ETV Bharat / state

ಶ್ರೀನಗರದಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿ ವಿಜಯಪುರದ ಯೋಧ ಮೃತ

author img

By

Published : Apr 13, 2022, 8:56 AM IST

ವಿಜಯಪುರದ ಯೋಧರೊಬ್ಬರು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೇವೆಯಲ್ಲಿದ್ದಾಗ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟಿರುವ ಘಟನೆ ನಡೆದಿದ್ದು, ಇಂದು ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮಿಸಲಿದೆ.

vijayapura  cisf soldier died in jammu kashmir
ಶ್ರೀನಗರದಲ್ಲಿ ಗುಂಡು ತಗುಲಿ ವಿಜಯಪುರ ಯೋಧ ಮೃತ

ವಿಜಯಪುರ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೇವೆಯಲ್ಲಿದ್ದಾಗ ಆಕಸ್ಮಿಕವಾಗಿ ಗುಂಡು ತಗುಲಿ ವಿಜಯಪುರದ ಯೋಧರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ ಕೆ ಗ್ರಾಮದ ಯೋಧ ದಯಾನಂದ ಮಲ್ಲಿಕಾರ್ಜುನ ಪಾಟೀಲ (28) ಮೃತ ಯೋಧನಾಗಿದ್ದಾನೆ.

ಶ್ರೀನಗರದಲ್ಲಿ ಮಂಗಳವಾರ ಸಂಜೆ ಸೇವಾನಿರತನಾಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಳೆದ ಐದು ವರ್ಷಗಳ ಹಿಂದೆ ಸಿಎಸ್​​​ಐಎಎಫ್ ಹುದ್ದೆಗೆ ನೇಮಕವಾಗಿದ್ದರು. ಇತ್ತೀಗಷ್ಟೇ ಯೋಧ ದಯಾನಂದ ವಿವಾಹವಾಗಿದ್ದು, ತಂದೆ ಮಲ್ಲಿಕಾರ್ಜುನ ಪಾಟೀಲ ಲಾರಿ ಚಾಲಕರಾಗಿದ್ದರು. ಯೋಧನಿಗೆ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು ಹಾಗೂ ಓರ್ವ ತಂಗಿ ಇದ್ದಾಳೆ. ತೀರ ಬಡ ಕುಟುಂಬದಿಂದ ಬಂದಿರುವ ದಯಾನಂದ ಅವರು ಸೇನೆ ಸೇರಬೇಕೆಂಬ ಮಹಾದಾಸೆ ಇಟ್ಟುಕೊಂಡಿದ್ದರು. ಅದರಂತೆ ಸೇನೆ ಸೇರಿದ್ದರು.

ಇದೀಗ ಅವರು ಮೃತಪಟ್ಟಿರುವ ಸುದ್ದಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಯೋಧ ದಯಾನಂದ ಪಾರ್ಥಿವ ಶರೀರ ತವರಿಗೆ ಕಳುಹಿಸಲಾಗಿದ್ದು, ಇಂದು ಸಂಜೆ ವೇಳೆ ಬೆಳಗಾವಿಗೆ ಆಗಮಿಸಲಿದೆ. ನಂತರ ಅಲ್ಲಿಂದ ಸ್ವಗ್ರಾಮ ಲೋಣಿ ಬಿಕೆ ಗ್ರಾಮಕ್ಕೆ ತಲುಪಲಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಪರಿಚಯಸ್ಥರಿಂದಲೇ ಅವಿವಾಹಿತೆಯ ಕೊಲೆ.. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಫೈನಾನ್ಸ್​​ರ ಶವ!

ವಿಜಯಪುರ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೇವೆಯಲ್ಲಿದ್ದಾಗ ಆಕಸ್ಮಿಕವಾಗಿ ಗುಂಡು ತಗುಲಿ ವಿಜಯಪುರದ ಯೋಧರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ ಕೆ ಗ್ರಾಮದ ಯೋಧ ದಯಾನಂದ ಮಲ್ಲಿಕಾರ್ಜುನ ಪಾಟೀಲ (28) ಮೃತ ಯೋಧನಾಗಿದ್ದಾನೆ.

ಶ್ರೀನಗರದಲ್ಲಿ ಮಂಗಳವಾರ ಸಂಜೆ ಸೇವಾನಿರತನಾಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಳೆದ ಐದು ವರ್ಷಗಳ ಹಿಂದೆ ಸಿಎಸ್​​​ಐಎಎಫ್ ಹುದ್ದೆಗೆ ನೇಮಕವಾಗಿದ್ದರು. ಇತ್ತೀಗಷ್ಟೇ ಯೋಧ ದಯಾನಂದ ವಿವಾಹವಾಗಿದ್ದು, ತಂದೆ ಮಲ್ಲಿಕಾರ್ಜುನ ಪಾಟೀಲ ಲಾರಿ ಚಾಲಕರಾಗಿದ್ದರು. ಯೋಧನಿಗೆ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು ಹಾಗೂ ಓರ್ವ ತಂಗಿ ಇದ್ದಾಳೆ. ತೀರ ಬಡ ಕುಟುಂಬದಿಂದ ಬಂದಿರುವ ದಯಾನಂದ ಅವರು ಸೇನೆ ಸೇರಬೇಕೆಂಬ ಮಹಾದಾಸೆ ಇಟ್ಟುಕೊಂಡಿದ್ದರು. ಅದರಂತೆ ಸೇನೆ ಸೇರಿದ್ದರು.

ಇದೀಗ ಅವರು ಮೃತಪಟ್ಟಿರುವ ಸುದ್ದಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಯೋಧ ದಯಾನಂದ ಪಾರ್ಥಿವ ಶರೀರ ತವರಿಗೆ ಕಳುಹಿಸಲಾಗಿದ್ದು, ಇಂದು ಸಂಜೆ ವೇಳೆ ಬೆಳಗಾವಿಗೆ ಆಗಮಿಸಲಿದೆ. ನಂತರ ಅಲ್ಲಿಂದ ಸ್ವಗ್ರಾಮ ಲೋಣಿ ಬಿಕೆ ಗ್ರಾಮಕ್ಕೆ ತಲುಪಲಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಪರಿಚಯಸ್ಥರಿಂದಲೇ ಅವಿವಾಹಿತೆಯ ಕೊಲೆ.. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಫೈನಾನ್ಸ್​​ರ ಶವ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.