ETV Bharat / state

ವಿಜಯಪುರದಲ್ಲಿ ಲಾಕ್​​ಡೌನ್​ ಭೀತಿ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ!

author img

By

Published : Jul 13, 2020, 9:23 PM IST

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಲಾಕ್​ಡೌನ್​ ಹೇರಲಾಗಿದೆ. ಮತ್ತೆ ಕೆಲವು ಪ್ರದೇಶಗಳಲ್ಲಿ ಜನತೆ ಸ್ವಯಂ ಲಾಕ್​ಡೌನ್​​ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ನಡುವೆ ವಿಜಯಪುರದಲ್ಲಿ ಲಾಕ್​​​​ಡೌನ್​​ ಭೀತಿಯಿಂದ ಜನತೆ ಅಗತ್ಯ ವಸ್ತುಗಳಿಗಾಗಿ ಮುಗಿಬಿದ್ದಿರುವುದು ಕಂಡು ಬಂದಿದೆ.

Lockdown fear in Vijayapur:  people rushed to market fro buy essential items
ವಿಜಯಪುರದಲ್ಲಿ ಲಾಕ್​​ಡೌನ್​ ಭೀತಿ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ

ವಿಜಯಪುರ: ನಾಳೆಯಿಂದ ಬೆಂಗಳೂರು ಮಾದರಿಯಲ್ಲಿ ಒಂದು ವಾರದವರೆಗೂ ಲಾಕ್‌ಡೌನ್ ಜಾರಿಗೊಳ್ಳಲಿದೆ ಎಂಬ ಭೀತಿಯಿಂದ ಜನರು ಸಾಮಾಜಿಕ ಅಂತರ ಮರೆತು ಅಗತ್ಯ ಸಾಮಾಗ್ರಿ ಖರೀದಿಯಲ್ಲಿ ತೊಡಗಿದ ಘಟನೆ ನಡೆದಿದೆ.

ವಿಜಯಪುರದಲ್ಲಿ ಲಾಕ್​​ಡೌನ್​ ಭೀತಿ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ

ನಗರದ ಸಿದ್ದೇಶ್ವರ ಮಂದಿರ ರಸ್ತೆ ಜನ ಸಂದಣಿಯಿಂದ ತುಂಬಿ ಹೋಗಿತ್ತು. ಎಲ್‌ಬಿಎಸ್ ಮಾರುಕಟ್ಟೆ ರಸ್ತೆಯಲ್ಲಿ ಮೂರು ಗಂಟೆಯಿಂದ ಜನರು ಕೊರೊನಾ ತಡೆಗೆ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳನ್ನೇ ಮರೆತು ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು.

ಒಂದು ವಾರಗಳ ಕಾಲ ಲಾಕ್‌ಡೌನ್ ಮಾಡುವ ನಿರ್ಧಾರ ಜಿಲ್ಲಾಡಳಿತ ಕೈಗೊಂಡರೆ ಅಗತ್ಯ ಸಾಮಗ್ರಿಗಳ ಕೊಳ್ಳುವುದು ಕಷ್ಟವಾಗುತ್ತೆ ಎಂದು ಜನರು ಮನೆಯಿಂದ ಹೊರ ಬಂದಿದ್ದಾರೆ. ಗಾಂಧಿ ವೃತ್ತದಿಂದ ಸಿದ್ದೇಶ್ವರ ಮಂದಿರದವರೆಗೂ ರಸ್ತೆ ಜನ ಜಂಗುಳಿಯಿಂದ ಕೂಡಿದ್ದು, ಸಾಮಾಜಿಕ ಅಂತರವನ್ನೇ ಮರೆತು ಜನರು ಒಂದೆಡೆ ಸೇರಿದ್ದು ಕಂಡು ಬಂದಿದೆ.

ವಿಜಯಪುರ: ನಾಳೆಯಿಂದ ಬೆಂಗಳೂರು ಮಾದರಿಯಲ್ಲಿ ಒಂದು ವಾರದವರೆಗೂ ಲಾಕ್‌ಡೌನ್ ಜಾರಿಗೊಳ್ಳಲಿದೆ ಎಂಬ ಭೀತಿಯಿಂದ ಜನರು ಸಾಮಾಜಿಕ ಅಂತರ ಮರೆತು ಅಗತ್ಯ ಸಾಮಾಗ್ರಿ ಖರೀದಿಯಲ್ಲಿ ತೊಡಗಿದ ಘಟನೆ ನಡೆದಿದೆ.

ವಿಜಯಪುರದಲ್ಲಿ ಲಾಕ್​​ಡೌನ್​ ಭೀತಿ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ

ನಗರದ ಸಿದ್ದೇಶ್ವರ ಮಂದಿರ ರಸ್ತೆ ಜನ ಸಂದಣಿಯಿಂದ ತುಂಬಿ ಹೋಗಿತ್ತು. ಎಲ್‌ಬಿಎಸ್ ಮಾರುಕಟ್ಟೆ ರಸ್ತೆಯಲ್ಲಿ ಮೂರು ಗಂಟೆಯಿಂದ ಜನರು ಕೊರೊನಾ ತಡೆಗೆ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳನ್ನೇ ಮರೆತು ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು.

ಒಂದು ವಾರಗಳ ಕಾಲ ಲಾಕ್‌ಡೌನ್ ಮಾಡುವ ನಿರ್ಧಾರ ಜಿಲ್ಲಾಡಳಿತ ಕೈಗೊಂಡರೆ ಅಗತ್ಯ ಸಾಮಗ್ರಿಗಳ ಕೊಳ್ಳುವುದು ಕಷ್ಟವಾಗುತ್ತೆ ಎಂದು ಜನರು ಮನೆಯಿಂದ ಹೊರ ಬಂದಿದ್ದಾರೆ. ಗಾಂಧಿ ವೃತ್ತದಿಂದ ಸಿದ್ದೇಶ್ವರ ಮಂದಿರದವರೆಗೂ ರಸ್ತೆ ಜನ ಜಂಗುಳಿಯಿಂದ ಕೂಡಿದ್ದು, ಸಾಮಾಜಿಕ ಅಂತರವನ್ನೇ ಮರೆತು ಜನರು ಒಂದೆಡೆ ಸೇರಿದ್ದು ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.