ETV Bharat / state

ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರಿಂದ ಶಿವ ಪಂಚಾಕ್ಷರಿ ಮಂತ್ರ ಪಠಣ..

author img

By

Published : Jan 27, 2023, 10:58 PM IST

ಇಂಡಿ ತಾಲೂಕಿನ ಹೋರ್ತಿಯ ರೇವಣಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಮೂರು ಕೋಟಿ ಶಿವಲಿಂಗ ಪ್ರತಿಷ್ಢಾಪನೆ ಸಂಕಲ್ಪ - ಶಿವ ಪಂಚಾಕ್ಷರಿ ಮಂತ್ರ ಜಪಿಸಿದ ಸಾವಿರಾರು ಭಕ್ತರು.

Thousands of devotees chanted
ರೇವಣಸಿದ್ದೇಶ್ವರ ದೇವಸ್ಥಾನ:ಸಾವಿರಾರು ಭಕ್ತರಿಂದ ಶಿವ ಪಂಚಾಕ್ಷರಿ ಮಂತ್ರ ಪಟಣ ..
ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರಿಂದ ಶಿವ ಪಂಚಾಕ್ಷರಿ ಮಂತ್ರ ಪಠಣ..

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿಯಲ್ಲಿ ರೇವಣಸಿದ್ದೇಶ್ವರ ದೇವಸ್ಥಾನ ಸಂಸ್ಥೆ ವತಿಯಿಂದ ತ್ರಿಕೋಟಿ ಶಿವಲಿಂಗಗಳ ಪ್ರಥಮ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ತ್ರಿಕೋಟಿ ಶಿವ ಪಂಚಾಕ್ಷರಿ ಮಹಾ ಮಂತ್ರ ಜಪ ಯಜ್ಷ ಮತ್ತು ಧರ್ಮ ಸಭೆ ನಡೆಯಿತು.‌ ಸುಮಾರು 25 ಸಾವಿರ ಭಕ್ತರು ಸಾಮೂಹಿಕವಾಗಿ ಶಿವಪೂಜೆ ನೇರವೇರಿಸಿದರು. ಸುಮಾರು 1ಗಂಟೆಗಳ ಕಾಲ ಓಂ ನಮಃ ಶಿವಾಯ ಎನ್ನುವ ಮೂಲಕ ಶಿವಪೂಜೆ ನೇರವೇರಿಸಿದರು.‌ ಹೋರ್ತಿಯ ರೇವಣಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಮೂರು ಕೋಟಿ ಶಿವಲಿಂಗ ಪ್ರತಿಷ್ಢಾಪನೆ ಸಂಕಲ್ಪ ಹೊಂದಿರುವ ದೇವಸ್ಥಾನ ಮಂಡಳಿ ಇದರ ಪ್ರಯುಕ್ತ ಶಿವಲಿಂಗ ಧ್ಯಾನ ಏರ್ಪಡಿಸಿತ್ತು. 20-25 ಸಾವಿರ ಭಕ್ತರು ಶಿವಲಿಂಗ ಧ್ಯಾನ್ಯ ಮಾಡುವ ಮೂಲಕ ಜಯಘೋಷ ಮೊಳಗಿಸಿದರು.

ಸತತ ಒಂದು ಗಂಟೆಗಳ‌‌ ಕಾಲ ಬಿಟ್ಟುಬಿಡದೇ ಓಂ ಶಿವಾಯ: ಜಪ ಮಾಡಿದರು. ಇದು ವಿಜಯಪುರ ಜಿಲ್ಲೆಯಲ್ಲಿಯೇ ದಾಖಲೆ ಪುಟದಲ್ಲಿ ಸೇರಿದಂತಾಗಿದೆ. ನಂತರ ಭಕ್ತರನ್ನುದ್ದೇಶಿಸಿ ಆರ್ಶಿವಚನ ನೀಡಿದ ಶ್ರೀಶೈಲದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಐತಿಹಾಸಿಕವಾದ ತ್ರಿಕೋಟಿ ಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಿದೆ. ತ್ರಿಕೋಟಿ ಶಿವಪಂಚಕ್ಷರಿ ಮಂತ್ರದ ಜಪದ ಮೂಲಕ ಚಲಾನೆ ದೊರೆಯುತ್ತಿರುವುದು ಇದೊಂದು ದೊಡ್ಡ ಇತಿಹಾಸ ಶಿವಪಂಚ ಮೂಲಕ ನೇರವೇರುತ್ತಿರುವುದು, ಪುಣ್ಯದ ಕಾರ್ಯವಾಗಿದೆ ಎಂದು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

25 ಸಾವಿರಕ್ಕಿಂತ ಹೆಚ್ಚು ಭಕ್ತರಿಂದ ಶಿವನಾಮ ಜಪ: ಒಂದು ಗಂಟೆಗಳ‌ ಕಾಲ‌ ಮೈ ಮರೆತು ಶಿವ ಪಂಚಾಕ್ಷರಿ ಮಂತ್ರ ಜಪ‌ ಮಾಡುವ ಮೂಲಕ 3 ಕೋಟಿ ಲಿಂಗ ಇಂದೇ ಪ್ರತಿಷ್ಠಾಪನೆ ಆದಂತಾಗಿದೆ. ಶೀಘ್ರ 3ಕೋಟಿ ಲಿಂಗ ಇಲ್ಲಿ ಸ್ಥಾಪನೆಯಾಗಲಿದೆ, ಏಕಕಾಲದಲ್ಲಿ 25ಸಾವಿರಕ್ಕಿಂತ ಹೆಚ್ಚು ಭಕ್ತರು ಶಿವನಾಮ ಜಪ ಮಾಡಿದ್ದು 3ಕೋಟಿ ಶಿವ ಪಂಚಾಕ್ಷರಿ ಮಂತ್ರ ಜಪ ಮಾಡಿದಂತಾಗಿದೆ ಶಿವಾಚಾರ್ಯ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ಉಜ್ಜಯನಿಯ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ, ಉಜ್ಜನಿಯ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರುಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂಡಿ ಶಾಸಕ ಯಶ ವಂತರಾಯಗೌಡ ಪಾಟೀಲ, ಚಲನಚಿತ್ರ‌ ನಿರ್ದೇಶಕ ಸುನೀಲ ಕುಮಾರ ದೇಸಾಯಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಮೇಶ ಕಾರಜೋಳ ಸೇರಿ ಇತರರು ಉಪಸ್ಥಿತರಿದ್ದರು.

ಭಕ್ತರ ಹರ್ಷೋದ್ಗಾರ: 3ಕೋಟಿ‌ ಲಿಂಗ ಪ್ರತಿಷ್ಠಾಪನೆಯ ಸಂಕಲ್ಪ ಹೊತ್ತು ಆಯೋಜನೆ ಮಾಡಿದ್ದ ಧಾರ್ಮಿಕ‌ ಕಾರ್ಯಕ್ರಮದಲ್ಲಿ ಭಕ್ತಿಯಲ್ಲಿ ಮಿಂದೆದ್ದ ಭಕ್ತಗಣ, ಉಜ್ಜಯನಿ ಪೀಠ, ರಂಭಾಪುರಿ ಪೀಠ, ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ನಮ್ಮ ಗ್ರಾಮದಲ್ಲಿ ತ್ರಿವೇಣಿ ಸಂಗಮದ ಅನುಭವವಾಯಿತು. ಇದೇ ರೀತಿ ಧಾರ್ಮಿಕ‌‌‌ ಕಾರ್ಯ ಜನ್ಮದಲ್ಲಿ‌ ಮತ್ತೊಮ್ಮೆ ನೋಡುತ್ತೇವೆ ಇಲ್ಲವೋ ಗೊತ್ತಿಲ್ಲ. ನಾವು ಸಹ ನಮ್ಮ ಕೈಲಾದಷ್ಟು ಭಕ್ತಿ ಮೆರೆಯಲು ಲಿಂಗ ಪ್ರತಿಷ್ಠಾಪಿಸುವ ಇಚ್ಚೆ ಇದೆ. ಅದು ಶೀಘ್ರ ನೇರವೇರಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇವೆ ಭಕ್ತರು ತಿಳಿಸಿದರು.

ಇದನ್ನೂ ಓದಿ:ಬಿಎಸ್​ವೈ ಬಗ್ಗೆ ಗೌರವ ಎಂದ ಯತ್ನಾಳ್​ ಹೇಳಿಕೆ: ಪಕ್ಷದ ಬೆಳವಣಿಗೆಗೆ ಪೂರಕ ಎಂದ ಬಿವೈ ವಿಜಯೇಂದ್ರ

ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರಿಂದ ಶಿವ ಪಂಚಾಕ್ಷರಿ ಮಂತ್ರ ಪಠಣ..

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿಯಲ್ಲಿ ರೇವಣಸಿದ್ದೇಶ್ವರ ದೇವಸ್ಥಾನ ಸಂಸ್ಥೆ ವತಿಯಿಂದ ತ್ರಿಕೋಟಿ ಶಿವಲಿಂಗಗಳ ಪ್ರಥಮ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ತ್ರಿಕೋಟಿ ಶಿವ ಪಂಚಾಕ್ಷರಿ ಮಹಾ ಮಂತ್ರ ಜಪ ಯಜ್ಷ ಮತ್ತು ಧರ್ಮ ಸಭೆ ನಡೆಯಿತು.‌ ಸುಮಾರು 25 ಸಾವಿರ ಭಕ್ತರು ಸಾಮೂಹಿಕವಾಗಿ ಶಿವಪೂಜೆ ನೇರವೇರಿಸಿದರು. ಸುಮಾರು 1ಗಂಟೆಗಳ ಕಾಲ ಓಂ ನಮಃ ಶಿವಾಯ ಎನ್ನುವ ಮೂಲಕ ಶಿವಪೂಜೆ ನೇರವೇರಿಸಿದರು.‌ ಹೋರ್ತಿಯ ರೇವಣಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಮೂರು ಕೋಟಿ ಶಿವಲಿಂಗ ಪ್ರತಿಷ್ಢಾಪನೆ ಸಂಕಲ್ಪ ಹೊಂದಿರುವ ದೇವಸ್ಥಾನ ಮಂಡಳಿ ಇದರ ಪ್ರಯುಕ್ತ ಶಿವಲಿಂಗ ಧ್ಯಾನ ಏರ್ಪಡಿಸಿತ್ತು. 20-25 ಸಾವಿರ ಭಕ್ತರು ಶಿವಲಿಂಗ ಧ್ಯಾನ್ಯ ಮಾಡುವ ಮೂಲಕ ಜಯಘೋಷ ಮೊಳಗಿಸಿದರು.

ಸತತ ಒಂದು ಗಂಟೆಗಳ‌‌ ಕಾಲ ಬಿಟ್ಟುಬಿಡದೇ ಓಂ ಶಿವಾಯ: ಜಪ ಮಾಡಿದರು. ಇದು ವಿಜಯಪುರ ಜಿಲ್ಲೆಯಲ್ಲಿಯೇ ದಾಖಲೆ ಪುಟದಲ್ಲಿ ಸೇರಿದಂತಾಗಿದೆ. ನಂತರ ಭಕ್ತರನ್ನುದ್ದೇಶಿಸಿ ಆರ್ಶಿವಚನ ನೀಡಿದ ಶ್ರೀಶೈಲದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಐತಿಹಾಸಿಕವಾದ ತ್ರಿಕೋಟಿ ಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಿದೆ. ತ್ರಿಕೋಟಿ ಶಿವಪಂಚಕ್ಷರಿ ಮಂತ್ರದ ಜಪದ ಮೂಲಕ ಚಲಾನೆ ದೊರೆಯುತ್ತಿರುವುದು ಇದೊಂದು ದೊಡ್ಡ ಇತಿಹಾಸ ಶಿವಪಂಚ ಮೂಲಕ ನೇರವೇರುತ್ತಿರುವುದು, ಪುಣ್ಯದ ಕಾರ್ಯವಾಗಿದೆ ಎಂದು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

25 ಸಾವಿರಕ್ಕಿಂತ ಹೆಚ್ಚು ಭಕ್ತರಿಂದ ಶಿವನಾಮ ಜಪ: ಒಂದು ಗಂಟೆಗಳ‌ ಕಾಲ‌ ಮೈ ಮರೆತು ಶಿವ ಪಂಚಾಕ್ಷರಿ ಮಂತ್ರ ಜಪ‌ ಮಾಡುವ ಮೂಲಕ 3 ಕೋಟಿ ಲಿಂಗ ಇಂದೇ ಪ್ರತಿಷ್ಠಾಪನೆ ಆದಂತಾಗಿದೆ. ಶೀಘ್ರ 3ಕೋಟಿ ಲಿಂಗ ಇಲ್ಲಿ ಸ್ಥಾಪನೆಯಾಗಲಿದೆ, ಏಕಕಾಲದಲ್ಲಿ 25ಸಾವಿರಕ್ಕಿಂತ ಹೆಚ್ಚು ಭಕ್ತರು ಶಿವನಾಮ ಜಪ ಮಾಡಿದ್ದು 3ಕೋಟಿ ಶಿವ ಪಂಚಾಕ್ಷರಿ ಮಂತ್ರ ಜಪ ಮಾಡಿದಂತಾಗಿದೆ ಶಿವಾಚಾರ್ಯ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ಉಜ್ಜಯನಿಯ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ, ಉಜ್ಜನಿಯ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರುಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂಡಿ ಶಾಸಕ ಯಶ ವಂತರಾಯಗೌಡ ಪಾಟೀಲ, ಚಲನಚಿತ್ರ‌ ನಿರ್ದೇಶಕ ಸುನೀಲ ಕುಮಾರ ದೇಸಾಯಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಮೇಶ ಕಾರಜೋಳ ಸೇರಿ ಇತರರು ಉಪಸ್ಥಿತರಿದ್ದರು.

ಭಕ್ತರ ಹರ್ಷೋದ್ಗಾರ: 3ಕೋಟಿ‌ ಲಿಂಗ ಪ್ರತಿಷ್ಠಾಪನೆಯ ಸಂಕಲ್ಪ ಹೊತ್ತು ಆಯೋಜನೆ ಮಾಡಿದ್ದ ಧಾರ್ಮಿಕ‌ ಕಾರ್ಯಕ್ರಮದಲ್ಲಿ ಭಕ್ತಿಯಲ್ಲಿ ಮಿಂದೆದ್ದ ಭಕ್ತಗಣ, ಉಜ್ಜಯನಿ ಪೀಠ, ರಂಭಾಪುರಿ ಪೀಠ, ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ನಮ್ಮ ಗ್ರಾಮದಲ್ಲಿ ತ್ರಿವೇಣಿ ಸಂಗಮದ ಅನುಭವವಾಯಿತು. ಇದೇ ರೀತಿ ಧಾರ್ಮಿಕ‌‌‌ ಕಾರ್ಯ ಜನ್ಮದಲ್ಲಿ‌ ಮತ್ತೊಮ್ಮೆ ನೋಡುತ್ತೇವೆ ಇಲ್ಲವೋ ಗೊತ್ತಿಲ್ಲ. ನಾವು ಸಹ ನಮ್ಮ ಕೈಲಾದಷ್ಟು ಭಕ್ತಿ ಮೆರೆಯಲು ಲಿಂಗ ಪ್ರತಿಷ್ಠಾಪಿಸುವ ಇಚ್ಚೆ ಇದೆ. ಅದು ಶೀಘ್ರ ನೇರವೇರಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇವೆ ಭಕ್ತರು ತಿಳಿಸಿದರು.

ಇದನ್ನೂ ಓದಿ:ಬಿಎಸ್​ವೈ ಬಗ್ಗೆ ಗೌರವ ಎಂದ ಯತ್ನಾಳ್​ ಹೇಳಿಕೆ: ಪಕ್ಷದ ಬೆಳವಣಿಗೆಗೆ ಪೂರಕ ಎಂದ ಬಿವೈ ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.