ETV Bharat / state

ಹೃದಯಾಘಾತದಿಂದ ನಿಧನರಾದ ಯೋಧ: ಸ್ವಗ್ರಾಮ ರತ್ನಾಪುರದಲ್ಲಿ ಅಂತ್ಯಕ್ರಿಯೆ

author img

By

Published : Oct 21, 2020, 2:59 PM IST

ಗುವಾಹಟಿಯಲ್ಲಿ ಹೃದಯಾಘಾತದಿಂದ ನಿಧನರಾದ ಬಿಎಸ್​​ಎಫ್ ಯೋಧ ಹಣಮಂತ ಮುಂಜೆ ಅವರ ಅಂತ್ಯಕ್ರಿಯೆ ಇಂದು ಅವರ ಗ್ರಾಮ ತಿಕೋಟಾ ತಾಲೂಕಿನ ರತ್ನಾಪುರದಲ್ಲಿ ನೆರವೇರಿತು.

Soldier funeral
ಹಣಮಂತ ಮುಂಜೆ ಮೃತ ಬಿಎಸ್​​ಎಫ್ ಯೋಧ

ವಿಜಯಪುರ: ಅಸ್ಸೋಂನ ಗುವಾಹಟಿಯಲ್ಲಿ ಹೃದಯಾಘಾತದಿಂದ ನಿಧನರಾದ ಯೋಧನ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮ ತಿಕೋಟಾ ತಾಲೂಕಿನ ರತ್ನಾಪುರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಹೃದಯಾಘಾತದಿಂದ ನಿಧನರಾದ ಯೋಧ: ಸ್ವಗ್ರಾಮ ರತ್ನಾಪುರದಲ್ಲಿ ಅಂತ್ಯಕ್ರಿಯೆ

ಹಣಮಂತ ಮುಂಜೆ (40) ಮೃತ ಬಿಎಸ್​​ಎಫ್ ಯೋಧ. ಇವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದವರು. ಅಸ್ಸೋಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಚಹಾ ಕುಡಿಯುತ್ತಿದ್ದ‌ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ನಿನ್ನೆ ಮಧ್ಯಾಹ್ನ ಯೋಧನ ಪಾರ್ಥಿವ ಶರೀರವನ್ನು ಸ್ವಗ್ರಾಮ ರತ್ನಾಪುರಕ್ಕೆ ತರಲಾಗಿತ್ತು. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ತಹಶೀಲ್ದಾರರು, ಸರ್ಕಾರಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯಪುರ: ಅಸ್ಸೋಂನ ಗುವಾಹಟಿಯಲ್ಲಿ ಹೃದಯಾಘಾತದಿಂದ ನಿಧನರಾದ ಯೋಧನ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮ ತಿಕೋಟಾ ತಾಲೂಕಿನ ರತ್ನಾಪುರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಹೃದಯಾಘಾತದಿಂದ ನಿಧನರಾದ ಯೋಧ: ಸ್ವಗ್ರಾಮ ರತ್ನಾಪುರದಲ್ಲಿ ಅಂತ್ಯಕ್ರಿಯೆ

ಹಣಮಂತ ಮುಂಜೆ (40) ಮೃತ ಬಿಎಸ್​​ಎಫ್ ಯೋಧ. ಇವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದವರು. ಅಸ್ಸೋಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಚಹಾ ಕುಡಿಯುತ್ತಿದ್ದ‌ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ನಿನ್ನೆ ಮಧ್ಯಾಹ್ನ ಯೋಧನ ಪಾರ್ಥಿವ ಶರೀರವನ್ನು ಸ್ವಗ್ರಾಮ ರತ್ನಾಪುರಕ್ಕೆ ತರಲಾಗಿತ್ತು. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ತಹಶೀಲ್ದಾರರು, ಸರ್ಕಾರಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.