ETV Bharat / state

'ಆಧುನಿಕ ಭಗೀರಥ ಎಂ.ಬಿ.ಪಾಟೀಲ್' ಪ್ರತಿಮೆ ನಿರ್ಮಾಣಕ್ಕೆ ಜೆಡಿಎಸ್ ಶಾಸಕ ಪ್ಲಾನ್

author img

By

Published : Jun 9, 2019, 7:31 PM IST

ಈ ಹಿಂದೆ KBJNL ಕಾಮಗಾರಿಗೆ ಕಾರಣೀಭೂತರಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕಂಚಿನ ಪ್ರತಿಮೆಯನ್ನು ಜೆಡಿಎಸ್ ಹಿರಿಯ ನಾಯಕ ಎಂ.ಸಿ.ಮನಗೂಳಿ ಸ್ಥಾಪಿಸಿ ಕೃತಜ್ಞತೆ ಸಲ್ಲಿಸಿದ್ದರು. ಈಗ ಅದೇ ಪ್ರೇರಣೆಯಿಂದ ಎಂ.ಬಿ. ಪಾಟೀಲರ ಪ್ರತಿಮೆ ಸ್ಥಾಪಿಸಲು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ್​ ಚವ್ಹಾಣ ಮುಂದಾಗಿದ್ದಾರೆ.

ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ

ವಿಜಯಪುರ : ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಿ ಜಿಲ್ಲೆಯ ಆಧುನಿಕ ಭಗೀರಥ ಎಂದು ಕರೆಯಿಸಿಕೊಳ್ಳುತ್ತಿರುವ ಗೃಹಸಚಿವ ಎಂ.ಬಿ.ಪಾಟೀಲ ಅವರ ಪ್ರತಿಮೆಯನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಹೇಳಿದರು.

ತಿಡಗುಂದಿ ಶಾಖಾ ಕಾಲುವೆ ಹಾಗೂ ಜಲಸೇತುವೆ ಕಾಮಗಾರಿಯನ್ನು ಸಚಿವರ ಜತೆ ವೀಕ್ಷಿಸಿದ ನಂತರ ಮಾತನಾಡಿ, ಪಾಟೀಲರು ನನ್ನ ರಾಜಕೀಯ ಗುರುಗಳು ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಕೈಗೊಂಡಿರುವ ನೀರಾವರಿ ಕಾಮಗಾರಿ ಲಕ್ಷಾಂತರ ರೈತರ ಬದುಕು ಕಟ್ಟಿ ಕೊಟ್ಟಿದೆ. ಈಗಲೂ ಸಾವಿರಾರು ರೈತರ ಮನೆಯಲ್ಲಿ ಪಾಟೀಲರ ಪೋಟೋಗೆ ಪೂಜೆ ಸಲ್ಲಿಸುತ್ತಾರೆ.

ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ

ಹೀಗಾಗಿ ಅವರ ಋಣ ತೀರಿಸಲು ತಾವು ವೈಯಕ್ತಿಕವಾಗಿ ಕೃಷ್ಣ ಮೇಲ್ದಂಡೆ ಯೋಜನೆಯ ಕಾಮಗಾರಿ ಹೆದ್ದಾರಿಯಲ್ಲಿ ಅವರ ಪ್ರತಿಮೆ ಸ್ಥಾಪಿಸಲು ಯೋಚಿಸಿದ್ದೇನೆ. ಇದಕ್ಕೆ ಜಿಲ್ಲೆಯ ರೈತರ ಬೆಂಬಲ ಸಹ ಇದೆ ಎಂದರು.

ವಿಜಯಪುರ : ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಿ ಜಿಲ್ಲೆಯ ಆಧುನಿಕ ಭಗೀರಥ ಎಂದು ಕರೆಯಿಸಿಕೊಳ್ಳುತ್ತಿರುವ ಗೃಹಸಚಿವ ಎಂ.ಬಿ.ಪಾಟೀಲ ಅವರ ಪ್ರತಿಮೆಯನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಹೇಳಿದರು.

ತಿಡಗುಂದಿ ಶಾಖಾ ಕಾಲುವೆ ಹಾಗೂ ಜಲಸೇತುವೆ ಕಾಮಗಾರಿಯನ್ನು ಸಚಿವರ ಜತೆ ವೀಕ್ಷಿಸಿದ ನಂತರ ಮಾತನಾಡಿ, ಪಾಟೀಲರು ನನ್ನ ರಾಜಕೀಯ ಗುರುಗಳು ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಕೈಗೊಂಡಿರುವ ನೀರಾವರಿ ಕಾಮಗಾರಿ ಲಕ್ಷಾಂತರ ರೈತರ ಬದುಕು ಕಟ್ಟಿ ಕೊಟ್ಟಿದೆ. ಈಗಲೂ ಸಾವಿರಾರು ರೈತರ ಮನೆಯಲ್ಲಿ ಪಾಟೀಲರ ಪೋಟೋಗೆ ಪೂಜೆ ಸಲ್ಲಿಸುತ್ತಾರೆ.

ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ

ಹೀಗಾಗಿ ಅವರ ಋಣ ತೀರಿಸಲು ತಾವು ವೈಯಕ್ತಿಕವಾಗಿ ಕೃಷ್ಣ ಮೇಲ್ದಂಡೆ ಯೋಜನೆಯ ಕಾಮಗಾರಿ ಹೆದ್ದಾರಿಯಲ್ಲಿ ಅವರ ಪ್ರತಿಮೆ ಸ್ಥಾಪಿಸಲು ಯೋಚಿಸಿದ್ದೇನೆ. ಇದಕ್ಕೆ ಜಿಲ್ಲೆಯ ರೈತರ ಬೆಂಬಲ ಸಹ ಇದೆ ಎಂದರು.

Intro:ವಿಜಯಪುರ Body:ವಿಜಯಪುರ : ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಿ ಜಿಲ್ಲೆಯ ಆಧುನಿಕ ಭಗೀರಥ ಎಂದು ಕರೆಯಿಸಿಕೊಳ್ಳುತ್ತಿರುವ ಗೃಹಸಚಿವ ಎಂ.ಬಿ.ಪಾಟೀಲ ಅವರ ಪ್ರತಿಮೆಯನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಹೇಳಿದರು.
ತಿಡಗುಂದಿ ಶಾಖಾ ಕಾಲುವೆ ಹಾಗೂ ಜಲಸೇತುವೆ ಕಾಮಗಾರಿಯನ್ನು ಸಚಿವರ ಜತೆ ವೀಕ್ಷಿಸಿದ ನಂತರ ಅವರು ಮಾತನಾಡಿ, ಪಾಟೀಲರು ನನ್ನ ರಾಜಕೀಯ ಗುರುಗಳು ಅವರು ಜಿಲ್ಲೆಯಲ್ಲಿ ಜಲಸಂಪನ್ಮೂಲ ಸಚಿವರಿದ್ದಾಗ ಕೈಗೊಂಡಿರುವ ನೀರಾವರಿ ಕಾಮಗಾರಿ ಲಕ್ಷಾಂತರ ರೈತರ ಬದುಕು ಕಟ್ಟಿ ಕೊಟ್ಟಿದೆ.ಈಗಲೂ ಸಾವಿರಾರು ರೈತರ ಮನೆಯಲ್ಲಿ ಪಾಟೀಲರ ಪೋಟೋಗೆ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಅವರ ಋಣ ತೀರಿಸಲು ತಾವು ವೈಯಕ್ತಿಕವಾಗಿ ಕೃಷ್ಣ ಮೇಲ್ದಂಡೆ ಯೋಜನೆಯ ಕಾಮಗಾರಿ ಹೆದ್ದಾರಿಯಲ್ಲಿ ಅವರ ಪ್ರತಿಮೆ ಸ್ಥಾಪಿಸಲು ಯೋಚಿಸಿದ್ದೇನೆ. ಇದಕ್ಕೆ ಜಿಲ್ಲೆಯ ರೈತರ ಬೆಂಬಲ ಸಹ ಇದೆ ಎಂದರು.
ಈ ಹಿಂದೆ ಕೆಬಿಜೆಎನ್ ಎಲ್ ಕಾಮಗಾರಿಗೆ ಕಾರಣಿಭೂತರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಂಚಿನ ಪ್ರತಿಮೆಯನ್ನು ಜೆಡಿಎಸ್ ಹಿರಿಯ ನಾಯಕ ಎಂ.ಸಿ.ಮನಗೂಳಿ ಸ್ಥಾಪಿಸಿ ಕೃತಜ್ಞತೆ ಸಲ್ಲಿಸಿದ್ದರು. ಅದೇ ಪ್ರೇರಣೆಯಿಂದ ಎಂ.ಬಿ.ಪಾಟೀಲರ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದೇನೆ ಎಂದರು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.