ETV Bharat / state

ವಿಜಯಪುರ: ಲಿವರ್ ಕಸಿ ಮಾಡಿ ತಾಯಿ ಮಗಳ ಜೀವ ಉಳಿಸಿದ ವೈದ್ಯ.. ಧನ್ಯವಾದ ತಿಳಿಸಿದ ಪೋಷಕರು!

author img

By

Published : Nov 23, 2022, 3:54 PM IST

ವಿಜಯಪುರ ಜಿಲ್ಲೆಯ ತಾಂಬಾದಲ್ಲಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕಿಗೆ ವೈದ್ಯ ಡಾ ರವೀಂದ್ರ ನೀಡೋಣಿ ಅವರು ಯಶಸ್ವಿಯಾಗಿ ಚಿಕಿತ್ಸೆ ಮಾಡಿದ್ದಾರೆ. ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

ಡಾ ರವೀಂದ್ರ ನೀಡೋಣಿ
ಡಾ ರವೀಂದ್ರ ನೀಡೋಣಿ

ವಿಜಯಪುರ: ದಿನನಿತ್ಯದ ಉಪಜೀವನಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ಸುಖಿಯಾಗಿ ಜೀವನ ನಡೆಸುತ್ತಿರುವ ಚಿಕ್ಕ ಹಾಗೂ ಚೊಕ್ಕ ಕುಟುಂಬ. ಅಷ್ಟೇನು ಶ್ರೀಮಂತಿಕೆ ಇಲ್ಲದಿದ್ರೂ, ಇದ್ದುದರಲ್ಲಿಯೇ ಸಂತೋಷಪಟ್ಟು ಜೀವನ ಸಾಗಿಸುತ್ತಿರುವ ಕುಟುಂಬವದು. ಇಂತಹ ಕುಟುಂಬಕ್ಕೆ ಧಿಡೀರ್ ಎದುರಾಗಿತ್ತು ಒಂದು ಸಮಸ್ಯೆ. ಆ ಸಮಸ್ಯೆಯೇ ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ಬರೆ ಎಳೆದಂತೆ ಆ ಮಗುವಿಗೆ ಎದುರಾಗಿದ್ದ ಕಾಯಿಲೆ ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಎರಗಿತ್ತು.

ಇಂತಹ ಸಂದಿಗ್ದ ಸಮಯದಲ್ಲಿ ಆ ಕುಟುಂಬಕ್ಕೆ ಬೆಳಕಾಗಿ ಬಂದವರೇ ಆ ಮನೆಯ ಮಹಾಲಕ್ಷ್ಮಿ ತಾಯಿ. ವಿಜಯಪುರ ಜಿಲ್ಲೆಯ ತಾಂಬಾದಲ್ಲಿರುವ ಕುಟುಂಬದಲ್ಲಿ ನಡೆದ ಅಪರೂಪದ ಘಟನೆಯಿದು. 16 ವರ್ಷಗಳ ಹಿಂದೆ ಮದುವೆಯಾದ ದಂಪತಿ, ತಮಗೆ ಮಕ್ಕಳಾಗುತ್ತಿಲ್ಲ ಎಂದು ನಾನಾ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು, ಕೊನೆಗೆ 2008ರಲ್ಲಿ ತಮ್ಮ ಪ್ರೀತಿಯ ಮಗಳು ರಶ್ಮಿ (ಹೆಸರು ಬದಲಾಯಿಸಲಾಗಿದೆ) ಜನಿಸಿದಳು.

ಡಾ ರವೀಂದ್ರ ನೀಡೋಣಿ

ಮಗಳು ಶಾಲೆಯಲ್ಲಿ ಯಾವಾಗಲೂ ಮುಂದೆ ಇರುವುದನ್ನು ಕಂಡು ಅಪ್ಪ ಅಮ್ಮನಿಗೆ ಎಲ್ಲಿಲ್ಲದ ಖುಷಿ. ಇಂತಿಷ್ಟು ಖುಷಿಯಾಗಿದ್ದ ಈ ಕುಟುಂಬಕ್ಕೆ ಒಂದು ದಿನ ಆಘಾತ ಎದುರಾಗಿತ್ತು. ಖುಷಿ ಖುಷಿಯಾಗಿದ್ದ ತಮ್ಮ ಮಗಳ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿತು. ಕಣ್ಣುಗಳು ಹಳದಿ ಆಗತೊಡಗಿದವು. ಜೊತೆಗೆ ಸ್ಪಷ್ಟತೆಯಿಲ್ಲದೇ ಮಂಜಾಗತೊಡಗಿದವು. ನಗರದ ಆಸ್ಪತ್ರೆಗೆ ಅವಳನ್ನು ದಾಖಲು ಮಾಡಿ ಪರೀಕ್ಷೆ ನಡೆಸಿದಾಗ ಆ ಮಗುವಿಗೆ ಅಪರೂಪದ ಅನುವಂಶಿಕವಾಗಿ ಬರುವ " Wilsons disease" ಎಂದು ಪತ್ತೆ ಹಚ್ಚಿದರು. ಇದರಿಂದ ಈ ಬಾಲಕಿಯ ಲಿವರ್ ಪೂರ್ತಿಯಾಗಿ ಹಾನಿಯಾಗಿತ್ತು.

ಈ ಪ್ರಕರಣ ನಗರದ ಖ್ಯಾತ ವೈದ್ಯರಾದ ಲಿವರ್ ಸ್ಪೆಷಲಿಸ್ಟ್ ಹಾಗೂ ಲಿವರ್ ಕಸಿಯ ತಜ್ಞ ಡಾ. ರವೀಂದ್ರ ನೀಡೋಣಿ ಅವರ ಹತ್ತಿರ ಮಗಳನ್ನು ಪರೀಕ್ಷೆಗೆ ಕರೆದೊಯ್ಯುತ್ತಾರೆ. ಇವಳನ್ನು ಸಂಪೂರ್ಣವಾಗಿ ಪರೀಕ್ಷಿಸಿದ ವೈದ್ಯರು, ಬಾಲಕಿಗೆ ಲಿವರ್ ಬದಲಾಯಿಸಬೇಕು ಎಂದಾಗ ತಂದೆ- ತಾಯಿಗೆ ನೆಲವೇ ಕುಸಿದಂತಾಗಿದೆ.

ಆಗ ಇವರಿಗೆ ಧೈರ್ಯ ತುಂಬಿದ ವೈದ್ಯ ಡಾ. ರವೀಂದ್ರ ನೀಡೋಣಿ, ನಿಮ್ಮ ಮಗಳ ಜವಾಬ್ದಾರಿ ನನ್ನದು. ನೀವು ಧೈರ್ಯವಾಗಿ ಮಗಳನ್ನು ಕರೆದು ಕೊಂಡು ಬೆಂಗಳೂರಿಗೆ ಬಂದುಬಿಡಿ ಅಂತ ಹೇಳಿದ್ದಾರೆ.

ಲಿವರ್ ದಾನದ ಸಮಸ್ಯೆ : ಮಗಳನ್ನು ಬೆಂಗಳೂರಿಗೆ ಕರೆದು ಕೊಂಡು ಹೋಗಿ ಡಾ. ರವೀಂದ್ರ ಅವರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಗ ಎದುರಾಗಿದ್ದು ಲಿವರ್ ದಾನ ಮಾಡುವ ಸಮಸ್ಯೆ. ವೈದ್ಯರು ಮಗುವಿಗೆ ಯಾರು ಲಿವರ್ ದಾನ ಮಾಡುತ್ತೀರಿ? ಎಂದಾಗ ಪೋಷಕರಿಗೆ ದಿಕ್ಕೆ ತೋಚದಂತಾಗಿದೆ.

ಪುನರ್ಜನ್ಮ ನೀಡಿದ ತಾಯಿ : ಆಗ ಬಾಲಕಿಯ ತಾಯಿ ಯಾವುದೇ ಅಂಜಿಕೆ - ಅಳುಕಿಲ್ಲದೇ ನಾನೇ ನನ್ನ ಮಗಳಿಗೆ ಲಿವರ್ ದಾನ ಮಾಡುತ್ತೇನೆ ಎಂದು ಮುಂದೆ ಬಂದಿದ್ದಾರೆ. ತನ್ನ ಗಂಡನಿಗೂ ಧೈರ್ಯ ತುಂಬಿದ್ದಾರೆ. ಧೈರ್ಯವಂತ ತಂದೆಯು ಮುಂದಿನ 15 ದಿನಗಳಲ್ಲಿ ಎಲ್ಲವನ್ನು ತಯಾರು ಮಾಡಿ, ಹೆಂಡತಿ ಮತ್ತು ಮಗಳನ್ನು ಕರೆದುಕೊಂಡು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಂದೆ ನಡೆದಿದ್ದೆಲ್ಲ ಪವಾಡ: ಹೀಗೆ ತಾಯಿಯೇ ತನ್ನ ಮಗಳಿಗೆ ಲಿವರ್ ಕೊಡುತ್ತಿರುವಾಗ ವೈದ್ಯರಿಗೆ ಎರಡು ಸವಾಲುಗಳು ಎದುರಾಗಿದ್ದವು. ಮೊದಲನೆಯದು ಆರೋಗ್ಯವಂತಾಗಿರುವ ಮಹಿಳೆಯ ಆಪರೇಷನ್ ಮಾಡಿ ಲಿವರ್ ತಗೆಯುವುದು, ನಂತರ ಮಗುವಿಗೆ ಆಪರೇಷನ್ ಮಾಡಿ ಆ ಲಿವರ್ ಅನ್ನು ಪುನಃ ಜೋಡಿಸುವುದು.

ಕೊನೆಗೂ ಡಾ. ರವೀಂದ್ರ ನೀಡೋಣಿ ನೇತೃತ್ವದ ತಂಡ ತಾಯಿಯ ಅರ್ಧ ಲಿವರ್ ತೆಗೆದು ಮಗಳಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಆಶ್ಚರ್ಯ ಎಂದರೆ ಆಪರೇಷನ್ ಆದ ಒಂದೇ ವಾರಕ್ಕೆ ತಾಯಿ ಹಾಗೂ 10ನೇ ದಿನಕ್ಕೆ ಮಗಳು ಡಿಸ್ಚಾರ್ಜ್ ಆಗುತ್ತಾರೆ. ಮಗಳ ಆರೈಕೆಯಲ್ಲಿ ತಾಯಿ ತೊಡಗುತ್ತಾರೆ. ಇದು ಪೋಷಕರಲ್ಲಿ ಹೊಸ ಮಂದಹಾಸ ಮೂಡಿಸುತ್ತದೆ.

ತಾಮ್ರದ ಅಂಶದಿಂದ ಲಿವರ್​ಗೆ ಸಮಸ್ಯೆ: ಡಾ. ರವೀಂದ್ರ ಅವರ ಪ್ರಕಾರ, ಚಿಕ್ಕ ವಯಸ್ಸಿಗೆ ಲಿವರ್ ಸಿರೋಸಿಸ್ ಆಗಲು ಸಾಕಷ್ಟು ಕಾರಣಗಳಿವೆ. ಚಿಕ್ಕ ಮಕ್ಕಳಿಗೆ ಅನುವಂಶಿಕವಾಗಿ ನೂರಾರು ಕಾಯಿಲೆಗಳು ಬರುತ್ತವೆ. ಅದರಲ್ಲಿ ಈ ಅಪರೂಪದ ಕಾಯಿಲೆ ಕೂಡ ಒಂದು. ಈ ಕಾಯಿಲೆಯ ರೋಗಿಯ ಜೀವ ಕೋಶಗಳು ತಾಮ್ರದ ಅಂಶವನ್ನು ದೇಹದಿಂದ ಹೊರಗೆ ಹಾಕುವ ಶಕ್ತಿಯನ್ನು ಕಳೆದುಕೊಂಡಿರುತ್ತವೆ. ಇವರಿಂದಾಗಿ ತಾಮ್ರವು ಲಿವರ್ ಅಲ್ಲಿ ನೆಲೆಗೊಂಡು ಲಿವರ್​ಗೆ ಹಾನಿ ಮಾಡುತ್ತದೆ.

ಇನ್ನು ದೊಡ್ಡವರಲ್ಲಿ ಲಿವರ್ ಹಾನಿಯಾಗಲು ಸಾಮಾನ್ಯ ಕಾರಣಗಳೆಂದರೆ ಅತಿಯಾದ ಮದ್ಯಸೇವನೆ, ಹೆಪಾಟೈಟಿಸ್ 'ಬಿ' ಹಾಗೂ 'ಸಿ' ಅವರಲ್ಲೂ ಕೂಡಾ ಲಿವರ್ ಟ್ರಾನ್ಸ್ ಪ್ಲೇಂಟ್ ಮಾಡುವ ಮೂಲಕ ರೋಗವನ್ನು ಗುಣಪಡಿಸಬಹುದು. ರಶ್ಮಿ ಕುಟುಂಬವನ್ನು ಸಂಪರ್ಕಿಸಿದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ತಮ್ಮ ಮಗಳನ್ನೂ ಉಳಿಸಿಕೊಂಡು ಬಿಟ್ಟೆವು ಎನ್ನುವ ಸಂತಸ ಮನೆಮಾಡಿತ್ತು. ಕಷ್ಟಕಾಲದಲ್ಲಿ ಕೈ ಹಿಡಿದ ಡಾ. ರವೀಂದ್ರ ನೀಡೋಣಿ ಆದಿಯಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಮನೋಭಾವ ತಾಯಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಓದಿ: ಯಶಸ್ವಿ ಲಿವರ್ ಕಸಿ : ಮಗಳಿಗೆ ತಾಯಿಯೇ ಆಸರೆ

ವಿಜಯಪುರ: ದಿನನಿತ್ಯದ ಉಪಜೀವನಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ಸುಖಿಯಾಗಿ ಜೀವನ ನಡೆಸುತ್ತಿರುವ ಚಿಕ್ಕ ಹಾಗೂ ಚೊಕ್ಕ ಕುಟುಂಬ. ಅಷ್ಟೇನು ಶ್ರೀಮಂತಿಕೆ ಇಲ್ಲದಿದ್ರೂ, ಇದ್ದುದರಲ್ಲಿಯೇ ಸಂತೋಷಪಟ್ಟು ಜೀವನ ಸಾಗಿಸುತ್ತಿರುವ ಕುಟುಂಬವದು. ಇಂತಹ ಕುಟುಂಬಕ್ಕೆ ಧಿಡೀರ್ ಎದುರಾಗಿತ್ತು ಒಂದು ಸಮಸ್ಯೆ. ಆ ಸಮಸ್ಯೆಯೇ ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ಬರೆ ಎಳೆದಂತೆ ಆ ಮಗುವಿಗೆ ಎದುರಾಗಿದ್ದ ಕಾಯಿಲೆ ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಎರಗಿತ್ತು.

ಇಂತಹ ಸಂದಿಗ್ದ ಸಮಯದಲ್ಲಿ ಆ ಕುಟುಂಬಕ್ಕೆ ಬೆಳಕಾಗಿ ಬಂದವರೇ ಆ ಮನೆಯ ಮಹಾಲಕ್ಷ್ಮಿ ತಾಯಿ. ವಿಜಯಪುರ ಜಿಲ್ಲೆಯ ತಾಂಬಾದಲ್ಲಿರುವ ಕುಟುಂಬದಲ್ಲಿ ನಡೆದ ಅಪರೂಪದ ಘಟನೆಯಿದು. 16 ವರ್ಷಗಳ ಹಿಂದೆ ಮದುವೆಯಾದ ದಂಪತಿ, ತಮಗೆ ಮಕ್ಕಳಾಗುತ್ತಿಲ್ಲ ಎಂದು ನಾನಾ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು, ಕೊನೆಗೆ 2008ರಲ್ಲಿ ತಮ್ಮ ಪ್ರೀತಿಯ ಮಗಳು ರಶ್ಮಿ (ಹೆಸರು ಬದಲಾಯಿಸಲಾಗಿದೆ) ಜನಿಸಿದಳು.

ಡಾ ರವೀಂದ್ರ ನೀಡೋಣಿ

ಮಗಳು ಶಾಲೆಯಲ್ಲಿ ಯಾವಾಗಲೂ ಮುಂದೆ ಇರುವುದನ್ನು ಕಂಡು ಅಪ್ಪ ಅಮ್ಮನಿಗೆ ಎಲ್ಲಿಲ್ಲದ ಖುಷಿ. ಇಂತಿಷ್ಟು ಖುಷಿಯಾಗಿದ್ದ ಈ ಕುಟುಂಬಕ್ಕೆ ಒಂದು ದಿನ ಆಘಾತ ಎದುರಾಗಿತ್ತು. ಖುಷಿ ಖುಷಿಯಾಗಿದ್ದ ತಮ್ಮ ಮಗಳ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿತು. ಕಣ್ಣುಗಳು ಹಳದಿ ಆಗತೊಡಗಿದವು. ಜೊತೆಗೆ ಸ್ಪಷ್ಟತೆಯಿಲ್ಲದೇ ಮಂಜಾಗತೊಡಗಿದವು. ನಗರದ ಆಸ್ಪತ್ರೆಗೆ ಅವಳನ್ನು ದಾಖಲು ಮಾಡಿ ಪರೀಕ್ಷೆ ನಡೆಸಿದಾಗ ಆ ಮಗುವಿಗೆ ಅಪರೂಪದ ಅನುವಂಶಿಕವಾಗಿ ಬರುವ " Wilsons disease" ಎಂದು ಪತ್ತೆ ಹಚ್ಚಿದರು. ಇದರಿಂದ ಈ ಬಾಲಕಿಯ ಲಿವರ್ ಪೂರ್ತಿಯಾಗಿ ಹಾನಿಯಾಗಿತ್ತು.

ಈ ಪ್ರಕರಣ ನಗರದ ಖ್ಯಾತ ವೈದ್ಯರಾದ ಲಿವರ್ ಸ್ಪೆಷಲಿಸ್ಟ್ ಹಾಗೂ ಲಿವರ್ ಕಸಿಯ ತಜ್ಞ ಡಾ. ರವೀಂದ್ರ ನೀಡೋಣಿ ಅವರ ಹತ್ತಿರ ಮಗಳನ್ನು ಪರೀಕ್ಷೆಗೆ ಕರೆದೊಯ್ಯುತ್ತಾರೆ. ಇವಳನ್ನು ಸಂಪೂರ್ಣವಾಗಿ ಪರೀಕ್ಷಿಸಿದ ವೈದ್ಯರು, ಬಾಲಕಿಗೆ ಲಿವರ್ ಬದಲಾಯಿಸಬೇಕು ಎಂದಾಗ ತಂದೆ- ತಾಯಿಗೆ ನೆಲವೇ ಕುಸಿದಂತಾಗಿದೆ.

ಆಗ ಇವರಿಗೆ ಧೈರ್ಯ ತುಂಬಿದ ವೈದ್ಯ ಡಾ. ರವೀಂದ್ರ ನೀಡೋಣಿ, ನಿಮ್ಮ ಮಗಳ ಜವಾಬ್ದಾರಿ ನನ್ನದು. ನೀವು ಧೈರ್ಯವಾಗಿ ಮಗಳನ್ನು ಕರೆದು ಕೊಂಡು ಬೆಂಗಳೂರಿಗೆ ಬಂದುಬಿಡಿ ಅಂತ ಹೇಳಿದ್ದಾರೆ.

ಲಿವರ್ ದಾನದ ಸಮಸ್ಯೆ : ಮಗಳನ್ನು ಬೆಂಗಳೂರಿಗೆ ಕರೆದು ಕೊಂಡು ಹೋಗಿ ಡಾ. ರವೀಂದ್ರ ಅವರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಗ ಎದುರಾಗಿದ್ದು ಲಿವರ್ ದಾನ ಮಾಡುವ ಸಮಸ್ಯೆ. ವೈದ್ಯರು ಮಗುವಿಗೆ ಯಾರು ಲಿವರ್ ದಾನ ಮಾಡುತ್ತೀರಿ? ಎಂದಾಗ ಪೋಷಕರಿಗೆ ದಿಕ್ಕೆ ತೋಚದಂತಾಗಿದೆ.

ಪುನರ್ಜನ್ಮ ನೀಡಿದ ತಾಯಿ : ಆಗ ಬಾಲಕಿಯ ತಾಯಿ ಯಾವುದೇ ಅಂಜಿಕೆ - ಅಳುಕಿಲ್ಲದೇ ನಾನೇ ನನ್ನ ಮಗಳಿಗೆ ಲಿವರ್ ದಾನ ಮಾಡುತ್ತೇನೆ ಎಂದು ಮುಂದೆ ಬಂದಿದ್ದಾರೆ. ತನ್ನ ಗಂಡನಿಗೂ ಧೈರ್ಯ ತುಂಬಿದ್ದಾರೆ. ಧೈರ್ಯವಂತ ತಂದೆಯು ಮುಂದಿನ 15 ದಿನಗಳಲ್ಲಿ ಎಲ್ಲವನ್ನು ತಯಾರು ಮಾಡಿ, ಹೆಂಡತಿ ಮತ್ತು ಮಗಳನ್ನು ಕರೆದುಕೊಂಡು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಂದೆ ನಡೆದಿದ್ದೆಲ್ಲ ಪವಾಡ: ಹೀಗೆ ತಾಯಿಯೇ ತನ್ನ ಮಗಳಿಗೆ ಲಿವರ್ ಕೊಡುತ್ತಿರುವಾಗ ವೈದ್ಯರಿಗೆ ಎರಡು ಸವಾಲುಗಳು ಎದುರಾಗಿದ್ದವು. ಮೊದಲನೆಯದು ಆರೋಗ್ಯವಂತಾಗಿರುವ ಮಹಿಳೆಯ ಆಪರೇಷನ್ ಮಾಡಿ ಲಿವರ್ ತಗೆಯುವುದು, ನಂತರ ಮಗುವಿಗೆ ಆಪರೇಷನ್ ಮಾಡಿ ಆ ಲಿವರ್ ಅನ್ನು ಪುನಃ ಜೋಡಿಸುವುದು.

ಕೊನೆಗೂ ಡಾ. ರವೀಂದ್ರ ನೀಡೋಣಿ ನೇತೃತ್ವದ ತಂಡ ತಾಯಿಯ ಅರ್ಧ ಲಿವರ್ ತೆಗೆದು ಮಗಳಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಆಶ್ಚರ್ಯ ಎಂದರೆ ಆಪರೇಷನ್ ಆದ ಒಂದೇ ವಾರಕ್ಕೆ ತಾಯಿ ಹಾಗೂ 10ನೇ ದಿನಕ್ಕೆ ಮಗಳು ಡಿಸ್ಚಾರ್ಜ್ ಆಗುತ್ತಾರೆ. ಮಗಳ ಆರೈಕೆಯಲ್ಲಿ ತಾಯಿ ತೊಡಗುತ್ತಾರೆ. ಇದು ಪೋಷಕರಲ್ಲಿ ಹೊಸ ಮಂದಹಾಸ ಮೂಡಿಸುತ್ತದೆ.

ತಾಮ್ರದ ಅಂಶದಿಂದ ಲಿವರ್​ಗೆ ಸಮಸ್ಯೆ: ಡಾ. ರವೀಂದ್ರ ಅವರ ಪ್ರಕಾರ, ಚಿಕ್ಕ ವಯಸ್ಸಿಗೆ ಲಿವರ್ ಸಿರೋಸಿಸ್ ಆಗಲು ಸಾಕಷ್ಟು ಕಾರಣಗಳಿವೆ. ಚಿಕ್ಕ ಮಕ್ಕಳಿಗೆ ಅನುವಂಶಿಕವಾಗಿ ನೂರಾರು ಕಾಯಿಲೆಗಳು ಬರುತ್ತವೆ. ಅದರಲ್ಲಿ ಈ ಅಪರೂಪದ ಕಾಯಿಲೆ ಕೂಡ ಒಂದು. ಈ ಕಾಯಿಲೆಯ ರೋಗಿಯ ಜೀವ ಕೋಶಗಳು ತಾಮ್ರದ ಅಂಶವನ್ನು ದೇಹದಿಂದ ಹೊರಗೆ ಹಾಕುವ ಶಕ್ತಿಯನ್ನು ಕಳೆದುಕೊಂಡಿರುತ್ತವೆ. ಇವರಿಂದಾಗಿ ತಾಮ್ರವು ಲಿವರ್ ಅಲ್ಲಿ ನೆಲೆಗೊಂಡು ಲಿವರ್​ಗೆ ಹಾನಿ ಮಾಡುತ್ತದೆ.

ಇನ್ನು ದೊಡ್ಡವರಲ್ಲಿ ಲಿವರ್ ಹಾನಿಯಾಗಲು ಸಾಮಾನ್ಯ ಕಾರಣಗಳೆಂದರೆ ಅತಿಯಾದ ಮದ್ಯಸೇವನೆ, ಹೆಪಾಟೈಟಿಸ್ 'ಬಿ' ಹಾಗೂ 'ಸಿ' ಅವರಲ್ಲೂ ಕೂಡಾ ಲಿವರ್ ಟ್ರಾನ್ಸ್ ಪ್ಲೇಂಟ್ ಮಾಡುವ ಮೂಲಕ ರೋಗವನ್ನು ಗುಣಪಡಿಸಬಹುದು. ರಶ್ಮಿ ಕುಟುಂಬವನ್ನು ಸಂಪರ್ಕಿಸಿದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ತಮ್ಮ ಮಗಳನ್ನೂ ಉಳಿಸಿಕೊಂಡು ಬಿಟ್ಟೆವು ಎನ್ನುವ ಸಂತಸ ಮನೆಮಾಡಿತ್ತು. ಕಷ್ಟಕಾಲದಲ್ಲಿ ಕೈ ಹಿಡಿದ ಡಾ. ರವೀಂದ್ರ ನೀಡೋಣಿ ಆದಿಯಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಮನೋಭಾವ ತಾಯಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಓದಿ: ಯಶಸ್ವಿ ಲಿವರ್ ಕಸಿ : ಮಗಳಿಗೆ ತಾಯಿಯೇ ಆಸರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.