ETV Bharat / state

ಶ್ರೀಗಂಧವನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನ...

author img

By

Published : Sep 23, 2020, 8:36 PM IST

ಶ್ರೀಗಂಧವನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಘಟನೆ ಶಿರಸಿಯ ಬನವಾಸಿಯಲ್ಲಿ ನಡೆದಿದೆ.

Shirasi
ಇಬ್ಬರ ಬಂಧನ

ಶಿರಸಿ: ಶ್ರೀಗಂಧವನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಘಟನೆ ಶಿರಸಿಯ ಬನವಾಸಿಯಲ್ಲಿ ನಡೆದಿದ್ದು, ಸೊರಬದಿಂದ ಬನವಾಸಿ ಕಡೆಗೆ ಬರುತ್ತಿದ್ದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಗಂಧದ ತುಂಡುಗಳು ಪತ್ತೆಯಾಗಿದೆ.

ಶಿರಸಿ ಮೂಲದ ಮಹೇಶ್ ಗುಡಿಗಾರ(48), ಗಣೇಶ ಗುಡಿಗಾರ(50) ಬಂಧಿತ ಆರೋಪಿಗಳಾಗಿದ್ದು, ಚಿಕ್ಕಜಂಬೂರು ಮೂಲದ ಫೀರ್ ಖಾನ್ ಹಾಗೂ ಶಬಾನಾ ಫೀರ್ ಖಾನ್ ಆರೋಪಿಗಳು ಪರಾರಿಯಾಗಿದ್ದಾರೆ.

Shirasi
ಆರೋಪಿ
Shirasi
ಆರೋಪಿ

ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸಿದ ಬನವಾಸಿ ಪೊಲೀಸರು ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 6 ಗಂಧದ ತುಂಡುಗಳನ್ನು ವಶಪಡೆದಿದ್ದು, ಸಾಗಾಣಿಕೆಗೆ ಬಳಸಿದ ಸ್ವಿಫ್ಟ್ ಕಾರನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ಆರೋಪಿಗಳ ವಶಕ್ಕೆ ಪೊಲೀಸರ ಪ್ರಯತ್ನ ನಡೆದಿದ್ದು, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ: ಶ್ರೀಗಂಧವನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಘಟನೆ ಶಿರಸಿಯ ಬನವಾಸಿಯಲ್ಲಿ ನಡೆದಿದ್ದು, ಸೊರಬದಿಂದ ಬನವಾಸಿ ಕಡೆಗೆ ಬರುತ್ತಿದ್ದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಗಂಧದ ತುಂಡುಗಳು ಪತ್ತೆಯಾಗಿದೆ.

ಶಿರಸಿ ಮೂಲದ ಮಹೇಶ್ ಗುಡಿಗಾರ(48), ಗಣೇಶ ಗುಡಿಗಾರ(50) ಬಂಧಿತ ಆರೋಪಿಗಳಾಗಿದ್ದು, ಚಿಕ್ಕಜಂಬೂರು ಮೂಲದ ಫೀರ್ ಖಾನ್ ಹಾಗೂ ಶಬಾನಾ ಫೀರ್ ಖಾನ್ ಆರೋಪಿಗಳು ಪರಾರಿಯಾಗಿದ್ದಾರೆ.

Shirasi
ಆರೋಪಿ
Shirasi
ಆರೋಪಿ

ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸಿದ ಬನವಾಸಿ ಪೊಲೀಸರು ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 6 ಗಂಧದ ತುಂಡುಗಳನ್ನು ವಶಪಡೆದಿದ್ದು, ಸಾಗಾಣಿಕೆಗೆ ಬಳಸಿದ ಸ್ವಿಫ್ಟ್ ಕಾರನ್ನು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ಆರೋಪಿಗಳ ವಶಕ್ಕೆ ಪೊಲೀಸರ ಪ್ರಯತ್ನ ನಡೆದಿದ್ದು, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.