ವಿಜಯಪುರ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಇಂದು ಜಿಲ್ಲೆಯಲ್ಲಿಯೂ ನಡೆದಿದ್ದು, ಒಟ್ಟು 14,141 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಡಿಡಿಪಿಐ ಪ್ರಸನ್ಕುಮಾರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ ಪರೀಕ್ಷೆ ಬರೆಯಲುಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿತ್ತು. 4673 ಜನರ ಪೈಕಿ 3649 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 1024 ಅಭ್ಯರ್ಥಿಗಳು ಗೈರಾಗಿದ್ದರು.
ಮಧ್ಯಾಹ್ನ ಪರೀಕ್ಷೆ ಬರೆಯಲು 31 ಪರೀಕ್ಷಾ ಕೇಂದ್ರಗಳಲ್ಲಿ, 11953 ಅಭ್ಯರ್ಥಿಗಳ ಪೈಕಿ 10492 ಅಭ್ಯರ್ಥಿಗಳು ಪರೀಕ್ಷೆ ಬರೆದರು. 1469 ಅಭ್ಯರ್ಥಿಗಳು ಮಧ್ಯಾಹ್ನ ಪರೀಕ್ಷೆಗೆ ಗೈರಾಗಿದ್ದರು.
ಪರೀಕ್ಷಾ ಕೇಂದ್ರಗಳಿಗೆ ಬರುವ ಅಭ್ಯರ್ಥಿಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಸರ್ಕಾರದ ನಿರ್ದೇಶನದನ್ವಯವಾಗಿ ಪರೀಕ್ಷೆ ನಡೆಸಲಾಯಿತು.