ETV Bharat / state

ಪ್ರವಾಹದಲ್ಲಿ ಸಿಲುಕಿದ ಪ್ರಾಣಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಗ್ರಾಮಸ್ಥರು! - ಪ್ರಾಣಿಗಳಿಗೆ ಆಹಾರ ನೀಡಿದ ಪ್ರವಾಹ ಸಂತ್ರಸ್ತರು

ತಾರಾಪುರದಲ್ಲಿ ಉಪವಾಸದಿಂದ ಗೋಳಾಡುತ್ತಿರುವ ಮೂಕ ಪ್ರಾಣಿಗಳ ದಯನೀಯ ಸ್ಥಿತಿ ಕಂಡ ಸಂತ್ರಸ್ತರು ಜೋಳದ ಹಿಟ್ಟು ಕಲಿಸಿ ಪ್ರಾಣಿಗಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Flood victims who fed the animals
ಪ್ರವಾಹದಲ್ಲಿ ಸಿಲುಕಿದ ಪ್ರಾಣಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ನಿರಾಶ್ರಿತರು
author img

By

Published : Oct 20, 2020, 2:13 PM IST

ವಿಜಯಪುರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಯಿಂದ ಜಲಾವೃತವಾಗಿರುವ ಆಲಮೇಲ ತಾಲೂಕಿನ ತಾರಾಪುರದಲ್ಲಿ ಗ್ರಾಮಸ್ಥರು ಮಾತ್ರವಲ್ಲದೆ ಸಾಕು ಪ್ರಾಣಿಗಳು ಸಹ ಸಾಕಷ್ಟು ತೊಂದರೆ ಅನುಭವಿಸುತ್ತಿವೆ.

ಪ್ರವಾಹದಲ್ಲಿ ಸಿಲುಕಿದ ಪ್ರಾಣಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಸಂತ್ರಸ್ತರು

ಗ್ರಾಮಸ್ಥರನ್ನು ಪರಿಹಾರ ಕೇಂದ್ರಗಳಿಗೆ ತಂದು ಜಿಲ್ಲಾಡಳಿತ ಅವರಿಗೆ ಆಶ್ರಯ ನೀಡಿದೆ. ಆದರೆ ಮೂಕ ಪ್ರಾಣಿಗಳು ತಿನ್ನಲು ಅನ್ನ ಇಲ್ಲದೆ ಉಪವಾಸದಿಂದ ಗೋಳಾಡುತ್ತಿವೆ. ಮೂಕ ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಮರುಗುತ್ತಿರುವ ತಾರಾಪುರ ಗ್ರಾಮಸ್ಥರು ಪರಿಹಾರ ಕೇಂದ್ರದ ಜೋಳದ ಹಿಟ್ಟು ಕಲಿಸಿ ತಾರಾಪುರದ ಪ್ರವಾಹದಲ್ಲಿ ಸಿಲುಕಿರುವ ಪ್ರಾಣಿಗಳಿಗೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಕಳೆದ 5 ದಿನಗಳಿಂದ ಈ ಪ್ರಾಣಿಗಳು ಆಹಾರವಿಲ್ಲದೆ ಕಂಗಾಲಾಗಿದ್ದವು. ಪ್ರವಾಹದಿಂದ ನಡುಗಡ್ಡೆಯಾಗಿದ್ದ ತಾರಾಪುರ ಗ್ರಾಮಸ್ಥರನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದು ತಂದು ಪರಿಹಾರ ಕೇಂದ್ರಕ್ಕೆ ಬಿಡಲಾಗಿತ್ತು. ಗ್ರಾಮಸ್ಥರು ತಮ್ಮ ಮನೆಯ ಸಾಕು ಪ್ರಾಣಿಗಳನ್ನು ಗ್ರಾಮದಲ್ಲಿಯೇ ಬಿಟ್ಟು ಬಂದಿದ್ದಾರೆ. ಗ್ರಾಮದ ಸುತ್ತಮುತ್ತ ನೀರು ಸುತ್ತುವರೆದ ಕಾರಣ ತಾರಾಪುರ ನಡುಗಡ್ಡೆಯಾಗಿದೆ. ಹೀಗಾಗಿ ಪ್ರಾಣಿಗಳು ಆಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿವೆ.

ಕೇವಲ ಪ್ರವಾಹದ ನೀರು ಕುಡಿದು ಬದುಕುತ್ತಿರುವ ಪ್ರಾಣಿಗಳನ್ನು ಗಮನಿಸಿದ ಗ್ರಾಮಸ್ಥರು, ಆಹಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ವಿಜಯಪುರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಯಿಂದ ಜಲಾವೃತವಾಗಿರುವ ಆಲಮೇಲ ತಾಲೂಕಿನ ತಾರಾಪುರದಲ್ಲಿ ಗ್ರಾಮಸ್ಥರು ಮಾತ್ರವಲ್ಲದೆ ಸಾಕು ಪ್ರಾಣಿಗಳು ಸಹ ಸಾಕಷ್ಟು ತೊಂದರೆ ಅನುಭವಿಸುತ್ತಿವೆ.

ಪ್ರವಾಹದಲ್ಲಿ ಸಿಲುಕಿದ ಪ್ರಾಣಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಸಂತ್ರಸ್ತರು

ಗ್ರಾಮಸ್ಥರನ್ನು ಪರಿಹಾರ ಕೇಂದ್ರಗಳಿಗೆ ತಂದು ಜಿಲ್ಲಾಡಳಿತ ಅವರಿಗೆ ಆಶ್ರಯ ನೀಡಿದೆ. ಆದರೆ ಮೂಕ ಪ್ರಾಣಿಗಳು ತಿನ್ನಲು ಅನ್ನ ಇಲ್ಲದೆ ಉಪವಾಸದಿಂದ ಗೋಳಾಡುತ್ತಿವೆ. ಮೂಕ ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಮರುಗುತ್ತಿರುವ ತಾರಾಪುರ ಗ್ರಾಮಸ್ಥರು ಪರಿಹಾರ ಕೇಂದ್ರದ ಜೋಳದ ಹಿಟ್ಟು ಕಲಿಸಿ ತಾರಾಪುರದ ಪ್ರವಾಹದಲ್ಲಿ ಸಿಲುಕಿರುವ ಪ್ರಾಣಿಗಳಿಗೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಕಳೆದ 5 ದಿನಗಳಿಂದ ಈ ಪ್ರಾಣಿಗಳು ಆಹಾರವಿಲ್ಲದೆ ಕಂಗಾಲಾಗಿದ್ದವು. ಪ್ರವಾಹದಿಂದ ನಡುಗಡ್ಡೆಯಾಗಿದ್ದ ತಾರಾಪುರ ಗ್ರಾಮಸ್ಥರನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದು ತಂದು ಪರಿಹಾರ ಕೇಂದ್ರಕ್ಕೆ ಬಿಡಲಾಗಿತ್ತು. ಗ್ರಾಮಸ್ಥರು ತಮ್ಮ ಮನೆಯ ಸಾಕು ಪ್ರಾಣಿಗಳನ್ನು ಗ್ರಾಮದಲ್ಲಿಯೇ ಬಿಟ್ಟು ಬಂದಿದ್ದಾರೆ. ಗ್ರಾಮದ ಸುತ್ತಮುತ್ತ ನೀರು ಸುತ್ತುವರೆದ ಕಾರಣ ತಾರಾಪುರ ನಡುಗಡ್ಡೆಯಾಗಿದೆ. ಹೀಗಾಗಿ ಪ್ರಾಣಿಗಳು ಆಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿವೆ.

ಕೇವಲ ಪ್ರವಾಹದ ನೀರು ಕುಡಿದು ಬದುಕುತ್ತಿರುವ ಪ್ರಾಣಿಗಳನ್ನು ಗಮನಿಸಿದ ಗ್ರಾಮಸ್ಥರು, ಆಹಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.