ETV Bharat / state

ಲಾರಿ ಹೊರಭಾಗದಲ್ಲಿ ಮೂಟೆ ಇಟ್ಟು ಒಳಗಡೆ ಜಾನುವಾರು ಸಾಗಣೆ: ಇಬ್ಬರ ಬಂಧನ

ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 8 ಜಾನುವಾರುಗಳನ್ನು ರಕ್ಷಿಸಿ ಇಬ್ಬರನ್ನು ಹೊನ್ನಾವರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

author img

By

Published : Jun 1, 2022, 8:02 AM IST

two-arrested-in-cattle-transport-at-honnavara
ಲಾರಿ ಹೊರಭಾಗದಲ್ಲಿ ಮೂಟೆ ಇಟ್ಟು ಒಳಗಡೆ ಜಾನುವಾರು ಸಾಗಾಟ: ಇಬ್ಬರ ಬಂಧನ

ಕಾರವಾರ: ಲಾರಿ ಮೇಲ್ಭಾಗದಲ್ಲಿ ಮೂಟೆಗಳನ್ನು ಇಟ್ಟು ಸುತ್ತಲೂ ತಾಡಪತ್ರೆಯಿಂದ ಪ್ಯಾಕ್ ಮಾಡಿ ಒಳಗೆ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 8 ಜಾನುವಾರುಗಳನ್ನು ರಕ್ಷಿಸಿ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.

ಯಾವುದೇ ಅಧಿಕೃತ ಪಾಸ್ ಪರ್ಮಿಟ್ ಹೊಂದದೇ ಲಾರಿಯೊಂದನ್ನು ತಾಡಪತ್ರೆಯಲ್ಲಿ ಪ್ಯಾಕ್ ಮಾಡಿಕೊಂಡು ತೆರಳುತ್ತಿರುವಾಗ ಹೊನ್ನಾವರದಲ್ಲಿ ಪೊಲೀಸರು ತಡೆದಿದ್ದರು. ಅಲ್ಲದೇ ಲಾರಿ ಪ್ಯಾಕಿಂಗ್ ಬಗ್ಗೆ ಅನುಮಾನಗೊಂಡ ಪೊಲೀಸರು ಬಿಚ್ಚಿಸಿದ್ದಾರೆ. ಈ ವೇಳೆ 5 ಕೋಣ ಮತ್ತು 3 ಗೂಳಿಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.

two-arrested-in-cattle-transport-at-honnavara
ಲಾರಿಯಲ್ಲಿ ಜಾನುವಾರು ಸಾಗಾಟ

ಆರೋಪಿತರನ್ನು ಗುಜರಾತ್​​ನ ತಹಶೀಲ ಪಟಾನ ಜಿಲ್ಲೆಯ ಲಕ್ಷ್ಮೀಪುರದ ಅಸ್ಥಾಕಬಾಯ್, ಜೂನೈದಬಾಯ್ ಎಂದು ಗುರುತಿಸಲಾಗಿದೆ. ಜಾನುವಾರುಗಳನ್ನು ಮಹಾರಾಷ್ಟ್ರದಿಂದ ಭಟ್ಕಳ ತಾಲೂಕಿಗೆ ವಧೆ ಮಾಡುವ ಸಲುವಾಗಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು. ಹೊನ್ನಾವರದ ಗೇರುಸೋಪ್ಪದ ಸರ್ಕಲ್​ ಹತ್ತಿರ ಇರುವ ಪೊಲೀಸ್ ಚೆಕ್ ಪೋಸ್ಟ್​​ನಲ್ಲಿ ವಾಹನ ತಪಾಸಣೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 10 ಸಾವಿರಕ್ಕೆ ಗಂಡ - ಹೆಂಡ್ತಿ ಮಧ್ಯೆ ಜಗಳ.. ಕೆರೆಗೆ ಹಾರಿ ಪ್ರಾಣ ಬಿಟ್ಟ ನಾಲ್ವರು!

ಕಾರವಾರ: ಲಾರಿ ಮೇಲ್ಭಾಗದಲ್ಲಿ ಮೂಟೆಗಳನ್ನು ಇಟ್ಟು ಸುತ್ತಲೂ ತಾಡಪತ್ರೆಯಿಂದ ಪ್ಯಾಕ್ ಮಾಡಿ ಒಳಗೆ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 8 ಜಾನುವಾರುಗಳನ್ನು ರಕ್ಷಿಸಿ ಇಬ್ಬರನ್ನು ವಶಕ್ಕೆ ಪಡೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.

ಯಾವುದೇ ಅಧಿಕೃತ ಪಾಸ್ ಪರ್ಮಿಟ್ ಹೊಂದದೇ ಲಾರಿಯೊಂದನ್ನು ತಾಡಪತ್ರೆಯಲ್ಲಿ ಪ್ಯಾಕ್ ಮಾಡಿಕೊಂಡು ತೆರಳುತ್ತಿರುವಾಗ ಹೊನ್ನಾವರದಲ್ಲಿ ಪೊಲೀಸರು ತಡೆದಿದ್ದರು. ಅಲ್ಲದೇ ಲಾರಿ ಪ್ಯಾಕಿಂಗ್ ಬಗ್ಗೆ ಅನುಮಾನಗೊಂಡ ಪೊಲೀಸರು ಬಿಚ್ಚಿಸಿದ್ದಾರೆ. ಈ ವೇಳೆ 5 ಕೋಣ ಮತ್ತು 3 ಗೂಳಿಗಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.

two-arrested-in-cattle-transport-at-honnavara
ಲಾರಿಯಲ್ಲಿ ಜಾನುವಾರು ಸಾಗಾಟ

ಆರೋಪಿತರನ್ನು ಗುಜರಾತ್​​ನ ತಹಶೀಲ ಪಟಾನ ಜಿಲ್ಲೆಯ ಲಕ್ಷ್ಮೀಪುರದ ಅಸ್ಥಾಕಬಾಯ್, ಜೂನೈದಬಾಯ್ ಎಂದು ಗುರುತಿಸಲಾಗಿದೆ. ಜಾನುವಾರುಗಳನ್ನು ಮಹಾರಾಷ್ಟ್ರದಿಂದ ಭಟ್ಕಳ ತಾಲೂಕಿಗೆ ವಧೆ ಮಾಡುವ ಸಲುವಾಗಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದರು. ಹೊನ್ನಾವರದ ಗೇರುಸೋಪ್ಪದ ಸರ್ಕಲ್​ ಹತ್ತಿರ ಇರುವ ಪೊಲೀಸ್ ಚೆಕ್ ಪೋಸ್ಟ್​​ನಲ್ಲಿ ವಾಹನ ತಪಾಸಣೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಹೊನ್ನಾವರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 10 ಸಾವಿರಕ್ಕೆ ಗಂಡ - ಹೆಂಡ್ತಿ ಮಧ್ಯೆ ಜಗಳ.. ಕೆರೆಗೆ ಹಾರಿ ಪ್ರಾಣ ಬಿಟ್ಟ ನಾಲ್ವರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.