ETV Bharat / state

ಕೊರೊನಾ ತೊಲಗಲೆಂದು ಗ್ರಾಮದೇವತೆ ಮೊರೆ ಹೋದ ಬಿಜೆಪಿ ಮುಖಂಡರು

author img

By

Published : May 18, 2021, 5:18 PM IST

Updated : May 18, 2021, 9:49 PM IST

ಈ ಹಿಂದೆ ಬಂದ ಪ್ಲೇಗ್, ಪೋಲಿಯೋ ಮೊದಲಾದ ಮಹಾಮಾರಿಗಳು ಬಂದಾಗ ನಮ್ಮ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ದೈವದ ಮೊರೆಯೂ ಹೋಗಲಾಗಿತ್ತು..

pooja
pooja

ಮುದ್ದೇಬಿಹಾಳ : ಕೋವಿಡ್ ಹಾವಳಿ ನಿಯಂತ್ರಣಕ್ಕೆ ಬರಬೇಕು. ಮತ್ತೆ ಮೊದಲಿನಂತೆ ಸಮಾಜದಲ್ಲಿ ಎಲ್ಲರೂ ಬದುಕುವಂತಾಗಬೇಕು ಎಂದು ಬಿಜೆಪಿ ಮುಖಂಡರು ಗ್ರಾಮದೇವತೆ ಮೊರೆ ಹೋಗಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ,ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ಮುಖಂಡರಾದ ಸತೀಶ್ ಓಸ್ವಾಲ್,ವಿಕ್ರಂ ಓಸ್ವಾಲ,ಪಕ್ಷದ ತಾಲೂಕಾಧ್ಯಕ್ಷ ಪರಶುರಾಮ ಪವಾರ್ ಮೊದಲಾದವರು ಪಟ್ಟಣದ ಕುಂಬಾರ ಓಣಿಯಲ್ಲಿರುವ ದ್ಯಾಮವ್ವ ದೇವಸ್ಥಾನದಲ್ಲಿ ಮಂಗಳವಾರ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಕೊರೊನಾ ತೊಲಗಲೆಂದು ಗ್ರಾಮದೇವತೆ ಮೊರೆ ಹೋದ ಬಿಜೆಪಿ ಮುಖಂಡರು

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು, ಈ ಹಿಂದೆ ಬಂದ ಪ್ಲೇಗ್, ಪೋಲಿಯೋ ಮೊದಲಾದ ಮಹಾಮಾರಿಗಳು ಬಂದಾಗ ನಮ್ಮ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ದೈವದ ಮೊರೆಯೂ ಹೋಗಲಾಗಿತ್ತು. ಈ ಉದ್ದೇಶದಿಂದ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಹೇಳಿದರು. ಈ ವೇಳೆ ಹಲವು ಬಿಜೆಪಿ ಮುಖಂಡರು ಇದ್ದರು.

ಮುದ್ದೇಬಿಹಾಳ : ಕೋವಿಡ್ ಹಾವಳಿ ನಿಯಂತ್ರಣಕ್ಕೆ ಬರಬೇಕು. ಮತ್ತೆ ಮೊದಲಿನಂತೆ ಸಮಾಜದಲ್ಲಿ ಎಲ್ಲರೂ ಬದುಕುವಂತಾಗಬೇಕು ಎಂದು ಬಿಜೆಪಿ ಮುಖಂಡರು ಗ್ರಾಮದೇವತೆ ಮೊರೆ ಹೋಗಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ,ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ಮುಖಂಡರಾದ ಸತೀಶ್ ಓಸ್ವಾಲ್,ವಿಕ್ರಂ ಓಸ್ವಾಲ,ಪಕ್ಷದ ತಾಲೂಕಾಧ್ಯಕ್ಷ ಪರಶುರಾಮ ಪವಾರ್ ಮೊದಲಾದವರು ಪಟ್ಟಣದ ಕುಂಬಾರ ಓಣಿಯಲ್ಲಿರುವ ದ್ಯಾಮವ್ವ ದೇವಸ್ಥಾನದಲ್ಲಿ ಮಂಗಳವಾರ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಕೊರೊನಾ ತೊಲಗಲೆಂದು ಗ್ರಾಮದೇವತೆ ಮೊರೆ ಹೋದ ಬಿಜೆಪಿ ಮುಖಂಡರು

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು, ಈ ಹಿಂದೆ ಬಂದ ಪ್ಲೇಗ್, ಪೋಲಿಯೋ ಮೊದಲಾದ ಮಹಾಮಾರಿಗಳು ಬಂದಾಗ ನಮ್ಮ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ದೈವದ ಮೊರೆಯೂ ಹೋಗಲಾಗಿತ್ತು. ಈ ಉದ್ದೇಶದಿಂದ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಹೇಳಿದರು. ಈ ವೇಳೆ ಹಲವು ಬಿಜೆಪಿ ಮುಖಂಡರು ಇದ್ದರು.

Last Updated : May 18, 2021, 9:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.