ETV Bharat / state

ಪೌರಕಾರ್ಮಿಕರ ದಿನಾಚರಣೆ: ಮುದ್ದೇಬಿಹಾಳದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ

ಪೌರಕಾರ್ಮಿಕರ ದಿನದ ಹಿನ್ನೆಲೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಇಂದು ಪೌರಕಾರ್ಮಿಕರಿಗೆ ಸಾಮೂಹಿಕವಾಗಿ ಸನ್ಮಾನಿಸಿ , ಸ್ಯಾನಿಟೈಸರ್, ಹ್ಯಾಂಡ್‌ಗ್ಲೌಸ್, ರೇನ್‌ಕೋಟ್ ವಿತರಣೆ ಮಾಡಲಾಯಿತು.

author img

By

Published : Sep 23, 2020, 9:48 PM IST

Updated : Sep 24, 2020, 5:34 PM IST

muncipality
ಪೌರಕಾರ್ಮಿಕರ ದಿನಾಚರಣೆ

ಮುದ್ದೇಬಿಹಾಳ: ತಮ್ಮ ಜೀವ ಒತ್ತೆ ಇಟ್ಟು ಜನರ ಹಾಗೂ ಊರಿನ ಆರೋಗ್ಯದ ಬಗ್ಗೆ ಕಾಳಜಿಯಿಂದ ಸೇವೆ ಸಲ್ಲಿಸುವ ಪೌರಕಾರ್ಮಿಕರನ್ನು ಗೌರವದಿಂದ ಪ್ರತಿಯೊಬ್ಬರು ಕಾಣಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಹೇಳಿದರು.

ಪೌರಕಾರ್ಮಿಕರ ದಿನಾಚರಣೆ : ಮುದ್ದೇಬಿಹಾಳದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ

ಪಟ್ಟಣದ ಕೆಬಿಎಂಪಿಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರದಲ್ಲಿ ಕೋವಿಡ್-19 ಸಂದರ್ಭದಲ್ಲಿ ಪೌರಕಾರ್ಮಿಕರು ಕೊರೊನಾ ವಾರಿಯರ್ಸ್​​ಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಸ್ಮರಣೀಯವಾದದು ಎಂದರು. ಕಾರ್ಯಕ್ರಮ ಆರಂಭಕ್ಕೆ ಮುನ್ನ ಆರೋಗ್ಯ ಇಲಾಖೆಯಿಂದ ಪೌರಕಾರ್ಮಿಕರ ಆರೋಗ್ಯ ತಪಾಸಣೆ, ಕೋವಿಡ್-19 ಪರೀಕ್ಷೆ ನಡೆಸಲಾಯಿತು. ಇನ್ನು ದಿನಾಚರಣೆಯ ನಿಮಿತ್ತ ವಿಜೇತರಾದ ಪೌರಕಾರ್ಮಿಕರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಅಲ್ಲದೇ ಸಾಮೂಹಿಕವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರಿಗೆ ಸ್ಯಾನಿಟೈಸರ್,ಹ್ಯಾಂಡ್‌ಗ್ಲೌಸ್,ರೇನ್‌ಕೋಟ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ, ಜನರ ಜೀವದ ರಕ್ಷಣೆ ಮಾಡುವ ಮೂಲಕ ನಗರದ ಸೌಂದರ್ಯಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವ ಪೌರಕಾರ್ಮಿಕರನ್ನು ಯಾರೂ ತುಚ್ಛವಾಗಿ ಕಾಣಬಾರದು. ಅವರ ಸೇವೆ ದೇವರ ಸೇವೆಗೆ ಸಮಾನವಾದುದು ಎಂದರು. ವೈದ್ಯ ಡಾ.ವಾಯ್.ಎನ್.ಜೈಗೌಡರ ಮಾತನಾಡಿ, ಪಟ್ಟಣದ ಆರೋಗ್ಯ ಕಾಪಾಡುವ ಹೊಣೆ ಹೊತ್ತಿರುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಪುರಸಭೆ ಸದಸ್ಯರಾದ ಮೆಹಬೂಬ್​ ಗೊಳಸಂಗಿ, ಸಹನಾ ಬಡಿಗೇರ, ಶಹಜಾದಬಿ ಹುಣಸಗಿ, ಪ್ರತಿಭಾ ಅಂಗಡಗೇರಿ, ಭಾರತಿ ಪಾಟೀಲ, ಮಹ್ಮದರಫೀಕ ದ್ರಾಕ್ಷಿ,ಕಂದಾಯ ಅಧಿಕಾರಿ ಎಂ.ಬಿ.ಮಾಡಗಿ,ಗೋಪಾಲ ಹೂಗಾರ ಮೊದಲಾದವರು ಉಪಸ್ಥಿತರಿದ್ದರು.

ಮುದ್ದೇಬಿಹಾಳ: ತಮ್ಮ ಜೀವ ಒತ್ತೆ ಇಟ್ಟು ಜನರ ಹಾಗೂ ಊರಿನ ಆರೋಗ್ಯದ ಬಗ್ಗೆ ಕಾಳಜಿಯಿಂದ ಸೇವೆ ಸಲ್ಲಿಸುವ ಪೌರಕಾರ್ಮಿಕರನ್ನು ಗೌರವದಿಂದ ಪ್ರತಿಯೊಬ್ಬರು ಕಾಣಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಹೇಳಿದರು.

ಪೌರಕಾರ್ಮಿಕರ ದಿನಾಚರಣೆ : ಮುದ್ದೇಬಿಹಾಳದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ

ಪಟ್ಟಣದ ಕೆಬಿಎಂಪಿಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರದಲ್ಲಿ ಕೋವಿಡ್-19 ಸಂದರ್ಭದಲ್ಲಿ ಪೌರಕಾರ್ಮಿಕರು ಕೊರೊನಾ ವಾರಿಯರ್ಸ್​​ಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಸ್ಮರಣೀಯವಾದದು ಎಂದರು. ಕಾರ್ಯಕ್ರಮ ಆರಂಭಕ್ಕೆ ಮುನ್ನ ಆರೋಗ್ಯ ಇಲಾಖೆಯಿಂದ ಪೌರಕಾರ್ಮಿಕರ ಆರೋಗ್ಯ ತಪಾಸಣೆ, ಕೋವಿಡ್-19 ಪರೀಕ್ಷೆ ನಡೆಸಲಾಯಿತು. ಇನ್ನು ದಿನಾಚರಣೆಯ ನಿಮಿತ್ತ ವಿಜೇತರಾದ ಪೌರಕಾರ್ಮಿಕರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಅಲ್ಲದೇ ಸಾಮೂಹಿಕವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರಿಗೆ ಸ್ಯಾನಿಟೈಸರ್,ಹ್ಯಾಂಡ್‌ಗ್ಲೌಸ್,ರೇನ್‌ಕೋಟ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ, ಜನರ ಜೀವದ ರಕ್ಷಣೆ ಮಾಡುವ ಮೂಲಕ ನಗರದ ಸೌಂದರ್ಯಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವ ಪೌರಕಾರ್ಮಿಕರನ್ನು ಯಾರೂ ತುಚ್ಛವಾಗಿ ಕಾಣಬಾರದು. ಅವರ ಸೇವೆ ದೇವರ ಸೇವೆಗೆ ಸಮಾನವಾದುದು ಎಂದರು. ವೈದ್ಯ ಡಾ.ವಾಯ್.ಎನ್.ಜೈಗೌಡರ ಮಾತನಾಡಿ, ಪಟ್ಟಣದ ಆರೋಗ್ಯ ಕಾಪಾಡುವ ಹೊಣೆ ಹೊತ್ತಿರುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಪುರಸಭೆ ಸದಸ್ಯರಾದ ಮೆಹಬೂಬ್​ ಗೊಳಸಂಗಿ, ಸಹನಾ ಬಡಿಗೇರ, ಶಹಜಾದಬಿ ಹುಣಸಗಿ, ಪ್ರತಿಭಾ ಅಂಗಡಗೇರಿ, ಭಾರತಿ ಪಾಟೀಲ, ಮಹ್ಮದರಫೀಕ ದ್ರಾಕ್ಷಿ,ಕಂದಾಯ ಅಧಿಕಾರಿ ಎಂ.ಬಿ.ಮಾಡಗಿ,ಗೋಪಾಲ ಹೂಗಾರ ಮೊದಲಾದವರು ಉಪಸ್ಥಿತರಿದ್ದರು.

Last Updated : Sep 24, 2020, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.