ETV Bharat / state

ಡಿಕೆಶಿಗೆ ನಾನು ಬಲ್ಡೋಜರ್​ ತರ್ತೀನಿ ಅಂತಾ ಭಯವಿದೆ : ಯತ್ನಾಳ್​

author img

By

Published : May 7, 2022, 4:46 PM IST

Updated : May 7, 2022, 6:29 PM IST

ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈ ವೇಳೆ ನನಗೆ ಸಚಿವ ಸ್ಥಾನ ಸಿಗಬಾರದು ಎಂದು ಷಡ್ಯಂತ್ರ ಮಾಡಲಾಗುತ್ತಿದೆ. ನನಗೆ ಸಚಿವ ಸ್ಥಾನ ಬೇಕು ಎಂದು ಬೇಡಿಕೆ ಇಟ್ಟಿಲ್ಲ. ಈ ಬಗ್ಗೆ ಸಿಎಂ ಜೊತೆಗೂ ಮಾತನಾಡಿದ್ದೇನೆ ಎಂದು ಯತ್ನಾಳ್​ ಹೇಳಿದರು..

bjp-mla-basanagoudac
ಬಸನಗೌಡ ಪಾಟೀಲ್​ ಯತ್ನಾಳ್​

ವಿಜಯಪುರ : ನಾನು ಮುಖ್ಯಮಂತ್ರಿಯಾದರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿ.ಕೆ.ಶಿವಕುಮಾರ್​ ಅವರಿಗಿದೆ. ಮತ್ತೆ ತಾವು ಅದೇ ಜಾಗಕ್ಕೆ (ಜೈಲಿಗೆ) ಹೋಗಬೇಕಾಗುತ್ತೆ ಅನ್ನೋ ಹೆದರಿಕೆ ಇದೆ. ನಾನು ಪವರ್​ಫುಲ್​ ಮನುಷ್ಯ ಎಂಬ ಬಗ್ಗೆ ಡಿಕೆಶಿಗೆ ಸಂದೇಶ‌ ಸಿಕ್ಕಿದೆ. ಇದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರ 2 ಸಾವಿರ ಕೋಟಿ ರೂಪಾಯಿ ಆರೋಪದ ವಿರುದ್ಧ ಹರಿಹಾಯ್ದ ಪರಿ.

ಡಿಕೆಶಿಗೆ ನಾನು ಬಲ್ಡೋಜರ್​ ತರ್ತೀನಿ ಅಂತಾ ಭಯವಿದೆ : ಯತ್ನಾಳ್​

ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್​, ನಾನು ವಿಧಾನಸೌಧದಲ್ಲಿ 2 ಸಾವಿರ ಕೋಟಿ ರೂಪಾಯಿ ವಿಚಾರ ಮಾತನಾಡಿದಾಗ ಇದು ದೊಡ್ಡ ವಿಚಾರ ಆಗಲಿಲ್ಲ. ಚರ್ಚೆಯೂ ಆಗಲಿಲ್ಲ. ಕೆಲವೇ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ. ಅದಕ್ಕಾಗಿ ಡಿ ಕೆ ಶಿವಕುಮಾರ್​ ಈ ವಿಚಾರವನ್ನು ತೇಲಿಸಿದ್ದಾರೆ ಎಂದು ಟೀಕಿಸಿದರು.

ನನ್ನ ಬಗ್ಗೆ ಭಯ ಇದೆ. ಯತ್ನಾಳ್ ಏನಾದರೂ ಸಿಎಂ, ಸಚಿವರಾದರೆ ಬುಲ್ಡೋಜರ್ ತರ್ತಾರೆ ಅಂತಾ ಭಯ ಇದೆ. ಅಕ್ರಮ ಆಸ್ತಿ ಒಡೆಯೋಕೆ ಶುರು ಮಾಡ್ತಾರೆ ಅಂತಾ ಭಯ. ಬುಲ್ಡೋಜರ್​ಗೂ ಆರ್ಡರ್ ಕೊಟ್ಟಿದ್ದೀನಿ ಎಂದು ಯತ್ನಾಳ್ ವ್ಯಂಗವಾಡಿದರು.

ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ : ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈ ವೇಳೆ ನನಗೆ ಸಚಿವ ಸ್ಥಾನ ಸಿಗಬಾರದು ಎಂದು ಷಡ್ಯಂತ್ರ ಮಾಡಲಾಗುತ್ತಿದೆ. ನನಗೆ ಸಚಿವ ಸ್ಥಾನ ಬೇಕು ಎಂದು ಬೇಡಿಕೆ ಇಟ್ಟಿಲ್ಲ. ಈ ಬಗ್ಗೆ ಸಿಎಂ ಜೊತೆಗೂ ಮಾತನಾಡಿದ್ದೇನೆ ಎಂದು ಯತ್ನಾಳ್​ ಹೇಳಿದರು.

ಓದಿ: ಯತ್ನಾಳ್​​​ಗೆ ಯಾರು ಒತ್ತಡ ಹಾಕಿದ್ದರು, ಹಣ ಕೇಳಿದ್ದರು ಎಂದು ಅವರೇ ಹೇಳಬೇಕು: ಬಿ.ವೈ.ವಿಜಯೇಂದ್ರ

ವಿಜಯಪುರ : ನಾನು ಮುಖ್ಯಮಂತ್ರಿಯಾದರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿ.ಕೆ.ಶಿವಕುಮಾರ್​ ಅವರಿಗಿದೆ. ಮತ್ತೆ ತಾವು ಅದೇ ಜಾಗಕ್ಕೆ (ಜೈಲಿಗೆ) ಹೋಗಬೇಕಾಗುತ್ತೆ ಅನ್ನೋ ಹೆದರಿಕೆ ಇದೆ. ನಾನು ಪವರ್​ಫುಲ್​ ಮನುಷ್ಯ ಎಂಬ ಬಗ್ಗೆ ಡಿಕೆಶಿಗೆ ಸಂದೇಶ‌ ಸಿಕ್ಕಿದೆ. ಇದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರ 2 ಸಾವಿರ ಕೋಟಿ ರೂಪಾಯಿ ಆರೋಪದ ವಿರುದ್ಧ ಹರಿಹಾಯ್ದ ಪರಿ.

ಡಿಕೆಶಿಗೆ ನಾನು ಬಲ್ಡೋಜರ್​ ತರ್ತೀನಿ ಅಂತಾ ಭಯವಿದೆ : ಯತ್ನಾಳ್​

ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯತ್ನಾಳ್​, ನಾನು ವಿಧಾನಸೌಧದಲ್ಲಿ 2 ಸಾವಿರ ಕೋಟಿ ರೂಪಾಯಿ ವಿಚಾರ ಮಾತನಾಡಿದಾಗ ಇದು ದೊಡ್ಡ ವಿಚಾರ ಆಗಲಿಲ್ಲ. ಚರ್ಚೆಯೂ ಆಗಲಿಲ್ಲ. ಕೆಲವೇ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ. ಅದಕ್ಕಾಗಿ ಡಿ ಕೆ ಶಿವಕುಮಾರ್​ ಈ ವಿಚಾರವನ್ನು ತೇಲಿಸಿದ್ದಾರೆ ಎಂದು ಟೀಕಿಸಿದರು.

ನನ್ನ ಬಗ್ಗೆ ಭಯ ಇದೆ. ಯತ್ನಾಳ್ ಏನಾದರೂ ಸಿಎಂ, ಸಚಿವರಾದರೆ ಬುಲ್ಡೋಜರ್ ತರ್ತಾರೆ ಅಂತಾ ಭಯ ಇದೆ. ಅಕ್ರಮ ಆಸ್ತಿ ಒಡೆಯೋಕೆ ಶುರು ಮಾಡ್ತಾರೆ ಅಂತಾ ಭಯ. ಬುಲ್ಡೋಜರ್​ಗೂ ಆರ್ಡರ್ ಕೊಟ್ಟಿದ್ದೀನಿ ಎಂದು ಯತ್ನಾಳ್ ವ್ಯಂಗವಾಡಿದರು.

ಸಚಿವ ಸ್ಥಾನ ತಪ್ಪಿಸಲು ಷಡ್ಯಂತ್ರ : ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈ ವೇಳೆ ನನಗೆ ಸಚಿವ ಸ್ಥಾನ ಸಿಗಬಾರದು ಎಂದು ಷಡ್ಯಂತ್ರ ಮಾಡಲಾಗುತ್ತಿದೆ. ನನಗೆ ಸಚಿವ ಸ್ಥಾನ ಬೇಕು ಎಂದು ಬೇಡಿಕೆ ಇಟ್ಟಿಲ್ಲ. ಈ ಬಗ್ಗೆ ಸಿಎಂ ಜೊತೆಗೂ ಮಾತನಾಡಿದ್ದೇನೆ ಎಂದು ಯತ್ನಾಳ್​ ಹೇಳಿದರು.

ಓದಿ: ಯತ್ನಾಳ್​​​ಗೆ ಯಾರು ಒತ್ತಡ ಹಾಕಿದ್ದರು, ಹಣ ಕೇಳಿದ್ದರು ಎಂದು ಅವರೇ ಹೇಳಬೇಕು: ಬಿ.ವೈ.ವಿಜಯೇಂದ್ರ

Last Updated : May 7, 2022, 6:29 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.