ETV Bharat / state

ಮುದ್ದೇಬಿಹಾಳದಲ್ಲಿ ಬಿರುಸುಗೊಂಡ ಕೃಷಿ ಚಟುವಟಿಕೆ - undefined

ತಾಲೂಕಿನಲ್ಲಿ ಕೆಲವರು ನೆಲಹಸನು ಮಾಡುವುದು, ಗೊಬ್ಬರ ಹಾಕುವುದು, ಬೀಜಗಳ ಖರೀದಿ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

ಉಳುಮೆ ಮಾಡುತ್ತಿರುವುದು
author img

By

Published : Jun 13, 2019, 5:51 PM IST

ವಿಜಯಪುರ: ರಾಜ್ಯದ ಹಲವೆಡೆ ಮಳೆಯಿಲ್ಲದೇ ಬರ ಪರಿಸ್ಥಿತಿ ಎದುರಾಗಿದ್ದು, ನದಿ ಹಾಗೂ ಕೆರೆಗಳು ಬತ್ತಿ ಹೋಗಿವೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಹಲವೆಡೆ ಮುಂಗಾರು ಪೂರ್ವ ಮಳೆ ರೈತಾಪಿ ವರ್ಗಕ್ಕೆ ಕೊಂಚ ನಿರಾಳ ತಂದಿದೆ. ಈ ಮಳೆಯಿಂದ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಕಾರ್ಯಗಳು ಚುರುಕುಗೊಂಡಿದ್ದು, ರೈತರ ಪಾಲಿಗೆ ಅದೃಷ್ಟದ ಬೆಳೆಗಳಾದ ಹೆಸರು, ತೊಗರಿ, ಹತ್ತಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ.

ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಭಾಸ್ ಮೂಕಿಹಾಳ

ಕಳೆದ ಬಾರಿ ಬಿತ್ತನೆ ಬೀಜಗಳು ಸರ್ಕಾರದಿಂದ ಸಮರ್ಪಕವಾಗಿ ಪೂರೈಕೆ ಆಗಿರಲಿಲ್ಲ. ಜೊತೆಗೆ ಮಳೆಯೂ ಕೈಕೊಟ್ಟಿತ್ತು. ಆದರೆ, ಈ ಬಾರಿ ಅಧಿಕ ಪ್ರಮಾಣದಲ್ಲಿ ಮಳೆ ಬಿದ್ದಿದ್ದು, ಸರ್ಕಾರವೂ ಕೂಡ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಿದೆ. ಈಗಾಗಲೇ ತೊಗರಿ, ಹೆಸರು, ಸಜ್ಜೆ ರೈತ ಸಂಪರ್ಕ ಕೇಂದ್ರಕ್ಕೆ ತಲುಪಿವೆ. ಸರ್ಕಾರ ನಿಗದಿಪಡಿಸಿರುವ ದರಕ್ಕೆ ಬಿತ್ತನೆ ಬೀಜಗಳನ್ನು ರೈತರು ಖರೀದಿಸುತ್ತಿದ್ದಾರೆ. ಯಾವುದೇ ಬೀಜದ ಕೊರತೆ ಕಂಡು ಬರುವುದಿಲ್ಲ ಎಂದು ಮುದ್ದೇಬಿಹಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಭಾಸ್ ಮೂಕಿಹಾಳ ಮಾಹಿತಿ ನೀಡಿದರು.

ವಿಜಯಪುರ: ರಾಜ್ಯದ ಹಲವೆಡೆ ಮಳೆಯಿಲ್ಲದೇ ಬರ ಪರಿಸ್ಥಿತಿ ಎದುರಾಗಿದ್ದು, ನದಿ ಹಾಗೂ ಕೆರೆಗಳು ಬತ್ತಿ ಹೋಗಿವೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಹಲವೆಡೆ ಮುಂಗಾರು ಪೂರ್ವ ಮಳೆ ರೈತಾಪಿ ವರ್ಗಕ್ಕೆ ಕೊಂಚ ನಿರಾಳ ತಂದಿದೆ. ಈ ಮಳೆಯಿಂದ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಕಾರ್ಯಗಳು ಚುರುಕುಗೊಂಡಿದ್ದು, ರೈತರ ಪಾಲಿಗೆ ಅದೃಷ್ಟದ ಬೆಳೆಗಳಾದ ಹೆಸರು, ತೊಗರಿ, ಹತ್ತಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ.

ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಭಾಸ್ ಮೂಕಿಹಾಳ

ಕಳೆದ ಬಾರಿ ಬಿತ್ತನೆ ಬೀಜಗಳು ಸರ್ಕಾರದಿಂದ ಸಮರ್ಪಕವಾಗಿ ಪೂರೈಕೆ ಆಗಿರಲಿಲ್ಲ. ಜೊತೆಗೆ ಮಳೆಯೂ ಕೈಕೊಟ್ಟಿತ್ತು. ಆದರೆ, ಈ ಬಾರಿ ಅಧಿಕ ಪ್ರಮಾಣದಲ್ಲಿ ಮಳೆ ಬಿದ್ದಿದ್ದು, ಸರ್ಕಾರವೂ ಕೂಡ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಿದೆ. ಈಗಾಗಲೇ ತೊಗರಿ, ಹೆಸರು, ಸಜ್ಜೆ ರೈತ ಸಂಪರ್ಕ ಕೇಂದ್ರಕ್ಕೆ ತಲುಪಿವೆ. ಸರ್ಕಾರ ನಿಗದಿಪಡಿಸಿರುವ ದರಕ್ಕೆ ಬಿತ್ತನೆ ಬೀಜಗಳನ್ನು ರೈತರು ಖರೀದಿಸುತ್ತಿದ್ದಾರೆ. ಯಾವುದೇ ಬೀಜದ ಕೊರತೆ ಕಂಡು ಬರುವುದಿಲ್ಲ ಎಂದು ಮುದ್ದೇಬಿಹಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಭಾಸ್ ಮೂಕಿಹಾಳ ಮಾಹಿತಿ ನೀಡಿದರು.

Intro:File name: seeds fullfill
Formate: avb
Reporter: Suraj Risaldar
Place: vijaypur
Date: 13-06-2019

ಸ್ಲಗ್: ಮುಂಗಾರು ಪ್ರವೇಷ: ರೈತರಲ್ಲಿ ಹರುಷ
ಬಿಸಿಲಿನಾಡಿನಲ್ಲಿ 'ಮಳೆ' ನಾಡಿನ ವಾತಾವರಣ
ವಿಜಯಪುರ ಜಿಲ್ಲೆಯಲ್ಲಿ ಚುರುಕುಗೊಂಡ
ಬಿತ್ತನೆಯ ಕಾರ್ಯ

Anchor: ಬರದ ಛಾಯಯಿಂದ ನಲುಗಿದ್ದ ರಾಜ್ಯದ ರೈತಾಪಿ ವರ್ಗಕ್ಕೆ ಮುಂಗಾರು ಮಳೆ ಕೊಂಚು ಉಸಿರು ಮೂಡಿಸಿದೆ. ಕಳೆದ ಒಂದು ವಾರದಿಂದ ಮೋಡಗಳ ಮರೆಯಾಟದ ನಂತರ ರಾಜ್ಯದ ಹಲವೆಡೆ ಸುರಿದ ಮುಂಗಾರು ಮಳೆ ಭೂ ವಡಲು ತಂಪಾಗಿಸಿದೆ. ಬರ ಹಾಗೂ ಬಿಸಿಲಿನ ಬವಣೆಗೆ ಕಂಗೆಟ್ಟಿದ್ದ ಪಶುಪಕ್ಷಿಗಳಿಗೂ ನೀರಿನ ಹಾಹಾಕಾರ ಅಂತ್ಯಗೊಳಿಸಲು ಅನುವಂತೆ ಮುಂಗಾರು ಪ್ರವೇಶ ಒಂದಿಷ್ಟು ಕಡೆಗಳಲ್ಲಿ ನೀರು ಹರಿಸಿದೆ. ಇತ್ತ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರೈತರಲ್ಲಿ ಮುಂಗಾರ ಪ್ರವೇಶ ಹರುಷ ತಂದಿದ್ದು, ಹೊಲ ಗದ್ದೆಗಳತ್ತ ಹೆಜ್ಜೆ ಹಾಕಿರುವ ನೇಗಿಲಯೋಗಿ ಮುಂಗಾರು ಬಿತ್ತನೆಗೆ ಮುಂದಾಗಿದ್ದಾನೆBody:ಈ ಭಾಗದ ರೈತರ ಪಾಲಿನ ಹಣದ ಬೆಳೆಯೆಂದೆ ಪರಿಗಣಿಸಲ್ಪಡುವ ಹೆಸರು ಬಿತ್ತನೆ ಜೊತೆಗೆ ತೊಗರಿ, ಹತ್ತಿ ಬಿತ್ತನೆಗೆ ರೈತಾಪಿ ವರ್ಗ ಮುಂದಾಗಿದೆ. ಜುನ್ 5ರಿಂದ ಬದಲಾದ ವಾತಾವರಣ ರೈತರ ಸಮಾಧಾನಕ್ಕೆ ಕಾರಣವಾಗಿದೆ. ಇನ್ನು ನೆಲೆ ಹಸನು ಮಾಡುವುದು, ಗೊಬ್ಬರ ಹಾಕುವುದು, ಬೀಜಗಳ ಖರೀದಿ, ಮುಂತಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದ ರೈತರು, ತಮ್ಮ ತಮ್ಮ ಹೊಲಗದ್ದೆಗಳಲ್ಲಿ ಬಿತ್ತನೆ ನಡೆಸಿದ್ದಾರೆ.

ಇನ್ನು ಕಳೆದ ಬಾರಿ ಸರ್ಕಾರ ಸಮರ್ಪಕವಾಗಿ ಬೀಜಗಳನ್ನು ಪೂರೈಸಿರಲಿಲ್ಲ. ಜೊತೆಗೆ ಮಳೆಯೂ ಕೂಡ ಧರೆಗೆ ಇಳಿಯದೆ ರೈತರಲ್ಲಿ ಅಸಮಾಧಾನ ಮೂಡಿಸಿತ್ತು. ಆದ್ರೆ ಈ ಬಾರಿ ಮಳೆಯು ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು, ಜೊತೆಗೆ ಬಿತ್ತನೆಯ ಆರಂಭದಲ್ಲಿಯೆ ಸರ್ಕಾರ ಸಮರ್ಪಕವಾಗಿ ಬೀಜಗಳನ್ನು ಪೂರೈಸಿದೆ. ಈಗಾಗಲೇ ತೊಗರಿ, ಹೆಸರು ,ಸಜ್ಜಿ ರೈತ ಸಂಪರ್ಕ ಕೇದ್ರಕ್ಕೆ ತಲುಪಿವೆ. ಇನ್ನು ಸುರೆಪಾನ ಬೀಜ ಬಂದಿಲ್ಲ. ಅದೂ ಕೂಡ ಬರುತ್ತೆ. ಮತ್ತು ಎಲ್ಲಾ ರೈತರು ಸರ್ಕಾರ ನಿಗದಿ ಪಡಿಸಿರುವ ದರವನ್ನು ನೀಡಿ ಬೀಜಗಳನ್ನು ಕೊಂಡುಕೊಂಡು ಹೋಗುತ್ತಿದ್ದಾರೆ..ಯಾವುದೆ ಬೀಜದ ಕೊರತೆ ಕಂಡು ಬಂದಿಲ್ಲ ಅಂತ ಮುದ್ದೇಬಿಹಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಭಾಸ್ ಮೂಕಿಹಾಳ ಅವರು ಈಟಿವಿ ಭಾರತ ಮಾಧ್ಯಮಕ್ಕೆ ಮಾಹಿತಿ ನೀಡಿದರು. Conclusion:ಸೂರಜ್ ರಿಸಾಲ್ದಾರ್ ಈಟಿವಿ ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.