ETV Bharat / state

ಕಿಡ್ನಿ ದಾನ ಮಾಡಿ ಮೊಮ್ಮಗನಿಗೆ ಬದುಕು ಕೊಟ್ಟ ಅಜ್ಜಿ: ಯಶೋಧಾ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಜೋಡಣೆ

ವಿಜಯಪುರದ ಯಶೋಧಾ ಆಸ್ಪತ್ರೆಯಲ್ಲಿ ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಯುವಕನಿಗೆ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಮತ್ತು ಮೂತ್ರಪಿಂಡ ತಜ್ಞ ಡಾ.ರವೀಂದ್ರ ಮದ್ರಕಿ ತಿಳಿಸಿದರು.

author img

By

Published : Feb 15, 2023, 9:08 AM IST

Updated : Feb 15, 2023, 1:09 PM IST

Grand Mothers Donates Kidney To Grandson
ಕಿಡ್ನಿ ದಾನ ಮಾಡಿ ಮೊಮ್ಮಗನಿಗೆ ಬದುಕು ಕೊಟ್ಟ ಅಜ್ಜಿ
ಕಿಡ್ನಿ ದಾನ ಮಾಡಿ ಮೊಮ್ಮಗನಿಗೆ ಬದುಕು ಕೊಟ್ಟ ಅಜ್ಜಿ..

ವಿಜಯಪುರ: ತಾನು ಬಿದ್ದು ಹೋಗುವ ಮರ. ನನ್ನ ಮೊಮ್ಮಗ ಇನ್ನೂ ಬಾಳಿ ಬದುಕಬೇಕು ಎಂದು 73 ವರ್ಷದ ಅಜ್ಜಿಯೊಬ್ಬರು ತಮ್ಮ 21 ವರ್ಷದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ ಅಪರೂಪ ಘಟನೆಗೆ ನಗರದ ಯಶೋಧಾ ಆಸ್ಪತ್ರೆ ಸಾಕ್ಷಿಯಾಗಿದೆ. ಅಲ್ಲದೇ ವಿಜಯಪುರ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮೊದಲ ಯಶಸ್ವಿ ಮೂತ್ರಪಿಂಡ(ಕಿಡ್ನಿ) ಕಸಿ ಇದಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಅಂಗಾಂಗ ಕಸಿ ಅಗತ್ಯವಿರುವ ಲಕ್ಷಾಂತರ ಜನರಿಗೆ ಭರವಸೆ ಮೂಡಿಸಿದೆ.

ಅಂಗಾಂಗ ದಾನದ ಅರಿವು ಕಡಿಮೆ ಇರುವ ವಿಜಯಪುರ ಜಿಲ್ಲೆಯಲ್ಲಿ ಅಜ್ಜಿಯೊಬ್ಬರು ತಮ್ಮ ಮೊಮ್ಮಗನಿಗೆ ಕಿಡ್ನಿ ನೀಡಿರುವುದು ಅಪರೂಪದ ಪ್ರಕರಣ. ಬೆಳಗಾವಿ ಜಿಲ್ಲೆಯ ಹಾರೂಗೇರಿ ಯುವಕ ಸಚಿನ ಎಂಬಾತ ಕಳೆದ 18 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಇತ್ತೀಚೆಗೆ ಕಿಡ್ನಿ ವೈಫಲ್ಯವಾಗಿತ್ತು. ಈ ಕಾರಣಕ್ಕೆ ವಾರದಲ್ಲಿ 2ಕ್ಕಿಂತ ಹೆಚ್ಚು ಬಾರಿ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದ. ಈತನ ತಂದೆ-ತಾಯಿ ಅನಾರೋಗ್ಯ ಪೀಡಿತರಾದ ಕಾರಣ ಅವರ ಒಂದು ಕಿಡ್ನಿ ಪಡೆದು ಯುವಕನಿಗೆ ವರ್ಗಾಯಿಸಲು ಆಗುತ್ತಿರಲಿಲ್ಲ. ಯುವಕ ಸಚಿನ್​ ದಯನೀಯ ಸ್ಥಿತಿ‌ ಕಂಡ ಅವರ ಮನೆಯ ಹಿರಿಯ ಜೀವ(ಅಜ್ಜಿ) ಉದ್ದವ್ವ ಅವರು ಸ್ವ-ಇಚ್ಛೆಯಿಂದ ಕಿಡ್ನಿ ನೀಡಲು ಮುಂದಾಗಿದ್ದಾರೆ.

ಮೊದಲ ಯಶಸ್ವಿ ಮೂತ್ರಪಿಂಡ ಕಸಿ: ಆದರೆ ಕಿಡ್ನಿ ಕಸಿ ಮಾಡವ ಆಸ್ಪತ್ರೆಗಳು ಕೆಲ ಜಿಲ್ಲೆಯಲ್ಲಿ‌ ಮಾತ್ರ ಇದ್ದವು. ಇತ್ತೀಚೆಗಷ್ಟೇ ವಿಜಯಪುರದ ಯಶೋಧಾ ಎಂಬ ಖಾಸಗಿ ಆಸ್ಪತ್ರೆ ಕಿಡ್ನಿ ಕಸಿಗೆ ಮಾನ್ಯತೆ ಪಡೆದುಕೊಂಡಿತ್ತು. ಯುವಕ ಸಚಿನ್​ ಹಾಗೂ ಆತನ ಅಜ್ಜಿ ಉದ್ದವ್ವ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರದ್ದು ಹೊಂದಾಣಿಕೆಯಾಗುತ್ತಿತ್ತು. ಹೀಗಾಗಿ ಆಸ್ಪತ್ರೆಯ ಮುಖ್ಯಸ್ಥ ಡಾ.ರವೀಂದ್ರ ಮದ್ರಕಿ ನೇತ್ವತೃದ ತಂಡ ಮೂತ್ರಪಿಂಡ (ಕಿಡ್ನಿ) ಕಸಿಯನ್ನು ಯಶಸ್ವಿಯಾಗಿ ಮಾಡಿದೆ. ಸದ್ಯ ಕಿಡ್ನಿ ಪಡೆದ ಸಚಿನ ಹಾಗೂ‌ ಕಿಡ್ನಿ ದಾನ ಮಾಡಿದ ಅಜ್ಜಿ ಉದ್ದವ್ವ ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ನಡೆದ ಮೊದಲ ಕಿಡ್ನಿ ಕಸಿ ಯಶಸ್ವಿಯಾಗಿದೆ.

"ಮೂತ್ರ ಪಿಂಡ ವೈಫಲ್ಯದಿಂದ ಇತ್ತೀಚಿಗೆ ಹೆಚ್ಚು ಜನ ಬಳಲುತ್ತಿದ್ದಾರೆ. ಬಿಪಿ, ಶುಗರ್ ಇರುವವರಲ್ಲಿ ಕಿಡ್ನಿ ವೈಫಲ್ಯ ಹೆಚ್ಚಾಗುತ್ತಿದೆ. ಕಿಡ್ನಿ ಕಸಿ ಮಾಡಬೇಕಾದರೆ ರೋಗಿಯ ಸಂಬಂಧಿಕರು ಇಲ್ಲ ಯಾರಾದರೂ ಸ್ವಯಂ ಇಚ್ಛೆಯಿಂದ ದಾನ ಮಾಡಬೇಕು. ಮಹಾನಗರಗಳಲ್ಲಿನ ಕೆಲ ಆಸ್ಪತ್ರೆಯಲ್ಲಿ ಈ ಸೌಲಭ್ಯ ಇದೆ. ಇದೇ ಮೊದಲ ಬಾರಿ ನಮ್ಮ ಆಸ್ಪತ್ರೆ ಕಿಡ್ನಿ‌ ಕಸಿ ಮಾಡಿ ಯಶಸ್ವಿಯಾಗಿದೆ" ಎಂದು ಆಸ್ಪತ್ರೆಯ ಅಧ್ಯಕ್ಷ ಮತ್ತು ಮೂತ್ರಪಿಂಡ ತಜ್ಞ ಡಾ.ರವೀಂದ್ರ ಮದ್ರಕಿ ತಿಳಿಸಿದರು.

"ನನ್ನ ಅಜ್ಜಿ ತನಗೆ ಪುರ್ನಜನ್ಮ ನೀಡಿದ್ದಾಳೆ. ಇಂದು ಅವಳು ನೀಡಿದ ಕಿಡ್ನಿ ದಾನದಿಂದ ಬದುಕುವ ಹುಮ್ಮಸ್ಸು ಹೆಚ್ಚಾಗಿದೆ" ಎಂದು ಮೊಮ್ಮಗ ಸಚಿನ್ ಅಜ್ಜಿಯ ತ್ಯಾಗವನ್ನು ಹೊಗಳಿದ್ದಾರೆ. ಅಂಗಾಂಗ ದಾನ ಸಿಗದೇ ರಾಜ್ಯದಲ್ಲಿ ನಿತ್ಯ ಸಾವಿರಾರು ಜನ ಸಾಯುತ್ತಿದ್ದಾರೆ. ಸರ್ಕಾರ ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದಾಗ ಅಂಗಾಂಗ ವೈಫಲ್ಯದಿಂದ ಸಾಯುವವರ ಸಂಖ್ಯೆ ಕಡಿಮೆಯಾಗಬಹುದು. ಇದಕ್ಕೆ 73 ವರ್ಷದ ಅಜ್ಜಿ ಉದ್ದವ್ವ ಉತ್ತಮ ಉದಾಹರಣೆ.

ಇದನ್ನೂ ಓದಿ: ಮಗನ ಪ್ರಾಣ ಉಳಿಸಲು ಮಗನಿಗೆ ಕಿಡ್ನಿ ದಾನ ಮಾಡಿದ ತಾಯಿ; ಕಿಮ್ಸ್‌ ವೈದ್ಯರಿಂದ ಯಶಸ್ವಿ ಜೋಡಣೆ

ಕಿಡ್ನಿ ದಾನ ಮಾಡಿ ಮೊಮ್ಮಗನಿಗೆ ಬದುಕು ಕೊಟ್ಟ ಅಜ್ಜಿ..

ವಿಜಯಪುರ: ತಾನು ಬಿದ್ದು ಹೋಗುವ ಮರ. ನನ್ನ ಮೊಮ್ಮಗ ಇನ್ನೂ ಬಾಳಿ ಬದುಕಬೇಕು ಎಂದು 73 ವರ್ಷದ ಅಜ್ಜಿಯೊಬ್ಬರು ತಮ್ಮ 21 ವರ್ಷದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ ಅಪರೂಪ ಘಟನೆಗೆ ನಗರದ ಯಶೋಧಾ ಆಸ್ಪತ್ರೆ ಸಾಕ್ಷಿಯಾಗಿದೆ. ಅಲ್ಲದೇ ವಿಜಯಪುರ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮೊದಲ ಯಶಸ್ವಿ ಮೂತ್ರಪಿಂಡ(ಕಿಡ್ನಿ) ಕಸಿ ಇದಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಅಂಗಾಂಗ ಕಸಿ ಅಗತ್ಯವಿರುವ ಲಕ್ಷಾಂತರ ಜನರಿಗೆ ಭರವಸೆ ಮೂಡಿಸಿದೆ.

ಅಂಗಾಂಗ ದಾನದ ಅರಿವು ಕಡಿಮೆ ಇರುವ ವಿಜಯಪುರ ಜಿಲ್ಲೆಯಲ್ಲಿ ಅಜ್ಜಿಯೊಬ್ಬರು ತಮ್ಮ ಮೊಮ್ಮಗನಿಗೆ ಕಿಡ್ನಿ ನೀಡಿರುವುದು ಅಪರೂಪದ ಪ್ರಕರಣ. ಬೆಳಗಾವಿ ಜಿಲ್ಲೆಯ ಹಾರೂಗೇರಿ ಯುವಕ ಸಚಿನ ಎಂಬಾತ ಕಳೆದ 18 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಇತ್ತೀಚೆಗೆ ಕಿಡ್ನಿ ವೈಫಲ್ಯವಾಗಿತ್ತು. ಈ ಕಾರಣಕ್ಕೆ ವಾರದಲ್ಲಿ 2ಕ್ಕಿಂತ ಹೆಚ್ಚು ಬಾರಿ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದ. ಈತನ ತಂದೆ-ತಾಯಿ ಅನಾರೋಗ್ಯ ಪೀಡಿತರಾದ ಕಾರಣ ಅವರ ಒಂದು ಕಿಡ್ನಿ ಪಡೆದು ಯುವಕನಿಗೆ ವರ್ಗಾಯಿಸಲು ಆಗುತ್ತಿರಲಿಲ್ಲ. ಯುವಕ ಸಚಿನ್​ ದಯನೀಯ ಸ್ಥಿತಿ‌ ಕಂಡ ಅವರ ಮನೆಯ ಹಿರಿಯ ಜೀವ(ಅಜ್ಜಿ) ಉದ್ದವ್ವ ಅವರು ಸ್ವ-ಇಚ್ಛೆಯಿಂದ ಕಿಡ್ನಿ ನೀಡಲು ಮುಂದಾಗಿದ್ದಾರೆ.

ಮೊದಲ ಯಶಸ್ವಿ ಮೂತ್ರಪಿಂಡ ಕಸಿ: ಆದರೆ ಕಿಡ್ನಿ ಕಸಿ ಮಾಡವ ಆಸ್ಪತ್ರೆಗಳು ಕೆಲ ಜಿಲ್ಲೆಯಲ್ಲಿ‌ ಮಾತ್ರ ಇದ್ದವು. ಇತ್ತೀಚೆಗಷ್ಟೇ ವಿಜಯಪುರದ ಯಶೋಧಾ ಎಂಬ ಖಾಸಗಿ ಆಸ್ಪತ್ರೆ ಕಿಡ್ನಿ ಕಸಿಗೆ ಮಾನ್ಯತೆ ಪಡೆದುಕೊಂಡಿತ್ತು. ಯುವಕ ಸಚಿನ್​ ಹಾಗೂ ಆತನ ಅಜ್ಜಿ ಉದ್ದವ್ವ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರದ್ದು ಹೊಂದಾಣಿಕೆಯಾಗುತ್ತಿತ್ತು. ಹೀಗಾಗಿ ಆಸ್ಪತ್ರೆಯ ಮುಖ್ಯಸ್ಥ ಡಾ.ರವೀಂದ್ರ ಮದ್ರಕಿ ನೇತ್ವತೃದ ತಂಡ ಮೂತ್ರಪಿಂಡ (ಕಿಡ್ನಿ) ಕಸಿಯನ್ನು ಯಶಸ್ವಿಯಾಗಿ ಮಾಡಿದೆ. ಸದ್ಯ ಕಿಡ್ನಿ ಪಡೆದ ಸಚಿನ ಹಾಗೂ‌ ಕಿಡ್ನಿ ದಾನ ಮಾಡಿದ ಅಜ್ಜಿ ಉದ್ದವ್ವ ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ನಡೆದ ಮೊದಲ ಕಿಡ್ನಿ ಕಸಿ ಯಶಸ್ವಿಯಾಗಿದೆ.

"ಮೂತ್ರ ಪಿಂಡ ವೈಫಲ್ಯದಿಂದ ಇತ್ತೀಚಿಗೆ ಹೆಚ್ಚು ಜನ ಬಳಲುತ್ತಿದ್ದಾರೆ. ಬಿಪಿ, ಶುಗರ್ ಇರುವವರಲ್ಲಿ ಕಿಡ್ನಿ ವೈಫಲ್ಯ ಹೆಚ್ಚಾಗುತ್ತಿದೆ. ಕಿಡ್ನಿ ಕಸಿ ಮಾಡಬೇಕಾದರೆ ರೋಗಿಯ ಸಂಬಂಧಿಕರು ಇಲ್ಲ ಯಾರಾದರೂ ಸ್ವಯಂ ಇಚ್ಛೆಯಿಂದ ದಾನ ಮಾಡಬೇಕು. ಮಹಾನಗರಗಳಲ್ಲಿನ ಕೆಲ ಆಸ್ಪತ್ರೆಯಲ್ಲಿ ಈ ಸೌಲಭ್ಯ ಇದೆ. ಇದೇ ಮೊದಲ ಬಾರಿ ನಮ್ಮ ಆಸ್ಪತ್ರೆ ಕಿಡ್ನಿ‌ ಕಸಿ ಮಾಡಿ ಯಶಸ್ವಿಯಾಗಿದೆ" ಎಂದು ಆಸ್ಪತ್ರೆಯ ಅಧ್ಯಕ್ಷ ಮತ್ತು ಮೂತ್ರಪಿಂಡ ತಜ್ಞ ಡಾ.ರವೀಂದ್ರ ಮದ್ರಕಿ ತಿಳಿಸಿದರು.

"ನನ್ನ ಅಜ್ಜಿ ತನಗೆ ಪುರ್ನಜನ್ಮ ನೀಡಿದ್ದಾಳೆ. ಇಂದು ಅವಳು ನೀಡಿದ ಕಿಡ್ನಿ ದಾನದಿಂದ ಬದುಕುವ ಹುಮ್ಮಸ್ಸು ಹೆಚ್ಚಾಗಿದೆ" ಎಂದು ಮೊಮ್ಮಗ ಸಚಿನ್ ಅಜ್ಜಿಯ ತ್ಯಾಗವನ್ನು ಹೊಗಳಿದ್ದಾರೆ. ಅಂಗಾಂಗ ದಾನ ಸಿಗದೇ ರಾಜ್ಯದಲ್ಲಿ ನಿತ್ಯ ಸಾವಿರಾರು ಜನ ಸಾಯುತ್ತಿದ್ದಾರೆ. ಸರ್ಕಾರ ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದಾಗ ಅಂಗಾಂಗ ವೈಫಲ್ಯದಿಂದ ಸಾಯುವವರ ಸಂಖ್ಯೆ ಕಡಿಮೆಯಾಗಬಹುದು. ಇದಕ್ಕೆ 73 ವರ್ಷದ ಅಜ್ಜಿ ಉದ್ದವ್ವ ಉತ್ತಮ ಉದಾಹರಣೆ.

ಇದನ್ನೂ ಓದಿ: ಮಗನ ಪ್ರಾಣ ಉಳಿಸಲು ಮಗನಿಗೆ ಕಿಡ್ನಿ ದಾನ ಮಾಡಿದ ತಾಯಿ; ಕಿಮ್ಸ್‌ ವೈದ್ಯರಿಂದ ಯಶಸ್ವಿ ಜೋಡಣೆ

Last Updated : Feb 15, 2023, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.