ETV Bharat / state

ಕಾರವಾರ: ಬೇಟೆಯಾಡಿದ ಜಿಂಕೆ ಸಾಂಬಾರು ಸಹಿತ ಮೂವರ ಬಂಧನ

ಜಿಂಕೆ ಕೊಂದು ಸಾಂಬಾರು ಮಾಡಿ ತಿನ್ನಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಜೋಯ್ಡಾ ತಾಲೂಕಿನ ಜಗಲ್​ಬೇಟ್ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

author img

By

Published : Jan 15, 2021, 9:56 PM IST

dsd
ಬೇಟೆಯಾಡಿದ ಜಿಂಕೆ ಸಾಂಬಾರು ಪದಾರ್ಥ ಸಹಿತ ಮೂವರ ಬಂಧನ!

ಕಾರವಾರ: ವನ್ಯಜೀವಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಬೇಟೆಯಾಡಿದ್ದ ಜಿಂಕೆ ಮಾಂಸದ ಸಾಂಬಾರು ಸಹಿತ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಜೋಯ್ಡಾ ತಾಲೂಕಿನ ಜಗಲ್​ಬೇಟ್ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಬೇಟೆಯಾಡಿದ ಜಿಂಕೆ ಸಾಂಬಾರು ಪದಾರ್ಥ ಸಹಿತ ಮೂವರ ಬಂಧನ

ಜಗಲ್​ಬೇಟ್​ನ ಕುಮ್ರಾಲ್ ಗ್ರಾಮದ ಮನೋಹರ್ ರಾಮಾ ಕದಂ, ದತ್ತಾ ರಾಮಾ‌ ಕದಂ, ಈಶ್ವರ್ ಚಂದ್ರು ಹಣಬರ್ ಬಂಧಿತ ಆರೋಪಿಗಳು. ಕುಮ್ರಾಲ್ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಜಿಂಕೆಯನ್ನು ನಾಡಾಬಂದೂಕಿನಿಂದ ಬೇಟೆಯಾಡಿದ ಆರೋಪಿಗಳು ತದನಂತರ ಅದನ್ನು ಮನೆಗೆ ತಂದು ಸಾಂಬಾರು ಮಾಡಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯ ಮಾಂಸದಿಂದ ತಯಾರಿಸಿದ ಸಾಂಬಾರು, ಜಿಂಕೆಯ ಚರ್ಮ ಹಾಗೂ ಬೇಟೆಯಾಡಲು ಬಳಸಿದ ನಾಡಾಬಂದೂಕನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರವಾರ: ವನ್ಯಜೀವಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಬೇಟೆಯಾಡಿದ್ದ ಜಿಂಕೆ ಮಾಂಸದ ಸಾಂಬಾರು ಸಹಿತ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಜೋಯ್ಡಾ ತಾಲೂಕಿನ ಜಗಲ್​ಬೇಟ್ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಬೇಟೆಯಾಡಿದ ಜಿಂಕೆ ಸಾಂಬಾರು ಪದಾರ್ಥ ಸಹಿತ ಮೂವರ ಬಂಧನ

ಜಗಲ್​ಬೇಟ್​ನ ಕುಮ್ರಾಲ್ ಗ್ರಾಮದ ಮನೋಹರ್ ರಾಮಾ ಕದಂ, ದತ್ತಾ ರಾಮಾ‌ ಕದಂ, ಈಶ್ವರ್ ಚಂದ್ರು ಹಣಬರ್ ಬಂಧಿತ ಆರೋಪಿಗಳು. ಕುಮ್ರಾಲ್ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಜಿಂಕೆಯನ್ನು ನಾಡಾಬಂದೂಕಿನಿಂದ ಬೇಟೆಯಾಡಿದ ಆರೋಪಿಗಳು ತದನಂತರ ಅದನ್ನು ಮನೆಗೆ ತಂದು ಸಾಂಬಾರು ಮಾಡಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯ ಮಾಂಸದಿಂದ ತಯಾರಿಸಿದ ಸಾಂಬಾರು, ಜಿಂಕೆಯ ಚರ್ಮ ಹಾಗೂ ಬೇಟೆಯಾಡಲು ಬಳಸಿದ ನಾಡಾಬಂದೂಕನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.