ETV Bharat / state

ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ನಿಂಬೆ ಬೆಳೆಗಾರನ ಬದುಕಿಗೆ ಹುಳಿ ಹಿಂಡಿದ ಕೊರೊನಾ

author img

By

Published : Jul 30, 2020, 7:33 PM IST

ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ರೈತನ ಜೀವನಕ್ಕೆ ಕೊರೊನಾ ಕೊಕ್ಕೆ ಹಾಕಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ನಿಂಬೆ ಮಾರಾಟದಿಂದ ಭರ್ಜರಿ ಆದಾಯ ಬರ್ತಿತು. ಆದ್ರೆ ಕೊರೊನಾ, ಲಾಕ್‌ಡೌನ್‌ಗಳಿಂದಾಗಿ ಬೆಳೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸುವಂತಾಗಿದೆ.

Corona effect: lemon farmer who was expecting profits is in loss
ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ನಿಂಬೆ ರೈತನಿಗೆ ಕೊರೊನಾ ತಂದ ಆಘಾತ

ವಿಜಯಪುರ: ಕಳೆದ 25 ವರ್ಷಗಳಿಂದ ನಿಂಬೆಹಣ್ಣು ಬೆಳೆ ಬೆಳೆಯುತ್ತಾ ಬದುಕು ಕಟ್ಟಿಕೊಂಡಿದ್ದ ರೈತ ಲಾಕ್‌ಡೌನ್‌ನಿಂದ ಮಾರುಕಟ್ಟೆಗೆ ಹೋಗಲಾಗದೆ ನಷ್ಟದಲ್ಲಿದ್ದ. ಸರ್ಕಾರವೇನೋ ಲಾಕ್‌ಡೌನ್ ತೆರವುಗೊಳಿಸಿತು‌. ಹೊಲದಲ್ಲಿರುವ ನಿಂಬೆಹಣ್ಣುಗಳನ್ನು ಮಾರಾಟ‌ ಮಾಡಿ ಕೈತುಂಬ ರೊಕ್ಕ ಸಂಗ್ರಹಿಸಿ ಜೀವನ ನಡೆಸಬಹುದು ಅಂದುಕೊಂಡಾಗ ನಿಂಬೆಹಣ್ಣಿಗೆ ಸರಿಯಾಗಿ ಬೆಲೆ ಸಿಗದೆ ಹೊಲದಲ್ಲೇ ಬಿದ್ದು ಕೊಳೆಯುವಂತಾಗಿದೆ.

ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ನಿಂಬೆ ರೈತನಿಗೆ ಕೊರೊನಾ ತಂದ ಆಘಾತ

ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ರೈತ ಸಾಹೇಬ ಗೌಡ ಬಿರಾದಾರ ಅವರ ಜೀವನವನ್ನು ಕೊರೊನಾ ಸಂಕಷ್ಟದಲ್ಲಿ ಸಿಲುಕಿಸಿದೆ. ಪ್ರತಿವರ್ಷ ಬೇಸಿಗೆಯಲ್ಲಿ ನಿಂಬೆ ಮಾರಾಟದಿಂದ ಭರ್ಜರಿ ಆದಾಯ ಬರ್ತಿತ್ತು. ಆದ್ರೆ ಕೊರೊನಾ, ಲಾಕ್‌ಡೌನ್‌ಗಳಿಂದಾಗಿ ಬೆಳೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿತೆಂದು ನಿಂಬೆಹಣ್ಣುಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದ್ರೆ ಮೂಟೆಗೆ 100 ರೂ.ಗಳಿಗೆ ಕೇಳುತ್ತಿದ್ದಾರೆ. ಇದ್ರಿಂದ ರೈತನ ನಿರೀಕ್ಷೆಗಳು ಹುಸಿಯಾಗಿವೆ. ‌ಇತ್ತ ಬೇರೆ ಜಿಲ್ಲೆಗಳ ಮಾರುಕಟ್ಟೆಗಳಿಗೆ ಹೋಗಬೇಕೆಂದ್ರೂ ಬಂದ ಆದಾಯ ಸಾರಿಗೆ ವೆಚ್ಚಕ್ಕೂ ಸರಿದೂಗದು ಎಂದು ರೈತ ಗಿಡಳಿಂದ ಬೆಳೆ ತೆಗೆಯದೆ ಹಾಗೇ ಉದುರಿ ಕೊಳೆತು ಹೋಗಲು ಬಿಟ್ಟಿದ್ದಾನೆ.

ಕಳೆದ 10 ವರ್ಷಗಳಿಂದ 4 ಎಕರೆ ಪ್ರದೇಶದಲ್ಲಿ ಲಿಂಬೆ ಬೆಳೆಯಲಾಗುತ್ತಿದೆ. ಪ್ರತಿ ವರ್ಷ ಮಾರ್ಚ್‌ನಿಂದ ಅಗಸ್ಟ್‌ ತಿಂಗಳ ಅಂತ್ಯದವರೆಗೂ ರೈತ ಸಾಹೇಬ ಗೌಡನಿಗೆ ನಿಂಬೆ ಮಾರಾಟದಿಂದ 8 ಲಕ್ಷಕ್ಕೂ ಅಧಿಕ ಆದಾಯ ಬರುತ್ತಿತ್ತು. ಇನ್ನೂ ಒಂದು ಮೂಟೆ ನಿಂಬೆ ಬರೋಬ್ಬರಿ 2,500 ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು‌. ಇತ್ತ ಕಳೆದ ವರ್ಷ ಉತ್ತಮವಾಗಿ ಮಳೆ ಸುರಿದ ಪರಿಣಾಮ, ಈ ವರ್ಷ ಉತ್ತಮ ಫಸಲು ಬಂದಿದೆ. ಆದ್ರೆ ಕೊರೊನಾ ಹಾವಳಿಯಿಂದಾಗಿ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಒಂದು ಎಕರೆ ನಿಂಬೆ ಬೆಳೆ ಬೆಳೆಯಲು ಪ್ರತಿ ವರ್ಷ 50,000 ಕ್ಕೂ ಅಧಿಕ ಖರ್ಚಾಗುತ್ತಿತು. ಅಂದರೆ 4 ಎಕರೆಗೆ ಸುಮಾರು 2 ಲಕ್ಷ ವೆಚ್ಚ ಮಾಡಿ 10 ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬೆಳೆ ನಂಬಿ ಮಾಡಿಕೊಂಡ ಸಾಲ ತೀರಿಸುವುದಾದರೂ ಹೇಗೆ ಎಂಬ ಚಿಂತೆಯಲ್ಲಿ ರೈತನಿದ್ದಾನೆ. ಹೀಗಾಗಿ ಸರ್ಕಾರ ಬೆಳೆಗಾರರ ನೆರವಿಗೆ ಮುಂದಾಗಬೇಕು ಎಂಬ ಕೂಗು ರೈತರದ್ದಾಗಿದೆ.

ವಿಜಯಪುರ: ಕಳೆದ 25 ವರ್ಷಗಳಿಂದ ನಿಂಬೆಹಣ್ಣು ಬೆಳೆ ಬೆಳೆಯುತ್ತಾ ಬದುಕು ಕಟ್ಟಿಕೊಂಡಿದ್ದ ರೈತ ಲಾಕ್‌ಡೌನ್‌ನಿಂದ ಮಾರುಕಟ್ಟೆಗೆ ಹೋಗಲಾಗದೆ ನಷ್ಟದಲ್ಲಿದ್ದ. ಸರ್ಕಾರವೇನೋ ಲಾಕ್‌ಡೌನ್ ತೆರವುಗೊಳಿಸಿತು‌. ಹೊಲದಲ್ಲಿರುವ ನಿಂಬೆಹಣ್ಣುಗಳನ್ನು ಮಾರಾಟ‌ ಮಾಡಿ ಕೈತುಂಬ ರೊಕ್ಕ ಸಂಗ್ರಹಿಸಿ ಜೀವನ ನಡೆಸಬಹುದು ಅಂದುಕೊಂಡಾಗ ನಿಂಬೆಹಣ್ಣಿಗೆ ಸರಿಯಾಗಿ ಬೆಲೆ ಸಿಗದೆ ಹೊಲದಲ್ಲೇ ಬಿದ್ದು ಕೊಳೆಯುವಂತಾಗಿದೆ.

ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ನಿಂಬೆ ರೈತನಿಗೆ ಕೊರೊನಾ ತಂದ ಆಘಾತ

ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ರೈತ ಸಾಹೇಬ ಗೌಡ ಬಿರಾದಾರ ಅವರ ಜೀವನವನ್ನು ಕೊರೊನಾ ಸಂಕಷ್ಟದಲ್ಲಿ ಸಿಲುಕಿಸಿದೆ. ಪ್ರತಿವರ್ಷ ಬೇಸಿಗೆಯಲ್ಲಿ ನಿಂಬೆ ಮಾರಾಟದಿಂದ ಭರ್ಜರಿ ಆದಾಯ ಬರ್ತಿತ್ತು. ಆದ್ರೆ ಕೊರೊನಾ, ಲಾಕ್‌ಡೌನ್‌ಗಳಿಂದಾಗಿ ಬೆಳೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿತೆಂದು ನಿಂಬೆಹಣ್ಣುಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದ್ರೆ ಮೂಟೆಗೆ 100 ರೂ.ಗಳಿಗೆ ಕೇಳುತ್ತಿದ್ದಾರೆ. ಇದ್ರಿಂದ ರೈತನ ನಿರೀಕ್ಷೆಗಳು ಹುಸಿಯಾಗಿವೆ. ‌ಇತ್ತ ಬೇರೆ ಜಿಲ್ಲೆಗಳ ಮಾರುಕಟ್ಟೆಗಳಿಗೆ ಹೋಗಬೇಕೆಂದ್ರೂ ಬಂದ ಆದಾಯ ಸಾರಿಗೆ ವೆಚ್ಚಕ್ಕೂ ಸರಿದೂಗದು ಎಂದು ರೈತ ಗಿಡಳಿಂದ ಬೆಳೆ ತೆಗೆಯದೆ ಹಾಗೇ ಉದುರಿ ಕೊಳೆತು ಹೋಗಲು ಬಿಟ್ಟಿದ್ದಾನೆ.

ಕಳೆದ 10 ವರ್ಷಗಳಿಂದ 4 ಎಕರೆ ಪ್ರದೇಶದಲ್ಲಿ ಲಿಂಬೆ ಬೆಳೆಯಲಾಗುತ್ತಿದೆ. ಪ್ರತಿ ವರ್ಷ ಮಾರ್ಚ್‌ನಿಂದ ಅಗಸ್ಟ್‌ ತಿಂಗಳ ಅಂತ್ಯದವರೆಗೂ ರೈತ ಸಾಹೇಬ ಗೌಡನಿಗೆ ನಿಂಬೆ ಮಾರಾಟದಿಂದ 8 ಲಕ್ಷಕ್ಕೂ ಅಧಿಕ ಆದಾಯ ಬರುತ್ತಿತ್ತು. ಇನ್ನೂ ಒಂದು ಮೂಟೆ ನಿಂಬೆ ಬರೋಬ್ಬರಿ 2,500 ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು‌. ಇತ್ತ ಕಳೆದ ವರ್ಷ ಉತ್ತಮವಾಗಿ ಮಳೆ ಸುರಿದ ಪರಿಣಾಮ, ಈ ವರ್ಷ ಉತ್ತಮ ಫಸಲು ಬಂದಿದೆ. ಆದ್ರೆ ಕೊರೊನಾ ಹಾವಳಿಯಿಂದಾಗಿ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಒಂದು ಎಕರೆ ನಿಂಬೆ ಬೆಳೆ ಬೆಳೆಯಲು ಪ್ರತಿ ವರ್ಷ 50,000 ಕ್ಕೂ ಅಧಿಕ ಖರ್ಚಾಗುತ್ತಿತು. ಅಂದರೆ 4 ಎಕರೆಗೆ ಸುಮಾರು 2 ಲಕ್ಷ ವೆಚ್ಚ ಮಾಡಿ 10 ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬೆಳೆ ನಂಬಿ ಮಾಡಿಕೊಂಡ ಸಾಲ ತೀರಿಸುವುದಾದರೂ ಹೇಗೆ ಎಂಬ ಚಿಂತೆಯಲ್ಲಿ ರೈತನಿದ್ದಾನೆ. ಹೀಗಾಗಿ ಸರ್ಕಾರ ಬೆಳೆಗಾರರ ನೆರವಿಗೆ ಮುಂದಾಗಬೇಕು ಎಂಬ ಕೂಗು ರೈತರದ್ದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.