ETV Bharat / state

ಸ್ವಯಂ ಲಾಕ್​ಡೌನ್ ಮಾಡಿಕೊಂಡ ಮರುದಿನವೇ ಗ್ರಾಮದಲ್ಲಿ ಅದ್ದೂರಿ ಜಾತ್ರೆ

author img

By

Published : Jul 18, 2020, 5:41 PM IST

ವಿಜಯಪುರದ ಕೊಲ್ಹಾರದ ಕೂಡಗಿ ಗ್ರಾಮದ ಒಂದು ಸಮುದಾಯದ ಜನರು ಸಾಮಾಜಿಕ ಅಂತರ ಇಲ್ಲದೆ, ಅದ್ದೂರಿಯಾಗಿ ಜಾತ್ರೆ ಮಾಡುವ ಮೂಲಕ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿದ್ದಾರೆ.

Case against koodagi villagers for violating district ordinance
ಸ್ವಯಂ ಲಾಕ್​ಡೌನ್ ಮಾಡಿಕೊಂಡ ಮರುದಿನವೇ ಈ ಗ್ರಾಮದಲ್ಲಿ ನಡೆಯಿತು ಅದ್ದೂರಿ ಜಾತ್ರೆ

ವಿಜಯಪುರ: ಕೊರೊನಾ ಹರಡುವಿಕೆ ನಿಯಂತ್ರಿಸಲು ಗ್ರಾಮದಲ್ಲಿ ಸ್ವಯಂ ಲಾಕ್​ಡೌನ್ ಮಾಡಿ, ಮರುದಿನವೇ ನೂರಾರು ಜನರು ಸೇರಿ ಜಾತ್ರೆ ಮಾಡಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದಲ್ಲಿ ನಡೆದಿದೆ.

ಸ್ವಯಂ ಲಾಕ್​ಡೌನ್ ಮಾಡಿಕೊಂಡ ಮರುದಿನವೇ ಈ ಗ್ರಾಮದಲ್ಲಿ ನಡೆಯಿತು ಅದ್ದೂರಿ ಜಾತ್ರೆ

ಕೂಡಗಿ ಗ್ರಾಮದ ಒಂದು ಸಮುದಾಯದ ಜನರು ನಿನ್ನೆ (ಶುಕ್ರವಾರ) ದುರ್ಗಾದೇವಿ ಮತ್ತು ಸೇವಾಲಾಲ್ ಜಾತ್ರೆ ಆಚರಿಸಿದ್ದರು. ನೂರಾರು ಜನರು ಸೇರಿದ್ದ ಜಾತ್ರೆಯಲ್ಲಿ ಮಾಸ್ಕ್​, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಬಾಡೂಟ ಊಟ ಮಾಡಿ, ಜಾತ್ರೆಯಲ್ಲಿ ಸಂಭ್ರಮಿಸಿದ್ದರು. ಕೊರೊನಾ ಎಮರ್ಜನ್ಸಿಯಲ್ಲಿ ಜಾತ್ರೆ, ಸಭೆ-ಸಮಾರಂಭ, ಸಂತೆ ಮಾಡಬಾರದು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದನ್ನು ಕೂಡಗಿ ಗ್ರಾಮಸ್ಥರು ಉಲ್ಲಂಘಿಸಿದ್ದು, ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.

ಕೊರೊನಾ ಎದುರಿಸಲು ಕೂಡಗಿ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಲಾಕ್​ಡೌನ್ ಮಾಡಿಕೊಂಡಿದ್ದರು. ಇದರ ಮರುದಿನವೇ ಜಾತ್ರೆ ಆಚರಿಸಿ ತಮ್ಮದೇ ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್​ಪಿ ಅನುಪಮ್ ಅಗರವಾಲ್ ಪ್ರಕರಣ ದಾಖಲಿಸಿದ್ದಾರೆ. ಗ್ರಾಮಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ವಿಜಯಪುರ: ಕೊರೊನಾ ಹರಡುವಿಕೆ ನಿಯಂತ್ರಿಸಲು ಗ್ರಾಮದಲ್ಲಿ ಸ್ವಯಂ ಲಾಕ್​ಡೌನ್ ಮಾಡಿ, ಮರುದಿನವೇ ನೂರಾರು ಜನರು ಸೇರಿ ಜಾತ್ರೆ ಮಾಡಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದಲ್ಲಿ ನಡೆದಿದೆ.

ಸ್ವಯಂ ಲಾಕ್​ಡೌನ್ ಮಾಡಿಕೊಂಡ ಮರುದಿನವೇ ಈ ಗ್ರಾಮದಲ್ಲಿ ನಡೆಯಿತು ಅದ್ದೂರಿ ಜಾತ್ರೆ

ಕೂಡಗಿ ಗ್ರಾಮದ ಒಂದು ಸಮುದಾಯದ ಜನರು ನಿನ್ನೆ (ಶುಕ್ರವಾರ) ದುರ್ಗಾದೇವಿ ಮತ್ತು ಸೇವಾಲಾಲ್ ಜಾತ್ರೆ ಆಚರಿಸಿದ್ದರು. ನೂರಾರು ಜನರು ಸೇರಿದ್ದ ಜಾತ್ರೆಯಲ್ಲಿ ಮಾಸ್ಕ್​, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಬಾಡೂಟ ಊಟ ಮಾಡಿ, ಜಾತ್ರೆಯಲ್ಲಿ ಸಂಭ್ರಮಿಸಿದ್ದರು. ಕೊರೊನಾ ಎಮರ್ಜನ್ಸಿಯಲ್ಲಿ ಜಾತ್ರೆ, ಸಭೆ-ಸಮಾರಂಭ, ಸಂತೆ ಮಾಡಬಾರದು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದನ್ನು ಕೂಡಗಿ ಗ್ರಾಮಸ್ಥರು ಉಲ್ಲಂಘಿಸಿದ್ದು, ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.

ಕೊರೊನಾ ಎದುರಿಸಲು ಕೂಡಗಿ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಲಾಕ್​ಡೌನ್ ಮಾಡಿಕೊಂಡಿದ್ದರು. ಇದರ ಮರುದಿನವೇ ಜಾತ್ರೆ ಆಚರಿಸಿ ತಮ್ಮದೇ ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್​ಪಿ ಅನುಪಮ್ ಅಗರವಾಲ್ ಪ್ರಕರಣ ದಾಖಲಿಸಿದ್ದಾರೆ. ಗ್ರಾಮಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.