ಶಿರಸಿ: ನೇಣಿಗೆ ಶರಣಾಗಿರುವ ಸ್ಥಿತಿಯಲ್ಲಿ ವೃದ್ಧನೋರ್ವನ ಶವ ಪತ್ತೆಯಾಗಿರುವ ಘಟನೆ ಸಿದ್ದಾಪುರ ತಾಲೂಕಿನ ಕಾನಸೂರು ಸಸ್ಯಪಾಲನಾ ಕ್ಷೇತ್ರದ ಬಳಿ ನಡೆದಿದೆ.
ಸುಮಾರು 65 ರಿಂದ 70 ವರ್ಷದ ಅಪರಿಚಿತ ವೃದ್ಧನ ಶವ ಇಲ್ಲಿ ಪತ್ತೆಯಾಗಿದೆ. 15 ದಿನಗಳ ಹಿಂದೆ ಕಾನಸೂರು ಬಳಿಯ ಸಸ್ಯಪಾಲನಾ ಕ್ಷೇತ್ರದ ಎದುರಿನ ಅರಣ್ಯದಲ್ಲಿ ನೇಣು ಬಿಗಿದು ಕೊಂಡು ಮೃತ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.