಪದ್ಧತಿ

author img

By

Published : Jul 10, 2022, 12:27 PM IST

Updated : Jul 10, 2022, 12:34 PM IST

ಮಳೆಗಾಗಿ ಪ್ರಾರ್ಥಿಸಿ ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ಗ್ರಾಮಸ್ಥರು ನೀರು ಹಾಕಿದ ವಿಚಿತ್ರ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆಯಿತು.

ಶವದ ಬಾಯಿಗೆ ನೀರು ಬಿಡುತ್ತಿರುವ ಗ್ರಾಮಸ್ಥರು
ಶವದ ಬಾಯಿಗೆ ನೀರು ಬಿಡುತ್ತಿರುವ ಗ್ರಾಮಸ್ಥರು

ವಿಜಯಪುರ: ಜ‌ನರು ಮಳೆಗಾಗಿ ಪೂಜೆ, ಹೋಮ-ಹವನ ಹಾಗು ಕತ್ತೆ, ಕಪ್ಪೆಗಳಿಗೆ ಮದುವೆ ಮಾಡುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಆದ್ರೆ, ವಿಜಯಪುರ ಜಿಲ್ಲೆಯ ರೈತರು ಮಳೆಗಾಗಿ ವಿಚಿತ್ರ ಆಚರಣೆ ಕೈಗೊಂಡರು. ಈ ಆಚರಣೆ ಕುರಿತು ಕೇಳಿದ್ರೆ ಆಶ್ಚರ್ಯ ಆಗೋದು ಪಕ್ಕಾ.

ಕಳೆದ 10 ದಿನಗಳಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಹೀಗಾಗಿ, ರೈತಾಪಿ ವರ್ಗ ಕಂಗಾಲಾಗಿದೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಸ್ಥರು ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ನೀರು ಹಾಕಿದರು.

ಶವದ ಬಾಯಿಗೆ ನೀರು ಬಿಡುತ್ತಿರುವ ಗ್ರಾಮಸ್ಥರು
ಶವದ ಬಾಯಿಗೆ ನೀರು ಬಿಡುತ್ತಿರುವ ಗ್ರಾಮಸ್ಥರು

ಕಳೆದ ಎರಡು ತಿಂಗಳೊಳಗೆ ಮೃತಪಟ್ಟವರ ಬಾಯಿ ತೆರೆದು ನೀರು ಹಾಕಿದ್ರೆ ಮಳೆ, ಬೆಳೆ ಚೆನ್ನಾಗಿ ಬರುತ್ತದೆ ಎಂದು ಹಿರಿಯರು ಹೇಳಿದ ಕಾರಣ ಗ್ರಾಮದ ಯುವಕರು ಈ ವಿಚಿತ್ರ ಆಚರಣೆ ಮಾಡಿದ್ದಾರೆ. ಕಾಕತಾಳೀಯವೆಂಬಂತೆ ಶವದ ಬಾಯಿಗೆ ನೀರು ಹಾಕಿದ ಬಳಿಕ ತಾಲೂಕಿನಲ್ಲಿ ಜಿಟಿ-ಜಿಟಿ ಮಳೆ ಆರಂಭವಾಗಿದೆಯಂತೆ. ಇದು ಗ್ರಾಮಸ್ಥರ ನಂಬಿಕೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಇದನ್ನೂ ಓದಿ: ಅಪಾಯ ಮಟ್ಟ ತಲುಪಿದ ನೇತ್ರಾವತಿ: ಅದ್ಯಪಾಡಿಯಲ್ಲಿ 35 ಮನೆ, ಕೃಷಿಭೂಮಿ ಜಲಾವೃತ


ವಿಜಯಪುರ: ಜ‌ನರು ಮಳೆಗಾಗಿ ಪೂಜೆ, ಹೋಮ-ಹವನ ಹಾಗು ಕತ್ತೆ, ಕಪ್ಪೆಗಳಿಗೆ ಮದುವೆ ಮಾಡುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಆದ್ರೆ, ವಿಜಯಪುರ ಜಿಲ್ಲೆಯ ರೈತರು ಮಳೆಗಾಗಿ ವಿಚಿತ್ರ ಆಚರಣೆ ಕೈಗೊಂಡರು. ಈ ಆಚರಣೆ ಕುರಿತು ಕೇಳಿದ್ರೆ ಆಶ್ಚರ್ಯ ಆಗೋದು ಪಕ್ಕಾ.

ಕಳೆದ 10 ದಿನಗಳಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಹೀಗಾಗಿ, ರೈತಾಪಿ ವರ್ಗ ಕಂಗಾಲಾಗಿದೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಸ್ಥರು ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ನೀರು ಹಾಕಿದರು.

ಶವದ ಬಾಯಿಗೆ ನೀರು ಬಿಡುತ್ತಿರುವ ಗ್ರಾಮಸ್ಥರು
ಶವದ ಬಾಯಿಗೆ ನೀರು ಬಿಡುತ್ತಿರುವ ಗ್ರಾಮಸ್ಥರು

ಕಳೆದ ಎರಡು ತಿಂಗಳೊಳಗೆ ಮೃತಪಟ್ಟವರ ಬಾಯಿ ತೆರೆದು ನೀರು ಹಾಕಿದ್ರೆ ಮಳೆ, ಬೆಳೆ ಚೆನ್ನಾಗಿ ಬರುತ್ತದೆ ಎಂದು ಹಿರಿಯರು ಹೇಳಿದ ಕಾರಣ ಗ್ರಾಮದ ಯುವಕರು ಈ ವಿಚಿತ್ರ ಆಚರಣೆ ಮಾಡಿದ್ದಾರೆ. ಕಾಕತಾಳೀಯವೆಂಬಂತೆ ಶವದ ಬಾಯಿಗೆ ನೀರು ಹಾಕಿದ ಬಳಿಕ ತಾಲೂಕಿನಲ್ಲಿ ಜಿಟಿ-ಜಿಟಿ ಮಳೆ ಆರಂಭವಾಗಿದೆಯಂತೆ. ಇದು ಗ್ರಾಮಸ್ಥರ ನಂಬಿಕೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಇದನ್ನೂ ಓದಿ: ಅಪಾಯ ಮಟ್ಟ ತಲುಪಿದ ನೇತ್ರಾವತಿ: ಅದ್ಯಪಾಡಿಯಲ್ಲಿ 35 ಮನೆ, ಕೃಷಿಭೂಮಿ ಜಲಾವೃತ


Last Updated : Jul 10, 2022, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.