ವಿಜಯಪುರ: 18 ವರ್ಷದ ಯುಕನೋರ್ವ ಗಣೇಶೋತ್ಸವ ಪ್ರಯುಕ್ತ ಥರ್ಮಕೋಲ್ನಲ್ಲಿ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯ ಪುಣ್ಯಕ್ಷೇತ್ರ ಕೇದಾರನಾಥ ದೇವಸ್ಥಾನದ ಪ್ರತಿಕೃತಿ ನಿರ್ಮಿಸಿ ಗಮನ ಸೆಳೆದಿದ್ದಾರೆ.
ವೃತ್ತಿಯಲ್ಲಿ ಟೈಲರಿಂಗ್ ಮಾಡ್ತಾ ಇರುವ 18 ವರ್ಷದ ಶಂಕರ್ ಸುರೇಶ್ ಎನ್ನುವ ಯುವಕ ಗಣೇಶೋತ್ಸವ ಅಂಗವಾಗಿ ಥರ್ಮಾಕೋಲ್ನಲ್ಲಿ ಕೇದಾರ್ನಾಥ್ ದೇವಸ್ಥಾನವನ್ನು ನಿರ್ಮಿಸಿದ್ದು, 10 ಅಡಿ ಉದ್ದ 7 ಅಡಿ ಅಗಲವಿರುವ ಕಲಾಕೃತಿ ಇದಾಗಿದೆ. ನಗರದ ಶ್ರೀವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಕಳೆದ ವರ್ಷ ಗಣೇಶೋತ್ಸವಕ್ಕೆ ಸುರೇಶ್ ಥರ್ಮಕೋಲ್ನಲ್ಲಿ ಆಯೋಧ್ಯ ರಾಮ ಮಂದಿರವನ್ನು ನಿರ್ಮಿಸಿ ಜನರ ಮೆಚ್ಚುಗೆ ಪಾತ್ರರಾಗಿದ್ದರು.
ಇನ್ನು, ಈ ಕಲಾಕೃತಿ ನಿರ್ಮಾಣಕ್ಕಾಗಿ ಸುರೇಶ್ ಒಂದು ತಿಂಗಳು ಸಮಯವನ್ನು ತೆಗೆದುಕೊಂಡಿದ್ದು, ಕಲಾಕೃತಿ ನಿರ್ಮಾಣಕ್ಕೆ ದರ್ಗಾದ ಗಣೇಶ ಮಂಡಳಿ ಪದಾಧಿಕಾರಿಗಳು ಸಹಾಯ, ಸಹಕಾರ ನೀಡಿದ್ದಾಗಿ ಸುರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ಕಳೆಗಟ್ಟಿದ ಗಣೇಶ ಚತುರ್ಥಿ: ಗಣಪನ ಜೊತೆ ಗಮನ ಸೆಳೆದ ಪುನೀತ್ ರಾಜ್ಕುಮಾರ್ ಮೂರ್ತಿ