ETV Bharat / state

ಮುಂದಿನ ವರ್ಷ ಏಪ್ರಿಲ್​ನಲ್ಲಿ ವಿಜಯಪುರದಲ್ಲಿ ವಿಮಾನ ಹಾರಾಟ: ಸಚಿವ ಎಂ ಬಿ ಪಾಟೀಲ್​

author img

By

Published : Jul 29, 2023, 12:03 PM IST

ಮುಂದಿನ ವರ್ಷ ಏಪ್ರಿಲ್​ನಲ್ಲಿ ವಿಜಯಪುರದಲ್ಲಿ ವಿಮಾನ ಹಾರಾಟ ಕಾರ್ಯಾರಂಭಗೊಳ್ಳಲಿದೆ ಎಂದು ಸಚಿವ ಎಂ ಬಿ ಪಾಟೀಲ್​ ಹೇಳಿದ್ದಾರೆ.

ವಿಮಾನ ನಿಲ್ದಾಣಕ್ಕೆ ಭೇಟಿ ಸಚಿವ ಎಂಬಿ ಪಾಟೀಲ್
ವಿಮಾನ ನಿಲ್ದಾಣಕ್ಕೆ ಭೇಟಿ ಸಚಿವ ಎಂಬಿ ಪಾಟೀಲ್

ವಿಜಯಪುರ: ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿ ಮುಂದಿನ ವರ್ಷ ಏಪ್ರಿಲ್‌ನಲ್ಲಿ ವಿಮಾನ ಹಾರಾಟ ಮಾಡುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಸೂಚನೆ ನೀಡಿದರು. ವಿಜಯಪುರ ತಾಲೂಕಿನ ಬುರಣಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ವೀಕ್ಷಿಸಿದ ಅವರು, ನಿರ್ಮಾಣ ಹಂತದ ಎಟಿಆರ್, ರನ್ ವೇ, ಪಾರ್ಕಿಂಗ್, ಇತರೆ ಕಚೇರಿ ಸಮುಚ್ಚಯ ವೀಕ್ಷಣೆ ಮಾಡಿದರು.

ನಂತರ ವಿಮಾನ ನಿಲ್ದಾಣದ ಬ್ಲೂಪ್ರಿಂಟ್ ವೀಕ್ಷಣೆ ಮಾಡಿ ಮಾತನಾಡಿದರು. ಸದ್ಯ 300 ಕೋಟಿ ರೂ.ಗಳು ವಿಮಾನ ನಿಲ್ದಾಣ ಕಾಮಗಾರಿ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ 80 ರಿಂದ 50 ಕೋಟಿ ರೂ. ಬೇಕಾಗಿದ್ದು, ಸದ್ಯ 50 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಒಟ್ಟು ಅಂದಾಜು 400 ಕೋಟಿ ರೂ. ಹಣ ವಿಮಾನ ನಿಲ್ದಾಣ ಪೂರ್ಣಗೊಳ್ಳಲು ಅವಶ್ಯಕತೆ ಇದೆ. ಮುಂದಿನ ವರ್ಷ ಫೆಬ್ರವರಿ ಇಲ್ಲವೇ ಮಾರ್ಚ್ ಒಳಗೆ ಪೂರ್ಣ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ ಎಂದರು.

ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು ಸಹ ಏಪ್ರಿಲ್‌ನಲ್ಲಿ ವಿಮಾನ ಹಾರಾಟ ಮಾಡುವ ಗುರಿ ಹೊಂದಲಾಗಿತ್ತು. ಈಗಾಗಲೇ ರನ್‌ವೇ, ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಸೇರಿದಂತೆ ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದರ ಜತೆ ಹಗಲಿನಲ್ಲಿ ಮಾತ್ರವಲ್ಲದೇ, ರಾತ್ರಿ ಸಹ ಲ್ಯಾಂಡಿಂಗ್ ಮಾಡುವ ವ್ಯವಸ್ಥೆ ಸಹ ಕೈಗೊಳ್ಳಲಾಗುತ್ತಿದೆ. ಕಾಮಗಾರಿ ವಿಚಾರದಲ್ಲಿ ಏನಾದರೂ ಮಾರ್ಪಾಡು ಮಾಡಲು ಹೆಚ್ಚುವರಿ ಕಾಮಗಾರಿ ಮಾಡುವ ಕುರಿತು ಮಾಹಿತಿ ಪಡೆದಿದ್ದೇನೆ. ಅಗ್ನಿಶಾಮಕ ಠಾಣೆ, ವಿವಿಧ ಉಪಕರಣಗಳ ಅವಶ್ಯಕತೆ ಇದೆ. ಅದನ್ನು ಸಹ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಹಿಂದೆ ಮಾರ್ಗ್ ಎಂಬ ಕಂಪನಿ ನಿರ್ಮಾಣ ಕಾಮಗಾರಿ ಪಡೆದು ನಂತರ ಹಿಂದೆ ಸರಿದಿತ್ತು. ಬಳಿಕ ಏರಪೋರ್ಟ್ ಅಥಾರಟಿ ಆಫ್ ಇಂಡಿಯಾ ಕಾಮಗಾರಿಗೆ ಒಲವು ತೋರಿಸಿತ್ತು. ಅದು ಸಹ ಹಿಂದೆ ಸರಿದ ಮೇಲೆ ಈಗ ಲೋಕೋಪಯೋಗಿ ಇಲಾಖೆ ಮುತುವರ್ಜಿ ವಹಿಸಿ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. ಕೆಲವು ಆರೋಪಗಳು ಇವರ ಮೇಲೆ ಕೇಳಿ ಬಂದಿವೆ. ಅದನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಈ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಈ ವಿಚಾರದಲ್ಲಿ ಯಾವುದೇ ಆರೋಪ ಮಾಡುವುದಿಲ್ಲ. ಸದ್ಯ ವಿಮಾನ ನಿಲ್ದಾಣ ಪೂರ್ಣಗೊಳಿಸಬೇಕಾಗಿದೆ. ಇದಕ್ಕೆ ಹೆಚ್ಚುವರಿ ಭೂಮಿ ಬೇಕಾದರೂ ಸಹ ಅದನ್ನು ಖರೀದಿಸಿ ಕಾಮಗಾರಿ ಮುಗಿಸಲಾಗುವುದು. ಬೆಂಗಳೂರು, ರಾಜಸ್ಥಾನ ಲೀಲಾ ಪ್ಯಾಲೇಸ್ ಮಾದರಿ ಪೇಂಟ್​ಅನ್ನು ಈ ವಿಮಾನ ನಿಲ್ದಾಣಕ್ಕೆ ಬಳಸಲು ಸೂಚನೆ ನೀಡಿದ್ದೇನೆ ಎಂದರು.

ಸರ್ಕಾರ ನಿರ್ವಹಣೆಗೆ ಚಿಂತನೆ: ಇದೇ ವೇಳೆ ವಿಮಾನ ನಿಲ್ದಾಣವನ್ನು ಏರಪೋರ್ಟ್ ಅಥಾರಟಿ ಆಫ್ ಇಂಡಿಯಾಗೆ ನೀಡುವ ಬದಲು ಸರ್ಕಾರವೇ ನಿರ್ವಹಣೆ ಮಾಡುವ ಕುರಿತು ಚಿಂತನೆ ನಡೆದಿದೆ. ಏರಪೋರ್ಟ್ ಅಥಾರಟಿ ಆಫ್ ಇಂಡಿಯಾಗೆ ನೀಡಿದರೆ, ಸರ್ಕಾರಕ್ಕೆ ಯಾವುದೇ ಲಾಭ ಬರುವುದಿಲ್ಲ. ಅದರ ಬದಲಿ ವಿಮಾನ ನಿಲ್ದಾಣ ನಿರ್ವಹಣೆಗೆ ಸರ್ಕಾರವೇ ಹಣ ನೀಡಬೇಕಾಗುತ್ತದೆ. ಹಾಗಾಗಿ ಸರ್ಕಾರವೇ ನಿರ್ವಹಣೆ ಮಾಡಿದರೆ ಉತ್ತಮ ಎನ್ನುವ ಚಿಂತನೆ ನಡೆದಿದೆ ಎಂದು ಸಚಿವರು ಹೇಳಿದರು.

ಕಾರ್ಗೋ ವ್ಯವಸ್ಥೆ: ಕೇವಲ ಪ್ರಯಾಣಿಕರಿಗೆ ಮಾತ್ರವಲ್ಲದೇ, ಕಾರ್ಗೋ ವಿಮಾನ ಸಹ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಜಿಲ್ಲೆಯ ದ್ರಾಕ್ಷಿ, ನಿಂಬೆ ಬೆಳೆಗಳನ್ನು ರಫ್ತು ಮಾಡಲು ಸಹ ಚಿಂತನೆ ನಡೆಸಲಾಗುತ್ತಿದೆ. ಮೊದಲು ವಿಮಾನ ಹಾರಾಟ ಮಾಡಿದ ಮೇಲೆ ಕಾರ್ಗೋ ವಿಮಾನ ಹಾರಾಟ ಸಹ ಮಾಡಲಾಗುವುದು ಎಂದರು.

ಇದನ್ನೂ ಓದಿ: ರಾಜ್​ಕೋಟ್​ ವಿಮಾನ ನಿಲ್ದಾಣದ ಗ್ರೀನ್​ ಫೀಲ್ಡ್​ ಟರ್ಮಿನಲ್​ ಉದ್ಘಾಟಿಸಿದ ಪ್ರಧಾನಿ ಮೋದಿ: ವಿಡಿಯೋ

ವಿಜಯಪುರ: ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿ ಮುಂದಿನ ವರ್ಷ ಏಪ್ರಿಲ್‌ನಲ್ಲಿ ವಿಮಾನ ಹಾರಾಟ ಮಾಡುವಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಸೂಚನೆ ನೀಡಿದರು. ವಿಜಯಪುರ ತಾಲೂಕಿನ ಬುರಣಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ವೀಕ್ಷಿಸಿದ ಅವರು, ನಿರ್ಮಾಣ ಹಂತದ ಎಟಿಆರ್, ರನ್ ವೇ, ಪಾರ್ಕಿಂಗ್, ಇತರೆ ಕಚೇರಿ ಸಮುಚ್ಚಯ ವೀಕ್ಷಣೆ ಮಾಡಿದರು.

ನಂತರ ವಿಮಾನ ನಿಲ್ದಾಣದ ಬ್ಲೂಪ್ರಿಂಟ್ ವೀಕ್ಷಣೆ ಮಾಡಿ ಮಾತನಾಡಿದರು. ಸದ್ಯ 300 ಕೋಟಿ ರೂ.ಗಳು ವಿಮಾನ ನಿಲ್ದಾಣ ಕಾಮಗಾರಿ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ 80 ರಿಂದ 50 ಕೋಟಿ ರೂ. ಬೇಕಾಗಿದ್ದು, ಸದ್ಯ 50 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಒಟ್ಟು ಅಂದಾಜು 400 ಕೋಟಿ ರೂ. ಹಣ ವಿಮಾನ ನಿಲ್ದಾಣ ಪೂರ್ಣಗೊಳ್ಳಲು ಅವಶ್ಯಕತೆ ಇದೆ. ಮುಂದಿನ ವರ್ಷ ಫೆಬ್ರವರಿ ಇಲ್ಲವೇ ಮಾರ್ಚ್ ಒಳಗೆ ಪೂರ್ಣ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ ಎಂದರು.

ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು ಸಹ ಏಪ್ರಿಲ್‌ನಲ್ಲಿ ವಿಮಾನ ಹಾರಾಟ ಮಾಡುವ ಗುರಿ ಹೊಂದಲಾಗಿತ್ತು. ಈಗಾಗಲೇ ರನ್‌ವೇ, ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಸೇರಿದಂತೆ ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದರ ಜತೆ ಹಗಲಿನಲ್ಲಿ ಮಾತ್ರವಲ್ಲದೇ, ರಾತ್ರಿ ಸಹ ಲ್ಯಾಂಡಿಂಗ್ ಮಾಡುವ ವ್ಯವಸ್ಥೆ ಸಹ ಕೈಗೊಳ್ಳಲಾಗುತ್ತಿದೆ. ಕಾಮಗಾರಿ ವಿಚಾರದಲ್ಲಿ ಏನಾದರೂ ಮಾರ್ಪಾಡು ಮಾಡಲು ಹೆಚ್ಚುವರಿ ಕಾಮಗಾರಿ ಮಾಡುವ ಕುರಿತು ಮಾಹಿತಿ ಪಡೆದಿದ್ದೇನೆ. ಅಗ್ನಿಶಾಮಕ ಠಾಣೆ, ವಿವಿಧ ಉಪಕರಣಗಳ ಅವಶ್ಯಕತೆ ಇದೆ. ಅದನ್ನು ಸಹ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಹಿಂದೆ ಮಾರ್ಗ್ ಎಂಬ ಕಂಪನಿ ನಿರ್ಮಾಣ ಕಾಮಗಾರಿ ಪಡೆದು ನಂತರ ಹಿಂದೆ ಸರಿದಿತ್ತು. ಬಳಿಕ ಏರಪೋರ್ಟ್ ಅಥಾರಟಿ ಆಫ್ ಇಂಡಿಯಾ ಕಾಮಗಾರಿಗೆ ಒಲವು ತೋರಿಸಿತ್ತು. ಅದು ಸಹ ಹಿಂದೆ ಸರಿದ ಮೇಲೆ ಈಗ ಲೋಕೋಪಯೋಗಿ ಇಲಾಖೆ ಮುತುವರ್ಜಿ ವಹಿಸಿ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. ಕೆಲವು ಆರೋಪಗಳು ಇವರ ಮೇಲೆ ಕೇಳಿ ಬಂದಿವೆ. ಅದನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಈ ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಈ ವಿಚಾರದಲ್ಲಿ ಯಾವುದೇ ಆರೋಪ ಮಾಡುವುದಿಲ್ಲ. ಸದ್ಯ ವಿಮಾನ ನಿಲ್ದಾಣ ಪೂರ್ಣಗೊಳಿಸಬೇಕಾಗಿದೆ. ಇದಕ್ಕೆ ಹೆಚ್ಚುವರಿ ಭೂಮಿ ಬೇಕಾದರೂ ಸಹ ಅದನ್ನು ಖರೀದಿಸಿ ಕಾಮಗಾರಿ ಮುಗಿಸಲಾಗುವುದು. ಬೆಂಗಳೂರು, ರಾಜಸ್ಥಾನ ಲೀಲಾ ಪ್ಯಾಲೇಸ್ ಮಾದರಿ ಪೇಂಟ್​ಅನ್ನು ಈ ವಿಮಾನ ನಿಲ್ದಾಣಕ್ಕೆ ಬಳಸಲು ಸೂಚನೆ ನೀಡಿದ್ದೇನೆ ಎಂದರು.

ಸರ್ಕಾರ ನಿರ್ವಹಣೆಗೆ ಚಿಂತನೆ: ಇದೇ ವೇಳೆ ವಿಮಾನ ನಿಲ್ದಾಣವನ್ನು ಏರಪೋರ್ಟ್ ಅಥಾರಟಿ ಆಫ್ ಇಂಡಿಯಾಗೆ ನೀಡುವ ಬದಲು ಸರ್ಕಾರವೇ ನಿರ್ವಹಣೆ ಮಾಡುವ ಕುರಿತು ಚಿಂತನೆ ನಡೆದಿದೆ. ಏರಪೋರ್ಟ್ ಅಥಾರಟಿ ಆಫ್ ಇಂಡಿಯಾಗೆ ನೀಡಿದರೆ, ಸರ್ಕಾರಕ್ಕೆ ಯಾವುದೇ ಲಾಭ ಬರುವುದಿಲ್ಲ. ಅದರ ಬದಲಿ ವಿಮಾನ ನಿಲ್ದಾಣ ನಿರ್ವಹಣೆಗೆ ಸರ್ಕಾರವೇ ಹಣ ನೀಡಬೇಕಾಗುತ್ತದೆ. ಹಾಗಾಗಿ ಸರ್ಕಾರವೇ ನಿರ್ವಹಣೆ ಮಾಡಿದರೆ ಉತ್ತಮ ಎನ್ನುವ ಚಿಂತನೆ ನಡೆದಿದೆ ಎಂದು ಸಚಿವರು ಹೇಳಿದರು.

ಕಾರ್ಗೋ ವ್ಯವಸ್ಥೆ: ಕೇವಲ ಪ್ರಯಾಣಿಕರಿಗೆ ಮಾತ್ರವಲ್ಲದೇ, ಕಾರ್ಗೋ ವಿಮಾನ ಸಹ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಜಿಲ್ಲೆಯ ದ್ರಾಕ್ಷಿ, ನಿಂಬೆ ಬೆಳೆಗಳನ್ನು ರಫ್ತು ಮಾಡಲು ಸಹ ಚಿಂತನೆ ನಡೆಸಲಾಗುತ್ತಿದೆ. ಮೊದಲು ವಿಮಾನ ಹಾರಾಟ ಮಾಡಿದ ಮೇಲೆ ಕಾರ್ಗೋ ವಿಮಾನ ಹಾರಾಟ ಸಹ ಮಾಡಲಾಗುವುದು ಎಂದರು.

ಇದನ್ನೂ ಓದಿ: ರಾಜ್​ಕೋಟ್​ ವಿಮಾನ ನಿಲ್ದಾಣದ ಗ್ರೀನ್​ ಫೀಲ್ಡ್​ ಟರ್ಮಿನಲ್​ ಉದ್ಘಾಟಿಸಿದ ಪ್ರಧಾನಿ ಮೋದಿ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.