ETV Bharat / state

ಭಟ್ಕಳ ಪತ್ರಕರ್ತರಿಗೆ ಉಚಿತ ಲಾವಂಚ ಮಾಸ್ಕ್: ನೋನಿ ಗಿಡ ವಿತರಿಸಿದ ಉಸಿರಾ ಇಂಡಸ್ಟ್ರಿ ಬೆಂಗ್ರೆ - Bengre distributed mask to Bhatkal journalists

ತಾಲೂಕಿನ ಉಸಿರಾ ಇಂಡಸ್ಟ್ರಿ ಬೆಂಗ್ರೆ ಇವರ ವತಿಯಿಂದ ಕೊರೊನಾ ಲಾಕ್ ಡೌನ್ ವೇಳೆ ಕೆಲಸ ನಿರ್ವಹಿಸಿದ ವಾರಿಯರ್ಸ್ ಗಳಾದ ಭಟ್ಕಳದ ಪತ್ರಕರ್ತರಿಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ಲಾವಂಚ ಮಾಸ್ಕ್ ಹಾಗೂ ನೋನಿ ಗಿಡವನ್ನು ಉಚಿತವಾಗಿ ವಿತರಿಸಿ ಅಭಿನಂದಿಸಿದರು.

Ussira Industry Bengre distributed mask to Bhatkal journalists
ಭಟ್ಕಳ ಪತ್ರಕರ್ತರಿಗೆ ಉಚಿತ ಲಾವಂಚ ಮಾಸ್ಕ್- ನೋನಿ ಗಿಡ ವಿತರಿಸಿದ ಉಸಿರಾ ಇಂಡಸ್ಟ್ರಿ ಬೆಂಗ್ರೆ
author img

By

Published : Jun 4, 2020, 4:21 AM IST

ಭಟ್ಕಳ: ಲಾಕ್ ಡೌನ್ ವೇಳೆ ಕೆಲಸ ನಿರ್ವಹಿಸಿದ ವಾರಿಯರ್ಸ್ ಗಳಾದ ಭಟ್ಕಳದ ಪತ್ರಕರ್ತರಿಗೆ ಉಸಿರಾ ಇಂಡಸ್ಟ್ರಿ ಬೆಂಗ್ರೆ ಇವರ ವತಿಯಿಂದ ಗಿಡವನ್ನು ಉಚಿತವಾಗಿ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಉಸಿರಾ ಇಂಡಸ್ಟ್ರಿ ಬೆಂಗ್ರೆಯ ಮಾಲೀಕರು ಎಂ.ಡಿ.ಮ್ಯಾಥ್ಯೂ ‘ಕಳೆದ ಎರಡು ತಿಂಗಳಿನಿಂದ ಕೊರೊನಾ ಜಗತ್ತನ್ನೆ ಸಂಕಷ್ಟಗೀಡು ಮಾಡಿದೆ. ಈ ವೇಳೆ ಮನೆಯಲ್ಲಿಯೇ ಲಾಕ್ ಡೌನ್ ಆಗಿದ್ದ ಜನರಿಗೆ ಊರಿನ ಆಗುಹೋಗುಗಳ ಬಗ್ಗೆ ಸುದ್ದಿ, ವರದಿಯನ್ನು ನೀಡಿದ ಭಟ್ಕಳ ಪತ್ರಕರ್ತರಿಗೆ ಲಾವಂಚದಿಂದ ತಯಾರಿಸಿದ ಮಾಸ್ಕ್ ನೀಡಬೇಕೆಂದಿದ್ದ ಹಿನ್ನೆಲೆ ಇಂದು ವಿತರಿಸಿದ್ದೇವೆ. ಈಗಾಗಲೇ 2 ತಿಂಗಳಿನಿಂದ ಲಾವಂಚದಿಂದ ಮಾಸ್ಕ್ ತಯಾರಿಕೆ ಮಾಡಿದ್ದು ಅದನ್ನು ಕೆಲವರು ಖರೀದಿ ಮಾಡಿ ಬಳಕೆ ಮಾಡಿದ್ದಾರೆ. ಬಳಕೆ ಮಾಡಿದ ಜನರು ಇದರಿಂದಾದ ಉಪಯೋಗವನ್ನು ತಿಳಿಸಿದ್ದಾರೆ.

ಮೂಲದಲ್ಲಿ ಈ ಲಾವಂಚವೂ ಉತ್ತಮ ಔಷಧಿಯುಳ್ಳ ಗಿಡವಾಗಿದ್ದು, ಈ ಹಿಂದೆ ರಾಜರೆಲ್ಲರು ಈ ಲಾವಂಚದ ಬಳಸುತ್ತಿದ್ದರು. ವೈರಸ್ ತಡೆಗೆ ಲಾವಂಚ ಉತ್ತಮವಾಗಿದ್ದು ಎಲ್ಲೆಡೆ ಮಾಸ್ಕ್ ಬಳಕೆಯಾಗುತ್ತಿದೆ. ಆಯುರ್ವೇದದ ಔಷಧಿಗೂ ಈ ಲಾವಂಚ ಅನೂಕೂಲವಾಗಲಿದೆ. 18 ವರ್ಷದಿಂದ ಇದನ್ನು ಬೆಳೆಸುತ್ತಿದ್ದೇವೆ.

ನೋನಿ ಗಿಡವು ಸಹ ಬಹಳಷ್ಟು ರೋಗ ತಡೆಗೆ ಉಪಯುಕ್ತವಾಗಲಿದ್ದು ಸದ್ಯ ಭಾರತದಲ್ಲಿ ಇದರ ಬಳಕೆ ಹೆಚ್ಚಾಗುತ್ತಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ಕ್ಯಾನ್ಸರ್ ತಡೆಗೂ ಇದು ರಾಮಬಾಣವಾಗಿದೆ ಎಂದರು.

ಭಟ್ಕಳ: ಲಾಕ್ ಡೌನ್ ವೇಳೆ ಕೆಲಸ ನಿರ್ವಹಿಸಿದ ವಾರಿಯರ್ಸ್ ಗಳಾದ ಭಟ್ಕಳದ ಪತ್ರಕರ್ತರಿಗೆ ಉಸಿರಾ ಇಂಡಸ್ಟ್ರಿ ಬೆಂಗ್ರೆ ಇವರ ವತಿಯಿಂದ ಗಿಡವನ್ನು ಉಚಿತವಾಗಿ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಉಸಿರಾ ಇಂಡಸ್ಟ್ರಿ ಬೆಂಗ್ರೆಯ ಮಾಲೀಕರು ಎಂ.ಡಿ.ಮ್ಯಾಥ್ಯೂ ‘ಕಳೆದ ಎರಡು ತಿಂಗಳಿನಿಂದ ಕೊರೊನಾ ಜಗತ್ತನ್ನೆ ಸಂಕಷ್ಟಗೀಡು ಮಾಡಿದೆ. ಈ ವೇಳೆ ಮನೆಯಲ್ಲಿಯೇ ಲಾಕ್ ಡೌನ್ ಆಗಿದ್ದ ಜನರಿಗೆ ಊರಿನ ಆಗುಹೋಗುಗಳ ಬಗ್ಗೆ ಸುದ್ದಿ, ವರದಿಯನ್ನು ನೀಡಿದ ಭಟ್ಕಳ ಪತ್ರಕರ್ತರಿಗೆ ಲಾವಂಚದಿಂದ ತಯಾರಿಸಿದ ಮಾಸ್ಕ್ ನೀಡಬೇಕೆಂದಿದ್ದ ಹಿನ್ನೆಲೆ ಇಂದು ವಿತರಿಸಿದ್ದೇವೆ. ಈಗಾಗಲೇ 2 ತಿಂಗಳಿನಿಂದ ಲಾವಂಚದಿಂದ ಮಾಸ್ಕ್ ತಯಾರಿಕೆ ಮಾಡಿದ್ದು ಅದನ್ನು ಕೆಲವರು ಖರೀದಿ ಮಾಡಿ ಬಳಕೆ ಮಾಡಿದ್ದಾರೆ. ಬಳಕೆ ಮಾಡಿದ ಜನರು ಇದರಿಂದಾದ ಉಪಯೋಗವನ್ನು ತಿಳಿಸಿದ್ದಾರೆ.

ಮೂಲದಲ್ಲಿ ಈ ಲಾವಂಚವೂ ಉತ್ತಮ ಔಷಧಿಯುಳ್ಳ ಗಿಡವಾಗಿದ್ದು, ಈ ಹಿಂದೆ ರಾಜರೆಲ್ಲರು ಈ ಲಾವಂಚದ ಬಳಸುತ್ತಿದ್ದರು. ವೈರಸ್ ತಡೆಗೆ ಲಾವಂಚ ಉತ್ತಮವಾಗಿದ್ದು ಎಲ್ಲೆಡೆ ಮಾಸ್ಕ್ ಬಳಕೆಯಾಗುತ್ತಿದೆ. ಆಯುರ್ವೇದದ ಔಷಧಿಗೂ ಈ ಲಾವಂಚ ಅನೂಕೂಲವಾಗಲಿದೆ. 18 ವರ್ಷದಿಂದ ಇದನ್ನು ಬೆಳೆಸುತ್ತಿದ್ದೇವೆ.

ನೋನಿ ಗಿಡವು ಸಹ ಬಹಳಷ್ಟು ರೋಗ ತಡೆಗೆ ಉಪಯುಕ್ತವಾಗಲಿದ್ದು ಸದ್ಯ ಭಾರತದಲ್ಲಿ ಇದರ ಬಳಕೆ ಹೆಚ್ಚಾಗುತ್ತಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ. ಕ್ಯಾನ್ಸರ್ ತಡೆಗೂ ಇದು ರಾಮಬಾಣವಾಗಿದೆ ಎಂದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.