ETV Bharat / state

ಕಾರವಾರದಲ್ಲಿ ಕಾರಿನ ಮೇಲೆ ಬಿದ್ದ ಮರ... ಪವಾಡ ಸದೃಶ ರೀತಿ ಮಹಿಳೆಯರು ಪಾರು - karwat KEB office

ಕಾರವಾರ ನಗರದ ಕೆಇಬಿ ಕಚೇರಿಯ ಎದುರಿದ್ದ ಬೃಹತ್ ಅತ್ತಿ ಮರ ಮಳೆಯಿಂದಾಗಿ ಬುಡ ಸಮೇತ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನ ಮೇಲೆ ಬಿದ್ದ ಮರ
author img

By

Published : Jul 30, 2019, 8:25 PM IST

ಕಾರವಾರ: ಮರವೊಂದು ಬುಡ ಸಮೇತ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನ ಹಿಂಭಾಗ ಜಖಂಗೊಂಡಿದ್ದು, ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಪವಾಡ ಸದೃಶ ರೀತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರವಾರದ ಕೆಇಬಿ ಬಳಿ ಈ ಘಟನೆ ನಡೆದಿದೆ.

ನಗರದ ಕೆಇಬಿ ಕಚೇರಿಯ ಎದುರಿದ್ದ ಬೃಹತ್ ಅತ್ತಿಯ ಮರ ಮಳೆಯಿಂದಾಗಿ ಬುಡ ಸಮೇತ ಬಿದ್ದಿದೆ. ಅಲ್ಲೇ ಸಮೀಪ ಮಸೀದಿಯ ಬಳಿ ಹುಬ್ಬಳ್ಳಿ ಮೂಲದ ಅಬ್ದುಲ್ ರಜಾಕ್ ಸವಣೂರು ಎಂಬುವವರು ಕಾರು ನಿಲ್ಲಿಸಿದ್ದರು. ಅದರಲ್ಲಿ ಅವರ ಕುಟುಂಬದ ಇಬ್ಬರು ಮಹಿಳೆಯರಿದ್ದರು.

ಕಾರಿನ ಮೇಲೆ ಬಿದ್ದ ಮರ

ಮರ ಬಿದ್ದಾಗ ಅವರು ಕಾರಿನಲ್ಲೇ ಇದ್ದರು. ಕಾರಿನ ಹಿಂಭಾಗ ಹಾಗೂ ಬಲಭಾಗ ಸಂಪೂರ್ಣ ಜಖಂಗೊಂಡಿದೆ. ಆದ್ರೆ ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ತಹಶೀಲ್ದಾರ್ ಆರ್.ವಿ. ಗಟ್ಟಿ, ಕಂದಾಯ ಇಲಾಖೆಯ ಅಧಿಕಾರಿ ಶ್ರೀಧರ್, ಅರಣ್ಯ ಇಲಾಖೆಯ ಮೋಹನ್ ಸೇರಿದಂತೆ ಅನೇಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾರವಾರ: ಮರವೊಂದು ಬುಡ ಸಮೇತ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನ ಹಿಂಭಾಗ ಜಖಂಗೊಂಡಿದ್ದು, ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಪವಾಡ ಸದೃಶ ರೀತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರವಾರದ ಕೆಇಬಿ ಬಳಿ ಈ ಘಟನೆ ನಡೆದಿದೆ.

ನಗರದ ಕೆಇಬಿ ಕಚೇರಿಯ ಎದುರಿದ್ದ ಬೃಹತ್ ಅತ್ತಿಯ ಮರ ಮಳೆಯಿಂದಾಗಿ ಬುಡ ಸಮೇತ ಬಿದ್ದಿದೆ. ಅಲ್ಲೇ ಸಮೀಪ ಮಸೀದಿಯ ಬಳಿ ಹುಬ್ಬಳ್ಳಿ ಮೂಲದ ಅಬ್ದುಲ್ ರಜಾಕ್ ಸವಣೂರು ಎಂಬುವವರು ಕಾರು ನಿಲ್ಲಿಸಿದ್ದರು. ಅದರಲ್ಲಿ ಅವರ ಕುಟುಂಬದ ಇಬ್ಬರು ಮಹಿಳೆಯರಿದ್ದರು.

ಕಾರಿನ ಮೇಲೆ ಬಿದ್ದ ಮರ

ಮರ ಬಿದ್ದಾಗ ಅವರು ಕಾರಿನಲ್ಲೇ ಇದ್ದರು. ಕಾರಿನ ಹಿಂಭಾಗ ಹಾಗೂ ಬಲಭಾಗ ಸಂಪೂರ್ಣ ಜಖಂಗೊಂಡಿದೆ. ಆದ್ರೆ ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ತಹಶೀಲ್ದಾರ್ ಆರ್.ವಿ. ಗಟ್ಟಿ, ಕಂದಾಯ ಇಲಾಖೆಯ ಅಧಿಕಾರಿ ಶ್ರೀಧರ್, ಅರಣ್ಯ ಇಲಾಖೆಯ ಮೋಹನ್ ಸೇರಿದಂತೆ ಅನೇಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Intro:nullBody:ಕಾರವಾರ: ಮರವೊಂದು ಬುಡ ಸಮೇತ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನ ಹಿಂಭಾಗ ಜಖಂಗೊಂಡಿದ್ದು, ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಅದೃಷ್ಟವಶಾತ್ ಪವಾಡ ಸದೃಶ ಪ್ರಾಣಪಾಯದಿಂದ ಪಾರಾದ ಘಟನೆ ಕಾರವಾರದ ಕೆಇಬಿ ಬಳಿ ಇಂದು ನಡೆದಿದೆ.
ನಗರದ ಕೆಇಬಿ ಕಚೇರಿಯ ಎದುರಿದ್ದ ಬೃಹತ್ ಅತ್ತಿಯ ಮರ ಮಳೆಯಿಂದಾಗಿ ಬುಡ ಸಮೇತ ಕಿತ್ತು ಬಿದ್ದಿದೆ. ಅಲ್ಲೇ ಸಮೀಪ ಮಸೀದಿಯ ಬಳಿ ಹುಬ್ಬಳ್ಳಿ ಮೂಲದ ಅಬ್ದುಲ್ ರಜಾಕ್ ಸವಣೂರು ಎಂಬುವವರು ಕಾರು ನಿಲ್ಲಿಸಿದ್ದರು. ಅದರಲ್ಲಿ ಅವರ ಕುಟುಂಬದ ಇಬ್ಬರು ಮಹಿಳೆಯರು ಇದ್ದರು.
ಅವರು ಕಾರಿನಲ್ಲಿರುವಾಗಲೇ ಮರ ಕಾರಿನ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಇಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಕಾರಿನ ಹಿಂಭಾಗ ಹಾಗೂ ಬಲಭಾಗ ಸಂಪೂರ್ಣ ಜಖಂಗೊಂಡಿದೆ. ಸುಮಾರು 50 ಸಾವಿರ ಹಾನಿ ಉಂಟಾಗಿರುವ ಬಗ್ಗೆ ತಾಲ್ಲೂಕು ಆಡಳಿತ ಅಂದಾಜಿಸಿದೆ.
ತಹಶೀಲ್ದಾರ್ ಆರ್.ವಿ.ಗಟ್ಟಿ, ಕಂದಾಯ ಇಲಾಖೆಯ ಅಧಿಕಾರಿ ಶ್ರೀಧರ್, ಅರಣ್ಯ ಇಲಾಖೆಯ ಮೋಹನ್ ಸೇರಿದಂತೆ ಅನೇಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.