ವಿಜಯಪುರ: ಬೆತ್ತಲಾಗಿ ನಡು ರಸ್ತೆಯಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ, ಸ್ಥಳೀಯ ಯುವಕನೊಬ್ಬ ತನ್ನ ಅಂಗಿ ಬಿಚ್ಚಿಕೊಟ್ಟು ಮಾನವೀಯತೆ ಮೆರೆದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ನಗರದ ಸ್ಟೇಷನ್ ರಸ್ತೆಯ ಬಡೆ ಕಮಾನ್ ಹತ್ತಿರ ಸೀಲ್ಡೌನ್ ಪ್ರದೇಶದಲ್ಲಿ, ಮಾನಸಿಕ ಅಸ್ವಸ್ಥನೊಬ್ಬ ಬೆತ್ತಲೆಯಾಗಿ ಓಡಾಡುತ್ತಿದ್ದ.
ಇದನ್ನು ಗಮನಿಸಿ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆಯಲು ಪ್ರಯತ್ನಿಸಿದಾಗ, ಆತ ಓಡಲು ಪ್ರಯತ್ನಿದ. ಬಳಿಕ ಬೈಕ್ ಮೇಲೆ ಹೋಗುತ್ತಿರುವ ಯುವಕನೊಬ್ಬ ತನ್ನ ಅಂಗಿಯನ್ನು ತೆಗೆದು ಮಾನಸಿಕ ಅಸ್ವಸ್ಥನಿಗೆ ತೊಡಿಸಲು ಮುಂದಾದಾಗ, ಪ್ರೋಬೇಷನರ್ ಪಿಎಸ್ಐ ಸೋಮನಗೌಡ ಹಾಗೂ ಪೊಲೀಸ್ ಸಿಬ್ಬಂದಿ ಆತನಿಗೆ ಬಟ್ಟೆ ಹಾಕಿ ಕಳುಹಿಸಿದ್ದಾರೆ.