ವಿಜಯಪುರ: ಉತ್ತರ ಕರ್ನಾಟಕದ ಖ್ಯಾತ ರಂಗಭೂಮಿ ಕಲಾವಿದ ನಾಗಯ್ಯ ಸ್ವಾಮಿ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕೊನೆಯುಸಿರೆಳೆದರು.
'ಬಸ್ ಕಂಡಕ್ಟರ್','ಖಾನಾವಳಿ','ಚೆನ್ನಿ' ಸೇರಿದಂತೆ ಹಲವು ಜನಪ್ರಿಯ ನಾಟಕಗಳಲ್ಲಿ ಅಭಿನಯಿಸಿದ ನಾಗಯ್ಯಸ್ವಾಮಿ ಮನೆಮಾತಾಗಿದ್ದರು. ನಾಗಯ್ಯ ವೀರಭದ್ರಯ್ಯ ಸಂಕೀನ(46) ಕುಂಟೋಜಿ ಶ್ರೀ ಘನಮಠೇಶ್ವರ ನಾಟ್ಯ ಸಂಘ ಸ್ಥಾಪಿಸಿ ಕಿರಿಯ ಕಲಾವಿದರ ಬೆಳವಣಿಗೆಗೂ ಶ್ರಮಿಸಿದ್ದರು.